Tuesday, May 3, 2011

'ಸುಳ್ಳಾಡುವೆಯೇಕೆ ನೀನಲ್ಲವೇ ಆಶ್ರಯದಾತ..'

ಪಾಕ್ ರಾಜಧಾನಿ ಇಸ್ಲಾಮಾಬಾದ್ ನಿಂದ ಕೇವಲ 60  km ದೂರದಲ್ಲಿ ಕುಖ್ಯಾತ ಭಯೋತ್ಪಾದಕ ಒಸಮಾ ಬಿನ್ ಲಾಡೆನ್ ಹತನಾದ ಬೆನ್ನಲ್ಲೇ ಕಳೆದ 10  ವರ್ಷಗಳಿಂದ ಲಾಡೆನ್ ನಮ್ಮ ಬಳಿ ಇಲ್ಲ ಎಂದು ವಾದಿಸುತ್ತಲೇ ಬಂದಿದ್ದ ಪಾಕ್ ತೆಪ್ಪಗಾಗಿದೆ. ಈ ಹತ್ಯೆ ೨೬/೧೧ ರ ಮುಂಬೈ ದಾಳಿಯ ಸಂಚುಕೋರರು ಪಾಕ್ ನಲ್ಲೆ ಇದ್ದಾರೆ ಎನ್ನುವ ಭಾರತದ ವಾದಕ್ಕೂ ಪುಷ್ಠಿ ನೀಡಿದೆ. ವಾರಕ್ಕೆರಡರಂತೆ ತನ್ನದೇ ನೆಲದಲ್ಲಿ ಬಾಂಬ್ ಸ್ಪೋಟವಾಗಿ ತಾನೇ ಬೆಳೆಸಿದ ಭಯೋತ್ಪಾದನೆಗೆ ಈಗ ಸ್ವತಃ ತಾನೇ ಬಲಿಯಾಗುತ್ತಿದ್ದರೂ ಇನ್ನೂ ಪಾಕ್ ತನ್ನಲ್ಲಿರುವ ಭಯೋತ್ಪಾದಕರನ್ನು ರಕ್ಷಿಸಲು ಹವಣಿಸುತ್ತಿರುವುದು ವಿಪರ್ಯಾಸ..!

ಲಾಡೆನ್ ನ ಅಡಗುತಾಣವಿದ್ದುದು ಪಾಕ್ ಸೇನಾ ನೆಲೆಯ ಆವರಣಕ್ಕೆ ತಾಗಿಕೊಂಡೇ ಎಂಬುದು ಮತ್ತೊಂದು ಆಶ್ಚರ್ಯಕರ ಸಂಗತಿ. ಅದು ಪಾಕ್ ರಾಜಧಾನಿ ಇಸ್ಲಾಮಾಬಾದ್ ನಿಂದ ಕೇವಲ 60 km ದೂರದಲ್ಲಿ..! ಈ ಅಂಶಗಳನ್ನು ಗಮನಿಸುವಾಗ ಪಾಕ್ ತಾನಾಗಿಯೇ ಲಾಡೆನ್ ಗೆ ಆಶ್ರಯ ಕಲ್ಪಿಸಿತ್ತೇ ಎಂದು ಅನುಮಾನ ಮೂಡುವುದು ಸಹಜ. ಲಾಡೆನ್ ತನ್ನ ಬಳಿ ಇಲ್ಲ ಎಂದೇ ಹೇಳಿಕೊಂಡು ಬರುತ್ತಿದ್ದ ಪಾಕ್ ಈಗೇನು ಹೇಳುತ್ತದೆ..? ಲಾಡೆನ್ ಸಾವಿನ ನಂತರ ಒಂದೇ ಒಂದು ಹೇಳಿಕೆ ನೀಡದ ಪಾಕ್ ಅಧ್ಯಕ್ಷ ಆಸೀಫ್ ಆಲಿ ಜರ್ದಾರಿಯ ಮೌನದ ಅರ್ಥವಾದರೂ ಏನು..?

