Friday, March 25, 2011

ನಿಷೇಧದ ಸುಳಿಯಲ್ಲಿ ದೇಶಪ್ರೇಮಿ ಸಂಘಟನೆ..!

೨೦೦೯ ರ ಅಕ್ಟೋಬರ್ ೧೬ ರಂದು ಗೋವಾದಲ್ಲಿ ಯಾರೋ (ಸನಾತನ ಸಂಸ್ಥೆಯವರೆಂದು ಊಹಿಸಿರುವ) ಇಬ್ಬರು ಯುವಕರು ಅಷ್ಟೇನೂ ಪ್ರಭಾವಶಾಲಿಯಲ್ಲದ ಸ್ಪೋಟಕಗಳನ್ನು ಹೊತ್ತೊಯ್ಯುವಾಗ ದಾರಿ ಮದ್ಯೆ ಸಿಡಿದು ಮೃತ ಪಟ್ಟರು.. ಸತ್ತವರು ಸನಾತನ ಸಂಸ್ಥೆಯವರೆಂಬ ಕಾರಣಕ್ಕೆ ಆ ಸ್ಪೋಟದ ಹೊಣೆಯನ್ನು 'ಸನಾತನ'ದ ಮೇಲೆ ಹೇರಲಾಯಿತು...! 

ಇದಕ್ಕಾಗಿಯೇ ಕಾದು ನಿಂತಂತಿದ್ದ ಪೊಳ್ಳು ಜಾತ್ಯತೀತ 'ರಾಜಕೀಯ ಪಕ್ಷಗಳು' ಹಿಂದೂ ಸಂಘಟನೆಗಳನ್ನು ಹತ್ತಿಕ್ಕಲು ಆರಂಬಿಸಿದವು.. ಯಾರು ಯಾರೋ ಮಾಡಿದ ಸ್ಪೋಟಗಳನ್ನು ಹಿಂದೂ ಸಂಘಟನೆಗಳ ಮೇಲೆ, ಹಿಂದೂ ನಾಯಕರ ಮೇಲೆ ಕಟ್ಟುವ ಕೆಲಸಗಳು ಜೋರಾಗಿ ನಡೆದವು..! ಅದು ಎಷ್ಟರ ಮಟ್ಟಿಗೆ ಮುಂದುವರಿದಿದೆ ಎಂದರೆ ದೇಶಕ್ಕಾಗಿ, ಧರ್ಮಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದ 'ಸನಾತನ ಸಂಸ್ಥೆ'ಯನ್ನು ನಿಷೇಧಿಸುವಷ್ಟರ ಮಟ್ಟಿಗೆ..! ಇನ್ನು ಕೆಲವೇ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ 'ಸನಾತನ ಸಂಸ್ಥೆ' ನಿಷೇದಿಸಲ್ಪಡುತ್ತದೆ.. ಅ ನಂತರ ರಾಷ್ಟ್ರೀಯವಾಗಿ ನಿಷೇಧಿಸುವ ಬಗ್ಗೆ ಚರ್ಚೆಗಳಾಗುತ್ತಿವೆ.. ನಿಜಕ್ಕೂ ಆಶ್ಚರ್ಯವೆನಿಸುತ್ತದೆ ಬಾಂಧವರೇ..!
ಕೇರಳದಾದ್ಯಂತ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ 'Popular Front Of  India 'ನಂತಹ ಇನ್ನು ಹಲವಾರು ಮುಸ್ಲಿಂ ಮತಾಂಧ ದೇಶ ವಿರೋಧಿ ಸಂಘಟನೆಗಳು ರಾಜಾರೋಷವಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ದೇಶಪ್ರೇಮಿ ಸಂಘಟನೆಯೊಂದು ನಿಷೇದಿಸಲ್ಪಡುತ್ತದೆ..!

ಒಂದು ಚಿಕ್ಕ ಸ್ಪೋಟಕವನ್ನು ಹೊತ್ತೊಯ್ದಿದ್ದಕ್ಕೆ ನಿಷೇದಿಸುವುದಾದರೆ ಕಳೆದವಾರವಷ್ಟೇ ಭಾರಿ ಪ್ರಮಾಣದಲ್ಲಿ ಬಾಂಬ್ ತಯಾರಿಸುವಾಗ ಸ್ಪೋಟಗೊಂಡು ಕೇರಳದ ಪಾಪುಲರ್ ಫ್ರಂಟ್ ನ 5 ಜನ ಸತ್ತರಲ್ಲವೇ.. ಅದಕ್ಕಿಂತ ನಾಲ್ಕು ತಿಂಗಳು ಮುಂಚೆ ಶಿಕ್ಷಕನ ಕೈ ಕಡಿದ ಕೇಸಿನ ಸಂಬಂಧ ಪೊಲೀಸರು ಪಾಪುಲರ್ ಫ್ರಂಟ್ ನ ಕಚೇರಿ ಜಾಲಾಡಿದಾಗ ಭಾರಿ ಪ್ರಮಾಣದಲ್ಲಿ ಸ್ಪೋಟಕಗಳು ಪತ್ತೆಯಾದವಲ್ಲ..! ಆಗ ಯಾಕೆ ನಿಷೇಧದ ಮಾತು ಬರಲಿಲ್ಲ..?? ಹೇಳಿ ಪೊಳ್ಳು ಜಾತ್ಯತೀತವಾದಿಗಳೇ ನಿಮಗೆ ಬರೀ ರಾಜಕೀಯ ಮುಖ್ಯವೇ ಅಥವಾ ದೇಶದ ಭಧ್ರತೆ ಮುಖ್ಯವೇ..?

