ಜೀವನವೇ ಬರಿ ಮೌನ
ನಂಬಿಕೆ ಕಳೆದೋದ ಮೇಲೆ
ಎಲ್ಲವು ಬರಿ ಗೌಣ
ಸಂಬಂಧ ಕಡಿದೋದ ಮೇಲೆ
ನಮ್ಮವರೇ ಇಂದು ಬೆನ್ನ ಹಿಂದಿನ ಚೂರಿಯಂತೆ
ನಂಬಿಕೆಯ ತಳಹದಿ ಉಳಿದಿಲ್ಲ ಇಂದು
ಬರಿ ಮೌನ... ಬರಿ ಮೌನ
ಕರ್ಕಶ ಸಮಾಜದ ಮುಂದೆ
ವಿಶ್ವಾಸದ ಎಳೆ ಕಳಚಿಕೊಂಡಿದೆ
ಬರಿ ಆಸೆಗಳ ಕೊಂಡಿ ಸಂಬಂಧವಾಗಿದೆ
ಎಲ್ಲಿಯವರೆಗಿದು ಚದುರಂಗ
ಏಕಾಂಗಿಯಾಗಿ ಮಣ್ಣ ಸೇರೋವರೆಗೆ..