Sunday, January 22, 2012

ಅವರು ನಿಷ್ಕ್ರಿಯರ 'ಗಾಂಧಿ' ಆಗಿರಲಿಲ್ಲ.. ಕ್ರೀಯಾಶೀಲರ 'ನೇತಾಜಿ' ಆಗಿದ್ದರು...




ಭಾರತದ ಸ್ವಾತಂತ್ರ ಸಂಗ್ರಾಮದ ಇತಿಹಾಸವನ್ನು ಹೇಳ ಹೊರಟರೆ ಅದು ಇಂದು ನಾಳೆಗೆ ಮುಗಿಯುವಂತದ್ದಲ್ಲ.. ಆ ಪ್ರವಾಹೋಪಾದಿಯ ಘಟನೆಗಳೇ ಹಲವು ಕೋಟಿ ಪುಟಗಳ ಮಹಾ ಗ್ರಂಥವಾದೀತು.! ಆ ಸಮಯದಲ್ಲಿ ಭಾರತ ಮಾತೆಯ ಬಿಡುಗಡೆಗಾಗಿ ಹೋರಾಡಿದ ಮಹಾನ್  ನಾಯಕರುಗಳೆಷ್ಟೋ, ಹೋರಾಟಗಾರರೆಷ್ಟೋ.. ಅಂತಹ ಹಲವರ ಮದ್ಯೆ ಭಿನ್ನವಾಗಿ ನಿಲ್ಲುವ, ಅಹಿಂಸಾವಾದವನ್ನು ಬಹಿರಂಗವಾಗಿ ವಿರೋಧಿಸಿದ, ಭಗವದ್ಗೀತೆಯ ತಿರುಳಾದ ದುಷ್ಟದಮನ ಶಿಷ್ಟಪಾಲನವನ್ನು ಅನುಷ್ಠಾನಕ್ಕೆ ತರಲು ಯತ್ನಿಸಿದ ಧೀಮಂತ ನಾಯಕ, ಕ್ರಾಂತಿ ಪುರುಷ ನೇತಾಜಿ ಸುಭಾಶ್ ಚಂದ್ರ ಬೋಸ್ ರ ಜನ್ಮ ದಿನವಿಂದು (ಜನವರಿ 23). 
ನೇತಾಜಿಯವರ ಹೋರಾಟದ ದಿನಗಳು ರಾಷ್ಟ್ರೀಯ ಕಾಂಗ್ರೆಸ್ ನಿಂದ ಆರಂಭವಾಯಿತು. ಆಗ ಗಾಂಧೀಜಿಯವರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿತ್ತು. ಆದರೆ ಗಾಂಧೀಜಿ ಅಹಿಂಸೆಯಲ್ಲಿ ನಂಬಿಕೆ ಇಟ್ಟವರು. ತಮ್ಮ ನಾಯಕತ್ವದ ಚಳುವಳಿಗಳಲ್ಲಿ  ಎಲ್ಲಾದರೂ ಹಿಂಸಾ ಘಟನೆಗಳು ನಡೆದರೆ ಅದನ್ನು ವಿರೋಧಿಸುತ್ತಿದ್ದರು. ಯಾಕೆಂದರೆ ಬ್ರಿಟಿಷರಿಗೆ ನೋವಾಗುವುದು ಗಾಂಧೀಜಿಯವರಿಗೆ ಇಷ್ಟವಿರಲಿಲ್ಲ. !!!! ಗಾಂಧೀಜಿಯವರ ಪ್ರತಿಯೊಂದು ಚಳುವಳಿಗಳಲ್ಲೂ ಇದು ಎದ್ದು ಕಾಣುತ್ತದೆ.! ಇದು ಬಿಸಿ ರಕ್ತದ ಯುವಕ ಸುಭಾಷ್ ಚಂದ್ರ ಬೋಸ್ ರಿಗೆ ಸಹ್ಯವಾಗಲಿಲ್ಲ. ಅದನೆಲ್ಲ ಒಪ್ಪಿಕೊಳ್ಳಲು ಅವರು ಗಾಂಧಿಯಾಗಿರಲಿಲ್ಲ..! ಅವರು ಸುಭಾಶ್ ಚಂದ್ರ ಬೋಸ್ ಆಗಿದ್ದರು..! ಕ್ರಾಂತಿ ಕ್ರಾಂತಿ ಎಂದು ಜಪಿಸುತಿದ್ದ ನೇತಾಜಿಯವರ ಮನಸ್ಸು ಈ ಗಾಂಧಿಯ ಶಿಖಂಡಿತನವನ್ನು ಒಪ್ಪಿಕೊಳ್ಳುವುದಾದರೂ ಹೇಗೆ..?! ಮುಂದೆ ಕಾಂಗ್ರೆಸ್ಸಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ್ದರೂ ಗಾಂಧೀಜಿ ಸುಭಾಷರ ಜಯವನ್ನು ಒಪ್ಪದ ಕಾರಣ ಹಾಗು ತನ್ನ ಮನಸ್ಸಿಗೆ ವಿರುದ್ಧವಾದ ಭಾವನೆ ಹೊಂದಿರುವ ಗಾಂಧೀಜಿಯೊಡನೆ ಮುಂದುವರಿಯಲು ಸಾಧ್ಯವಾಗದ ಕಾರಣ ನೇತಾಜಿ ಕಾಂಗ್ರೆಸ್ ನಿಂದ ಅನಿವಾರ್ಯವಾಗಿ ಹೊರಬಂದರು. ಅಲ್ಲಿಂದ ಸುಭಾಷರ ಕ್ರಾಂತಿಯ ಜೀವನ ಆರಂಭವಾಯಿತು. ಜೊತೆಗೆ ಭಾರತದ ಕ್ರಾಂತಿಯ ಪುಟಕ್ಕೆ ಹೊಸ ತಿರುವು ಕೂಡ..!