ಪಾಪುಲರ್ ಫ್ರಂಟ್ ಬೆಳೆದು ನಿಂತ ಇತಿಹಾಸವನ್ನು ಗಮನಿಸಿದರೆ ಇದನ್ನೆಂದೋ ನಿಷೇಧಿಸಬೇಕಿತ್ತು. ೧೯೯೮ ಫೆಬ್ರುವರಿಯ ಕೊಯಮತ್ತೂರು ಬಾಂಬ್ ಸ್ಪೋಟದ ರೂವಾರಿ ಅಬ್ದುಲ್ ನಾಸಿರ್ ಮದನಿಯ 'ಇಸ್ಲಾಮಿಕ್ ಸೇವಕ್ ಸಂಘ (ISS ), ಅಲ್-ಉಮ್ಮ, ಕೇರಳದಾದ್ಯಂತ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ NDF , ಕರ್ನಾಟಕದ KFD ಹಾಗು ನಿಷೇಧಿತ SIMI ಯ ಸಮ್ಮಿಲನವೇ 'ಪಾಪುಲರ್ ಫ್ರಂಟ್ ಆಫ್ ಇಂಡಿಯಾ'. 2003 ರ ಮುಂಬೈ ಸರಣಿ ಸ್ಪೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಬಷೀರ್ ಮೂಲತಃ ಕೇರಳದ NDF ನವನೇ.. ಪಾಪುಲರ್ ಫ್ರಂಟ್ ನ ಕಛೇರಿಗಳ ಮೇಲೆ ಇತ್ತೀಚೆಗೆ ನಡೆದ ದಾಳಿ ಸಂದರ್ಭದಲ್ಲಿ ಭಾರೀ ಪ್ರಮಾಣದ ಸ್ಪೋಟಕಗಳು ಪತ್ತೆಯಾಗಿವೆ. ಇಷ್ಟೆಲ್ಲಾ ಆಗಿದ್ದೂ ಒಂದೇ ಒಂದು ನಿಷೇಧದ ಪ್ರಶ್ನೆ ಬರಲಿಲ್ಲ..! ದೇಶಪ್ರೇಮದ ನರ ಸತ್ತು ಹೋಗಿರುವ ಈ ಜಾತ್ಯಾತೀತ (?) ರಾಜಕೀಯ ಪಕ್ಷಗಳು ಇಂತಹ ದೇಶವಿರೋಧಿ ಗುಂಪುಗಳನ್ನು ನಿಷೇಧಿಸಲು ಮುಂದಾಗುವುದಿಲ್ಲ..! ಬದಲಿಗೆ ಭಾರತ ಮಾತೆಗಾಗಿ ಮಿಡಿಯುತ್ತಿರುವ, ತನ್ನೆಲ್ಲ ಸರ್ವಸ್ವವನ್ನೂ ತಾಯಿ ಭಾರತಿಗೆ ಧಾರೆಯೆರೆದಿರುವ ಹಿಂದೂ ಸಂಘಟನೆಗಳನ್ನು ನಿಷೇಧಿಸಲು ಮುಂದಾಗುತ್ತವೆ... ಭಯೋತ್ಪಾದನೆಯ ನಿಗ್ರಹಕ್ಕೆಂದು ವಾಜಪೇಯೀ ಸರಕಾರ ತಂದಿದ್ದ ಕಟ್ಟು ನಿಟ್ಟಾದ " POTA " ಕಾಯಿದೆಯನ್ನು ವಾಪಾಸು ತೆಗೆದುಕೊಳ್ಳುತ್ತವೆ..! ನಮ್ಮ ಸರ್ವಧರ್ಮ ಸಹಿಷ್ಣು ಪ್ರಜೆಗಳಂತೂ ಅದನ್ನು ಅಷ್ಟೇ ಸಮಾದಾನ ಚಿತ್ತದಿಂದ ನೋಡಿ ಸುಮ್ಮನಾಗುತ್ತಾರೆ..!

"ಧರ್ಮೋ ರಕ್ಷತಿ ರಕ್ಷಿತಃ"

2 comments:

  1. Sogalaadi Jyaatyateetha vaadigalannu modalu Bharata dinda odisa beku. we ve to send dem to pak

    ReplyDelete
  2. MUSLIMS ARE FULLY AWARE THAT THE HINDUS BY GIVING THEREIN RELIGION A PRE DOMINATING SUPERIORITY HAS DRAGGED MUSLIMS TO BECOME MORE FANATICS, CRUEL, SEX ORIENTATION AND VIOLENT AS THE BUSINESS OF HINDUS POLITICS MAY CARRY ON. MUSLIMS THINKS THAT THEY ARE THOSE PEOPLE WHO HAS BEEN TRAPPED FOR SELF DEVASTATION AND THE ENTIRE ENVIRONMENT AND ECOLOGY CRISIS HAS BEEN CREATED BY ADHERING TO ISLAMIC VERSES WRITTEN IN QUR'AN .THUS IF COWS ARE NOT SOLD AND HINDUS MAY GENERATES COWS FUND BY GIVING THE TAX OF Rs. 250 PER MONTH FOR MILK PRODUCING COW AND Rs. 2000/ PER MONTH OF NON PRODUCTIVE COW PER MONTH , NO COWS WILL BE CUT DOWN. IT IS MONEY GENERATION ON ACCOUNTS OF YOUR COWS ARE CUT DOWN. MOHAMMAD E ISMAIL KHAN

    ReplyDelete