Tuesday, August 14, 2012

ಅಖಂಡ ಭಾರತ ಸಂಕಲ್ಪ ದಿನದ ಔಚಿತ್ಯವೇನು...



ಇಂದು (ಆಗಸ್ಟ್ 14) ಸಂಘಪರಿವಾರಾದಿಯಾಗಿ ಕೆಲ ಸಂಘಟನೆಗಳು 'ಅಖಂಡ ಭಾರತ ಸಂಕಲ್ಪ ದಿನ'ವೆಂದು ಆಚರಿಸುತ್ತಾರೆ. ಪ್ರಾಚೀನ ಭಾರತದ ಭಾಗಗಳಾಗಿದ್ದ ಈಗ ಸ್ವತಂತ್ರ ದೇಶಗಳಾಗಿರುವ ಇಂದಿನ ಪಾಕಿಸ್ತಾನ, ಬಾಂಗ್ಲಾ (ಹಾಗು ಇತರ) ಗಳನ್ನು ಮತ್ತೆ ಭಾರತದೊಂದಿಗೆ ಸೇರಿಸಲು ಇಂದು ಪ್ರತಿಜ್ಞೆಗೈಯಲಾಗುತ್ತದೆ. ಈ ಆಚರಣೆ ಮೇಲ್ನೋಟಕ್ಕೆ ದೇಶಭಕ್ತಿಯ ಪ್ರತೀಕವೆಂಬಂತೆ ಕಂಡರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗುವ ವಿಷಯವೇ ಎಂಬ ಪ್ರಶ್ನೆ ಬರುವುದು ಸುಳ್ಳಲ್ಲ. ಧರ್ಮ ದ್ವೇಷದ ಆಧಾರದ ಮೇಲೆ ವಿಭಜನೆಯಾಗಿರುವ ಈ ದೇಶಗಳು ಮತ್ತೆ ಭಾರತದೊಂದಿಗೆ ಸೇರುವುದು ಖಂಡಿತ ಅಸಂಭವ... ಒಂದು ವೇಳೆ ಹಾಗೂ ಹೀಗೂ ಅಖಂಡ ಭಾರತ ನಿರ್ಮಾಣವಾದರೆ ಭಾರತದ ಆಂತರಿಕ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಊಹಿಸಲೇ ಕಷ್ಟವಾಗುತ್ತದೆ.

ಭಾರತ-ಪಾಕ್ ಹಾಗು ಭಾರತ-ಬಾಂಗ್ಲಾ ವಿಭಜನೆಯಾದಂದಿನಿಂದ ಇಂದಿನವರೆಗೂ ಇವೆರಡೂ ದೇಶಗಳಲ್ಲಿ ಹಿಂದೂಗಳ ಮೇಲಿನ ಹಲ್ಲೆ, ಕೊಲೆ, ಅತ್ಯಾಚಾರ, ಬಲವಂತದ ಮತಾಂತರಗಳು ನಿಂತಿಲ್ಲ.. ಅಲ್ಲಿರುವ ಬೆರಳೆಣಿಕೆಯ ಹಿಂದುಗಳಿಗೆ ರಕ್ಷಣೆಯಿಲ್ಲದಾಗಿದೆ.  ಅಲ್ಲಿ ಹಿಂದೂಗಳ ಮೇಲೆ ನಡೆಯುವ ಎಲ್ಲಾ ಅತ್ಯಾಚಾರ, ಹತ್ಯಾಕಾಂಡಗಳು ಹೊರಗಿನ ಪ್ರಪಂಚಕ್ಕೆ ತಿಳಿಯುವುದಿಲ್ಲ.. ಕೆಲವೇ ಕೆಲವು ಘಟನೆಗಳು ಮಾತ್ರ ಮಾಧ್ಯಮದ ಮೂಲಕ ತಿಳಿಯುತ್ತದೆ. ಅಪ್ರಾಪ್ತ ಹಿಂದೂ ಬಾಲಕಿಯರನ್ನು ಅಪಹರಿಸಿ ಅತ್ಯಾಚಾರಗೈದು ಮುಸ್ಲಿಂ ಆಗಿ ಮತಾಂತರಿಸಲಾಗುತ್ತಿದೆ. ಹಿಂದೂ ಜನರನ್ನು ಅಟ್ಟಾಡಿಸಿಕೊಂಡು ಹತ್ಯೆಗೈಯಲಾಗುತ್ತಿದೆ. ಬಲವಂತದ ಸುನ್ನತ್-ಮತಾಂತರಗಳು ಎಗ್ಗಿಲ್ಲದೆ ನಡೆಯುತ್ತಿದೆ... ಅಲ್ಲಿನ ಹಿಂದೂ ದೇಗುಲಗಳು ಧರೆಗುರುಳುತ್ತಿವೆ, ಕೆಲ ಕಡೆ ಹಿಂದುಗಳನ್ನು ಅವರ ಮನೆಯಿಂದಲೇ ಹೊರಗಟ್ಟಲಾಗುತ್ತಿದೆ. ಈ ಎಲ್ಲಾ ಆಕ್ರಮಣಗಳಿಗೆ ಹೆದರಿ ಈಗಾಗಲೇ ಪಾಕಿಸ್ತಾನದಿಂದ ಭಾರತದತ್ತ ವಲಸೆ ಬರುತ್ತಿರುವ ಹಿಂದೂ ಕುಟುಂಬಗಳ ಬಗ್ಗೆ ಕೇಳಿರುತ್ತೀರಿ. ಪಾಪ ಅವರ ಸ್ಥಿತಿ ಅತ್ತ ಪಾಕಿಸ್ತಾನವೂ ಇಲ್ಲ ಇತ್ತ ಭಾರತವೂ ಇಲ್ಲವೆಂಬಂತಾಗಿದೆ.