ಸುಭಾಷ್ ಚಂದ್ರ ಬೋಸರು ಅಪ್ರತಿಮ ದೇಶಭಕ್ತರಾಗಿದ್ದರು. ಸದಾ ಕ್ರಾಂತಿಗಾಗಿ ಬಯಸುತ್ತಿದ್ದರು. ನಿಷ್ಕ್ರಿಯತೆಯನ್ನು ಸಹಿಸುತ್ತಿರಲಿಲ್ಲ. ಮಹಾ ಜ್ಞಾನಿಗಳಾಗಿದ್ದರು. ಯಾವುದೇ ವಿಷಯವಿರಲಿ ಅಳೆದು ತೂಗಿ ತೀರ್ಮಾನ ತೆಗೆದುಕೊಳ್ಳುವ ಶಕ್ತಿ ಅವರಲ್ಲಿತ್ತು. ಆದರೆ ಗಾಂಧೀಜಿ ಇದಕ್ಕೆ ತದ್ವಿರುದ್ದರಾಗಿದ್ದರು. ಗಾಂಧೀಜಿಯ ಅಹಿಂಸಾವಾದ ಭಾರತೀಯರನ್ನು ನಿಷ್ಕ್ರಿಯರನ್ನಾಗಿ, ನಿರ್ವೀರ್ಯರನ್ನಾಗಿ, ಸೋಮಾರಿಗಳನ್ನಾಗಿ ಮಾಡಿತ್ತು.! ಗಾಂಧಿ ತಮ್ಮ ತತ್ವವನ್ನು ಜನರ ಮೇಲೆ ಸತ್ಯಾಗ್ರಹಗಳೆಂಬ ಮಾನಸಿಕ ಬಲ ಪ್ರಯೋಗಗಳ ಮೂಲಕ ಹೇರುತ್ತಿದ್ದರು. ತನ್ನ ತತ್ವವನ್ನು ಒಪ್ಪದವರನ್ನು ತನ್ನ ಗುಂಪಿನಿಂದ ಹೊರಗಿಡುತ್ತಿದ್ದರು. ಅಷ್ಟೇ ಅಲ್ಲದೆ ಅಂತಹವರನ್ನು ದೇಶವಿರೋಧಿಗಳಂತೆ ನಡೆಸಿಕೊಳ್ಳುತ್ತಿದ್ದರು. ಒಂದರ್ಥದಲ್ಲಿ ಗಾಂಧೀಜಿ ಸೋಮಾರಿಗಳ ನಾಯಕರಾಗಿದ್ದರೆ, ಸುಭಾಷ್ ಚಂದ್ರ ಬೋಸರು ಕ್ರಾಂತಿಕಾರಿಗಳ, ಉತ್ಸಾಹದ ಚಿಲುಮೆಗಳ, ಬಿಸಿ ರಕ್ತದ ಯುವ ಜನತೆಯ, ಸದಾ ಕ್ರೀಯಾಶೀಲರಾಗಿರುವವರ, ಅಪ್ರತಿಮ ದೇಶ ಭಕ್ತ ಬಂಧುಗಳ ನಾಯಕರಾಗಿದ್ದರು.




