Friday, March 18, 2011

ಜನಪರ ಕಾಳಜಿಯಿಂದ..

ಕರ್ನಾಟಕದ ಕರಾವಳಿ ಪರಿಸರ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು ಯುಪಿಸಿಎಲ್ (ನಾಗಾರ್ಜುನ) ಉಷ್ಣ ವಿದ್ಯುತ್ ಸ್ಥಾವರಕ್ಕಿದು ಸೂಕ್ತವಲ್ಲ.. 600  ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಮೊದಲ ಹಂತದಲ್ಲೇ ಹಾರು ಬೂದಿ ಹಾಗು ಉಪ್ಪು ನೀರಿನ ಸಮಸ್ಯೆಯಿಂದ ಸುತ್ತಮುತ್ತಲ ವಾಸಿಗಳು ಕಂಗೆಟ್ಟು ಹೋಗಿದ್ದಾರೆ.. ಇದು ನಾಲ್ಕನೇ ಹಂತಕ್ಕೆ ಹೋಗುವಾಗ ಬಹುಶ ನಾಗಾರ್ಜುನದ ಆಸುಪಾಸಲ್ಲಿ ಬರುವ ದಕ್ಷಿಣ ಕನ್ನಡ ಹಾಗು ಉಡುಪಿಯ ಕೆಲ ಪ್ರದೇಶಗಳು ಜನರಿಲ್ಲದೆ  ಬಿಕೋ ಎನ್ನುವುದಂತೂ ದಿಟ..!! ಪರಿಸರ ತಜ್ಞರ ಅಭಿಪ್ರಾಯದಂತೆ ಪಶ್ಷಿಮ ಘಟ್ಟಕ್ಕೂ ಅಪಾಯವಿದ್ದು ಕರ್ನಾಟಕ ತನ್ನ ಅಮುಲ್ಯ ಪ್ರಕೃತಿ ಸಂಪತ್ತನ್ನು ಕಳೆದುಕೊಳ್ಳಲಿದೆ..!
ಜನಪ್ರತಿನಿಧಿಗಳೇ ಒಮ್ಮೆ ಉಡುಪಿಗೆ ಬಂದು ಅಲ್ಲಿನ ಜನರ ಪಾಡನ್ನೊಮ್ಮೆ ಕಣ್ಣಾರೆ ಕಂಡು ಹೋಗಿ..! ಬಜೆಟ್ ನಲ್ಲಿ ಕರಾವಳಿಗರಿಗೆ ಅನುಕೂಲವೆನಿಸುವ ಒಂದೂ ಯೋಜನೆ ಪ್ರಕಟಿಸದ ರಾಜ್ಯ ಸರ್ಕಾರ ಇತರೆಡೆಗಿನ ಉಪಯೋಗಕ್ಕಾಗಿ ಕರಾವಳಿಯನ್ನು ಬಳಸುತ್ತಿರುವುದು ಖಂಡನೀಯವಲ್ಲವೇ..?
ಬನ್ನಿ ಹೋರಾಟದಲ್ಲಿ ಕೈ ಜೋಡಿಸಿ..

1 comment:

  1. gud work ashwin...nobody is bother about nature...they need only profit...and thats why we are in this possition, any time nature can explore.

    ReplyDelete