1993 ರ ಮುಂಬೈ ಸರಣಿ ಸ್ಪೋಟದ ರೂವಾರಿ ದಾವೂದ್ ಇಬ್ರಾಹಿಮ್, 2001 ರ ಸಂಸತ್ ದಾಳಿ ಸೂತ್ರದಾರ ಜೈಶ್ ನ ಸ್ಥಾಪಕ ಮಸೂದ್ ಅಜರ್, 2008 ರ ಮುಂಬೈ ದಾಳಿಯ ಸಂಚುಕೋರರಾದ ಲಷ್ಕರ್ ಈ ತೊಇಬಾದ  ಹಫಿಜ್ ಸಯೀದ್ ಹಾಗು ಸಾಜಿದ್ ಮೀರ್ ಪಾಕ್ ನಲ್ಲೇ ಇದ್ದಾರೆ ಎನ್ನುವುದಕ್ಕೆ ಭಾರತ ಖಚಿತವಾದ ಪುರಾವೆಗಳನ್ನು ನೀಡಿದ್ದರೂ ಪಾಕ್ ಮಾತ್ರ ಬಾಲಿಶವಾಗಿ ಹೆಣ್ಣಿಗನಂತೆ ವರ್ತಿಸುತ್ತಿದೆ.

ಅಮೇರಿಕಾದ Counter Terrorism ನ ಖಚಿತ ಮೂಲಗಳ ಪ್ರಕಾರ ಪಾಕ್ ನಲ್ಲಿ ಅಡಗಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕ ನಾಯಕರುಗಳ ಪಟ್ಟಿಯತ್ತ ಒಮ್ಮೆ ಕಣ್ಣು ಹಾಯಿಸಿ.. ಪಾಕ್ ಭಯೋತ್ಪಾದಕರ ಖಣಜ ಎನ್ನುವುದಕ್ಕೆ ಇದೇ ಸಾಕ್ಷಿ..!
* ಲಾಡೆನ್ ನಂತರ ಅಲ್ ಕೈದಾದ ನೇತೃತ್ವ ವಹಿಸಿರುವ ಆಯ್ಮಾನ್ ಅಲ್ ಜವಾಹಿರಿ.
* ಜೈಶ್ ಎ ಮೊಹಮ್ಮದ್ ನ ಸ್ಥಾಪಕ ಮೌಲಾನ ಮಸೂದ್ ಅಜರ್.
* ಭೂಗತ ಪಾತಕಿ, ಡ್ರಗ್ ಸ್ಮಗ್ಲರ್, ಮುಸ್ಲಿಂ ಮಾಫಿಯಾ ದೊರೆ ದಾವೂದ್ ಇಬ್ರಾಹಿಮ್.
* ಭೂಗತ ಪಾತಕಿ ಮುಶ್ತಾಕ್ ಟೈಗೆರ್ ಮೆಮೊನ್.
* ಹರ್ಕತ್ ಉಲ್ ಮುಜಾಹಿದ್ದೀನ್ ನ ನಾಯಕ ಮೌಲಾನ ಫಾಜ್ಲೀರ್ ರೆಹಮಾನ್.
* ಹುಜಿ (ಹರ್ಕತ್ ಉಲ್ ಜಿಹಾದ್ ಇಸ್ಲಾಮಿ) ಯ ಮುಖ್ಯ ಕಮಾಂಡರ್ ಕ್ವಾರಿ ಸೈಫುಲ್ಲ ಅಖ್ತರ್.
* ತಾಲಿಬಾನ್ ಮುಖ್ಯಸ್ಥ ಮುಲ್ಲಾ ಒಮರ್.
* ಜಮಿಎತ್ ಅಹ್ಲೇ ಹದಿಸ್ ನ ಮುಲ್ಲಾ ಸಾಜಿದ್ ಮಿರ್.
* ಮರ್ಕಜ್ ಉದ್ ದವ (MUD) ದ ಅಮೀರ್ ಹಮ್ಜ.
* ಹುರ್ರಿಯತ್ ನ ಗುಲಾಂ ಮೊಹಮ್ಮದ್ ಸಫಿ.
* ಜಮಿಯತ್  ಉಲ್ ಮುಜಾಹಿದ್ದೀನ್ ನ ಅಮೀರ್ ಅಬ್ದುಲ್ಲ.
* ತೆಹರಿಕ್ ಉಲ್ ಮುಜಾಹಿದ್ದೀನ್ ನ ಶೇಖ್ ಜಮಿತುರ್ ರೆಹಮಾನ್.
* ಮುತ್ತಹಿದ ಮಜಿಸ್ ಎ ಅಮಲ್ (MMA) ನ ಮೌಲಾನ ಮೊಹಮ್ಮದ್ ಇಶಾಕ್.
* ಜಮಾತ್ ಎ ಇಸ್ಲಾಮಿ ಯ ಕಾಜಿ ಹುಸ್ಸೈನ್ ಅಹ್ಮೆದ್.
* ISI ನ ಮಾಜಿ ಮುಖ್ಯಸ್ಥ, ಒಸಮಾ ಬಿನ್ ಲಾಡೆನ್ ನ ನಿಕಟವರ್ತಿ ಹಮಿದ್ ಗುಲ್.
* ಜಿಹಾದ್ ಚಟುವಟಿಕೆಗೆ ನೆರವೀಯುತ್ತಿರುವ ಅಲ್ಲಾ ಬುಕ್ಶ್ ಬ್ರೋಹಿ.
* ಎಂಎಂಎ ಇಸ್ಲಾಮಿಸ್ಟ್ ನಾಯಕ ಮೌಲಾನ ಸಾಮಿ ಉಲ್ ಹಕ್.
* ತೆಹ್ರೀಕ್ ನಿಫಾಜ್ ಎ ಶರಿಯತ್  ಮೊಹಮ್ಮದ್ ನ ಮುಖಸ್ಥ ಮೌಲಾನ ಮೊಹಮ್ಮದ್ ಆಲಂ.
* ಜಮ್ಮತ್ ಉಲೇಮ ಎ ಇಸ್ಲಾಂ ಇದರ ಪ್ರಧಾನ ಸೆಕ್ರೆಟರಿ ಜನರಲ್ ಹಫಿಜ್ ಹುಸೇನ್ ಅಹ್ಮದ್.
* ಜಮಾತ್ ಉಲೇಮ ಎ ಇಸ್ಲಾಮ್ಮ್ ನ ದಂಡನಾಯಕ ಸಮಿಯುಲ್ ಹಕ್.
* ಜಮಾತ್ ಎ ಇಸ್ಲಾಮಿಯ ಮುಜ್ಜ್ಯಫಾರಾಬಾದ್ ಕಮಾಂಡರ್ ಶೇಕ್ ಅಕುಲರ್ ರೆಹಮಾನ್.
* ಸುನ್ನಿ ಗ್ರೂಪ್ ಸಿಪಃ ಎ ಸಾಹಬ ಪಾಕಿಸ್ತಾನ್ ನ ಮುಖ್ಯಸ್ಥ ಹಾಗು ಪಾಕ್ ಅಸೆಂಬ್ಲಿಯ ಸದಸ್ಯ ಮೌಲಾನ ಅಜಮ್ ತಾರಿಕ್.
* ಲಷ್ಕರ್ ಎ ತೊಇಬದ ಪಂಜಾಬ್ ಪ್ರಾಂತ್ಯದ ನಾಯಕ ಹಫಿಜ್ ಅಬ್ದುಲ್ ಸಲಾಂ.