ನೇತಾಜಿಯವರು ಉಳಿದೆಲ್ಲ ನಾಯಕರುಗಳಿಗಿಂತ ಶ್ರೇಷ್ಠರಾಗಿ ಕಾಣುವುದು ಅವರ ಕ್ರೀಯಾಶೀಲತೆಗೆ. ನೇತಾಜಿ ಸುಭಾಷ್ ಚಂದ್ರ ಬೋಸರು ಕಟ್ಟಿದ 'ವಿದೇಶದಲ್ಲಿ ಸಂಘಟನೆಗೊಂಡ ಭಾರತದ ಮೊದಲ ಸೈನ್ಯ' ಎಂಬ ಹೆಗ್ಗಳಿಕೆ ಹೊಂದಿದ ( INA ) ಇಂಡಿಯನ್ ನ್ಯಾಷನಲ್ ಆರ್ಮಿಯ ಸ್ಥಾಪನೆಗಾಗಿ ನೇತಾಜಿಯವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಅದಕ್ಕಾಗಿ ಇಟಲಿ. ಜಪಾನ್, ಜರ್ಮನ್, ರಷ್ಯ ಗಳಲ್ಲಿ ಸುತ್ತಾಡಿ ಆ ದೇಶಗಳ ಸಹಾಯ ಕೋರಿ ಇಂಡಿಯನ್ ನ್ಯಾಷನಲ್ ಆರ್ಮಿ ಎಂಬ ವೀರರ ಯುವ ಸೈನ್ಯವನ್ನು ಹುಟ್ಟುಹಾಕಿದರು. ದುರ್ದೈವವಶಾತ್ ನೇತಾಜಿಯವರು 1945 ರ ವಿಮಾನ ಅವಘಡದಲ್ಲಿ ಕೊನೆಯುಸಿರೆಳೆಯದಿದ್ದರೆ(ಇನ್ನೂ ಶಂಕಾಸ್ಪದವಾಗಿಯೇ ಉಳಿದಿದೆ) ಹಾಗು 1945 ರ ವಿಶ್ವ ಮಹಾ ಯುದ್ಧದಲ್ಲಿ ಜಪಾನ್ ಇಟಲಿ ಜರ್ಮನ್ ರಾಷ್ಟ್ರಗಳು ಸೋತುಹೋಗದಿದ್ದರೆ ಬಹುಶಃ INA ಬ್ರಿಟಿಷರ ವಿರುದ್ಧ ಯುದ್ಧ ಮಾಡಿ ಭಾರತವನ್ನು 1947 ರ ಮುಂಚೆಯೇ ಸ್ವತಂತ್ರ ಗೊಳಿಸುತ್ತಿತ್ತೇನೋ..

