ನಾನ್ಯಾಕೆ ಬರಲಿ ಜೊತೆಗೆ
ನೀ ದೂರ ನಡೆಯುವಾಗ
ಏಕಾಂತವೆ ನಿನಗೆ ಹಿತವಾದರೆ
ಈ ಕಾಂತನ ಇರವೇಕೆ..
ನಿನದೇ ಲೋಕದಿ ನೀ ಸಂಚರಿಸಲು
ನನ್ನ ಆಸರೆಯೇಕೆ..
ನಿನ್ನಿಯನ ಪಿಸುಮಾತ ನಡುವೆ
ನನ್ನೊಲವಿನ ಮಾತೇಕೆ..
ನೀನಿಲ್ಲದ ನಾ ಒಂಟಿಯಲ್ಲ ಕೇಳೆ
ನಿನ್ನ ಕಪಟ ಜಾಹೀರಾದ ಮೇಲೆ
ನನ್ನೊಲವ ವಂಚಿತೆ ನೀನು, ಬಿಳಿ ಚೆಲುವೆ
ಕರಿ ಹೃದಯದವಳು..
biLi cheluve kari hrudayadavaLu...!!!!!!!!!! awesome line!!!chennagide....
ReplyDeletethnx vidya..
ReplyDeleteಪ್ರೇಮದ ಅಮಲಲ್ಲಿ ವಿರಹ ಮತ್ತು ಹತಾಶೆಯ ನಂಜುಣಿಸಿ ತೇಲಿಸುತ್ತದೆ ಮನಸ್ಸನ್ನು ಈ ಕವನ. ಪ್ರೇಮ ಕವನಗಳು ಹೀಗೆ ಬೆಳೆದು ನಿಲ್ಲಬೇಕು, ನವೀನತೆಯಿರಬೇಕು. ಮರ ಸುತ್ತಿ, ಕಣ್ಣೀರು ಸುರಿಸಿದೆ ಎಂಬ ಪದೇ ಪದೇ ಪುನರಾವರ್ತಿತ ಪ್ರತಿಮೆಗಳ ನಡುವೆ ಭಿನ್ನವಾಗಿ ನಿಲ್ಲಬಲ್ಲ ಪ್ರಯತ್ನ ಇದು.
ReplyDelete- ಪ್ರಸಾದ್.ಡಿ.ವಿ.