ಇವು ಭಯೋತ್ಪಾದಕ ಸಂಘಟನೆಗಳ ನಾಯಕರುಗಳ ಹೆಸರುಗಳಷ್ಟೇ..! ಇನ್ನೂ ಗಮನಕ್ಕೆ ಬರದ ಮರಿ ನಾಯಕರುಗಳು ಪಾಕಿಸ್ತಾನದ ಗಲ್ಲಿ ಗಲ್ಲಿಗಳಲ್ಲಿ ರಾಜಾರೋಷವಾಗಿ ತಿರುಗಾಡಿಕೊಂಡಿದ್ದಾರೆ. ಅವರಲ್ಲಿ ಕೆಲವರು ಇತ್ತೀಚಿಗೆ ಪಾಕ್ ನ ಮಂತ್ರಿಗಳ ಜತೆ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದನ್ನು ನೀವು ಮಾಧ್ಯಮಗಳಲ್ಲಿ ನೋಡಿರಬಹುದು. ಇಷ್ಟೆಲ್ಲಾ ಇರುವಾಗ ಲಾಡೆನ್ ಹತ್ಯೆಯ ನಂತರ ಪಾಕ್ ವಿದೇಶಾಂಗ ವಕ್ತಾರೆ ತಹ್ಮೀನ ಜುನೆಜ್ ರ "...ನಮ್ಮ ನೆಲದಲ್ಲಿ ಉಗ್ರ ಚಟುವಟಿಕೆಗಳಿಗೆ ಆಸ್ಪದವಿಲ್ಲ" ಎಂಬ ಹೇಳಿಕೆ ಹಾಸ್ಯಾಸ್ಪದ ಎನಿಸದೇ..? ಇನ್ನಾದರೂ ಪಾಕ್ ಗೆ ಬುದ್ದಿ ಬಂದು ಭಯೋತ್ಪಾದನೆ ವಿರುದ್ದ ಹೋರಾಟ ನಿರೀಕ್ಷಿಸಬಹುದೇ..? ಅಥವಾ ಅಮೆರಿಕದಿಂದ Counter Terrorism ನಡಿ ದಾಳಿಗೊಳಗಾಗಲು ಇಚ್ಚೆಯೇ..??!