ಅದೇ ರೀತಿ ಬಾಂಗ್ಲಾದಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ.. ಅಲ್ಲಿನ ಮುಸ್ಲಿಂ ನುಸುಳುಕೋರರು ಈಗಾಗಲೇ ಭಾರತಕ್ಕೆ ಅಕ್ರಮ ವಲಸೆ ಬಂದು ಭಾರತದ ಈಶಾನ್ಯ ರಾಜ್ಯಗಳಲ್ಲಿ ಹಿಂದೂಗಳ ಮೇಲೆ ಮಾಡುತ್ತಿರುವ ಆಕ್ರಮಣಗಳು, ಅವರ ಧಾಳಿಯಿಂದ ತತ್ತರಿಸಿ ನೆಲೆ ಕಳೆದುಕೊಂಡಿರುವ ಅಲ್ಲಿನ ಹಿಂದೂಗಳ ಪರಿಸ್ಥಿತಿ ಇವೆಲ್ಲ ಎಂತಹ ಕಟು ಹೃದಯಿಯ ಕಣ್ಣಲ್ಲೂ ನೀರು ತರಿಸುತ್ತವೆ. ಪ್ರಸ್ತುತ ಅಸ್ಸಾಂ ನಲ್ಲಿ ನಡೆಯುತ್ತಿರುವ ಹಿಂದೂಗಳ ಮಾರಣಹೋಮವೇ ಇದಕ್ಕೆ ಜ್ವಲಂತ ಸಾಕ್ಷಿ. ಅಲ್ಲಿನ ಹೆಚ್ಚಿನ ಹಿಂದೂ ಬೋಡೊ ಬುಡಕಟ್ಟು ಜನಾಂಗದವರು ಬಾಂಗ್ಲಾದ ಅಕ್ರಮ ವಲಸಿಗ ಮುಸ್ಲಿಮರಿಗಾಗಿ ತಮ್ಮ ಮನೆ ಮಠವನ್ನೆಲ್ಲ ಕಳೆದುಕೊಂಡಿದ್ದಾರೆ. ಅಲ್ಲಿನ ಹಿಂದೂ ಹೆಣ್ಣುಮಕ್ಕಳ ದಯನೀಯ ಸ್ಥಿತಿಯನ್ನಂತೂ ಯಾವ ಪದಗಳಿಂದ ಹೇಳುವುದು ಎಂದೇ ತೋಚುತ್ತಿಲ್ಲ. 