ಇಂತಹ ಧೀಮಂತ ರಾಷ್ಟ್ರ ಪುರುಷ ನೇತಾಜಿಗೆ ಪ್ರೇರಣೆಯಾದವರದ್ದೇ ಒಂದು ತೂಕವಿದೆ. ಸುಭಾಷರು ಮಹಾಯೋಗಿ ವಿವೇಕಾನಂದರ ಭೋಧನೆಗಳಿಂದ ಪ್ರೆರಿತರಾಗಿದ್ದರು. ಹಿರಿಯ ಮುತ್ಸದ್ದಿ ಅರವಿಂದ ಘೋಷರ ಬರಹಗಳನ್ನು ತಪ್ಪದೆ ಓದುತ್ತಿದ್ದರು. ದೇಶಬಂಧು ಚಿತ್ತರಂಜನ್ ದಾಸ್ ನೇತಾಜಿಯವರ ರಾಜಕೀಯ ಗುರುಗಳಾಗಿದ್ದರು. ಇಟಲಿಯ ದೇಶಭಕ್ತ ಕ್ರಾಂತಿಕಾರಿ ಜೋಸೆಫ್ ಮೆಟೆನ್ಸಿಯ ಸಂಘಟನಾ ಚತುರತೆಯಿಂದ ಆಕರ್ಷಿತರಾಗಿದ್ದರು. ಕ್ರೂರ ಆಡಳಿತಗಾರ ಎಂದು ಕರೆಸಿಕೊಂಡ ಹಿಟ್ಲರ್ ನೊಂದಿಗೆ ನೇತಾಜಿಗೆ ಆತ್ಮೀಯ ಭಾಂಧವ್ಯವಿತ್ತು. ಶ್ರೀ ಕೃಷ್ಣ ಭೋದಧಿಸಿದ ಭಗವದ್ಗೀತೆಯ ಪ್ರಮುಖ ಸಾಲುಗಳನ್ನು ಯಾವಾಗಲೂ ಮನನ ಮಾಡಿಕೊಳ್ಳುತ್ತಿದ್ದರು. ಇವರೆಲ್ಲರ ಆದರ್ಶಗಳನ್ನು ಸ್ವತಃ ತನ್ನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದರು ಮತ್ತು ಅಳವಡಿಸಿಕೊಂಡಿದ್ದರು ಕೂಡ. ಇದೇ ಕಾರಣಕ್ಕೆ ಸುಭಾಷ್ ಚಂದ್ರ ಬೋಸ್ ಉಳಿದೆಲ್ಲ ಸ್ವಾತಂತ್ರ ಹೋರಾಟಗಾರರಿಗಿಂತ ಭಿನ್ನವಾಗಿ ಕಾಣುತ್ತಾರೆ.

ಎಲ್ಲರಿಂದಲೂ 'ನೇತಾಜಿ' ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಸುಭಾಷ್ ಚಂದ್ರ ಬೋಸರನ್ನು ಗಾಂಧೀ-ನೆಹರು ಹಾಗು ಅವರ ಹಿಂಬಾಲಕ ಕಾಂಗ್ರೆಸ್ ನಾಯಕರುಗಳು ಹೊರಗಿಡಲು ಯತ್ನಿಸಿದರು. ಅವರುಗಳಿಗೆ ನೇತಾಜಿಯವರ ಕ್ರೀಯಾಶೀಲತೆ ಹಿಡಿಸಿಲ್ಲವೇನೋ ಅಥವಾ ರಾಜಕೀಯ ಮತ್ಸರವೋ.! ಆದರೆ ಒಂದಂತೂ ಸತ್ಯ. ನಿಷ್ಕ್ರಿಯ ಹಾಗು ಪರಮ ಸ್ವಾರ್ಥಿಗಳಾದ ಗಾಂಧೀಜಿ-ನೆಹರುಗಳಿಗಿಂತ ಸುಭಾಷ್ ಚಂದ್ರ ಬೋಸರ ವ್ಯಕ್ತಿತ್ವ ಯಾವಾಗಲೂ ಎತ್ತರದ ಸ್ಥಾನದಲ್ಲಿ ಕಂಡುಬರುತ್ತದೆ. ಮಹಾತ್ಮರಲ್ಲದವರನ್ನು ಮಹಾತ್ಮ ಎಂದು ಸ್ಮರಿಸುವ ಬದಲು ಮಹಾತ್ಮ ಎಂದು ಕರೆಸಿಕೊಳ್ಳಲು ಅರ್ಹರಾಗಿರುವ 'ನೇತಾಜಿ'ಯಂತವರನ್ನು ಸ್ಮರಿಸೋಣ..!
ಕ್ರೀಯಾಶೀಲರಾಗಿ.................. ನಿಷ್ಕ್ರಿಯರಾಗದಿರಿ..................!



2 comments:

  1. ಒಳ್ಳೆ ಚಾಟಿಯೇಟಿನ ಬರಹ ಅಶ್ವಿನ್ ಅಣ್ಣ..aa

    ReplyDelete
    Replies
    1. ಈಗಿನ ಜನತೆಗೆ ಚಾಟಿಯೇಟೆ ಬೇಕಲ್ಲವೇ... :) :)

      Delete