ಕೊನೆ ಕುಹಕ : 
ಭಾರತದ ಗೃಹ ಸಚಿವ ಪಿ. ಚಿದಂಬರಂ ಭಾರತಕ್ಕೆ ಬೇಕಾಗಿರುವ 1993 / 2001 / 2008 ದಾಳಿಯ ಪಾತಕಿಗಳನ್ನು ಹಸ್ತಾಂತರಿಸುವಂತೆ ಪಾಕ್ ಗೆ ಕೇಳಿಕೊಂಡಿದ್ದಾರೆ. ಖಂಡಿತ ಆ ಪಾತಕಿಗಳನ್ನು ಭಾರತದಲ್ಲಿಯೇ ವಿಚಾರಣೆ ನಡೆಸಿ ಶಿಕ್ಷೆಗೊಳಪಡಿಸಬೇಕು. ಆದರೆ ಶಿಕ್ಷೆ ಜಾರಿಯಾಗಲು ಮುಸ್ಲಿಂ ಕೋಮುವಾದಿ ಕಾಂಗ್ರೆಸ್ ಸರ್ಕಾರ ಒಪ್ಪುವುದೇ..? ಭಾರತ ಬೆಚ್ಚಿ ಬೀಳುವಂತೆ ಮಾಡಿದ್ದ  ಡಿಸೆಂಬರ್ ೧೩, ೨೦೦೧ರ ಸಂಸತ್ ದಾಳಿಯ ಆರೋಪಿ ಆಫ್ಜ್ಯಲ್ ಗುರು, ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ ೨೬/೧೧/೨೦೦೮ ರ ಮುಂಬೈ ದಾಳಿಯ ಪಾತಕಿ ಕಸಬ್ ಗೆ ನ್ಯಾಯಾಲಯದಲ್ಲಿ ಗಲ್ಲು ಜಾರಿಯಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಕಾಂಗ್ರೆಸ್ ಹಿಂದೇಟು ಹಾಕುತ್ತಲೇ ಬಂದಿದೆ. ಆ ಇಬ್ಬರೂ ಯಾವುದೇ ಶ್ರೀಮಂತನಿಗೆ ಕಡಿಮೆಯಿಲ್ಲದಂತೆ ಜೈಲಿನಲ್ಲಿಯೇ ರಾಜಾತಿಥ್ಯ ಪಡೆಯುತ್ತಿದ್ದಾರೆ. ಇನ್ನೂ ಭವಿಷ್ಯದಲ್ಲಿ ಪಾಕ್ ಭಾರತದ ಮೋಸ್ಟ್ ವಾಂಟೆಡ್ ಗಳನ್ನು ಹಸ್ತಾಂತರಿಸಿದರೂ ಅವರಿಗೂ ಇದೇ ಆತಿಥ್ಯ ಸಿಗಲಿದೆ. ಯಾರಿಗುಂಟು ಯಾರಿಗಿಲ್ಲ...! ಆ ಪಾತಕಿಗಳಿಗೆ ಪಾಕಿಸ್ತಾನದ ಗುಡ್ಡಗಾಡುಗಳಲ್ಲಿ ತಲೆ ತಪ್ಪಿಸಿ ಅಲೆಯೋ ಬದಲು ತಮ್ಮ ಶತ್ರು ರಾಷ್ಟ್ರದ ಜೈಲಿನಲ್ಲಿ ರಾಜಾತಿಥ್ಯ ಪಡೆಯುವುದೇ ಮೇಲು ಎಂದು ಅನಿಸದಿರದು..!!!

No comments:

Post a Comment