ಹೀಗಿರುವಾಗ ಅವೆರಡೂ ದೇಶಗಳು ಮತ್ತೆ ಭಾರತದೊಂದಿಗೆ ವಿಲೀನಗೊಂಡು 'ಅಖಂಡ ಭಾರತ' ನಿರ್ಮಾಣವಾದರೆ ಅವೆರಡೂ ದೇಶಗಳ ಮುಸ್ಲಿಂಮರು ನಮ್ಮ ಹಿಂದೂಗಳ ಮೇಲೆ ಯಾವ ರೀತಿಯಲ್ಲಿ ಆಕ್ರಮಣಗೈಯಬಹುದು ಎಂಬುದನ್ನು ಒಂದು ಕ್ಷಣ ಊಹಿಸಿ. ಭಾರತದಲ್ಲಿ ಈಗಾಗಲೇ ಸರಿ ಸುಮಾರು 18 ಶೇಕಡಾದಷ್ಟಿರುವ ಮುಸ್ಲಿಮರು ಇಲ್ಲಿನ ಹಿಂದೂಗಳ ಮೇಲೆ ಮಾಡುತ್ತಿರುವ ದೌರ್ಜನ್ಯಗಳನ್ನು ಎಲ್ಲಾ ಕಡೆಗಳಲ್ಲಿ ತಡೆಯಲಾಗುತ್ತಿಲ್ಲ. ಹಾಗಿರುವಾಗ ಇಲ್ಲಿನ 18  ಶೇಕಡಾ, ಪಾಕ್-ಬಾಂಗ್ಲಾದ ಮುಸ್ಲಿಮರೆಲ್ಲ ಸೇರಿ ಸುಮಾರು 40-45 ಶೇಕಡಾವಾಗುವಾಗ ಇಲ್ಲಿನ ಹಿಂದೂಗಳ ಮೇಲೆ ಆಕ್ರಮಣವಾಗದಿರುತ್ತದೆಯೇ. ಮುಸ್ಲಿಮರ ಜನಸಂಖ್ಯೆ 40 ರಿಂದ 45 ಶೇಕಡಾದಷ್ಟಾಗುವಾಗ ಚುನಾವಣೆಗಳಲೆಲ್ಲ ಮುಸ್ಲಿಂ ಲೀಗ್, ಜಮಾತೆ ಇಸ್ಲಾಂ ನಂತಹ ಮುಸ್ಲಿಂ ಮೂಲಭೂತವಾದಿ ಪಕ್ಷಗಳು ಅಧಿಕಾರಕ್ಕೆ ಬರುವುದಿಲ್ಲವೇ? ಕ್ರಮೇಣ 45 ಶೇಕಡಾದಿಂದ 50 , ನಂತರ 55 , ಮುಂದೆ 60 ಹೀಗೆ ಮುಸ್ಲಿಮರ ಜನಸಂಖ್ಯೆ ಭಾರತದಲ್ಲಿ ಹೆಚ್ಚಳವಾಗುತ್ತ ಹೋಗುವಾಗ ಹಿಂದೂಗಳ ಸ್ವಂತ ನಾಡಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗುತ್ತಾರಲ್ಲ!!! ಆಗಲೂ ನಾವು ಅಖಂಡ ಭಾರತವನ್ನು ಹೊಂದಬೇಕು ಎಂಬ ಆಸೆ ಇರುವುದೇ...?!


ಇಂದು 'ಅಖಂಡ ಭಾರತ ಸಂಕಲ್ಪ ದಿನ'ವೆಂದು ಆಚರಿಸುವವರಿಗೆ ಅದರ ಉದ್ಧೇಶ ಹಾಗು ಅದರಿಂದಾಗುವ ಪರಿಣಾಮಗಳ ಅರಿವಿರಲಿಕ್ಕಿಲ್ಲ. ಯಾವುದೇ ಆಚರಣೆಗಳನ್ನು ಆಚರಣೆ ಮಾಡಬೇಕೆಂದು ಆಚರಿಸುವುದಕಿಂತ ಅದರ ಪರಿಣಾಮಗಳನ್ನು ಅವಲೋಕಿಸಿ ಆಚರಿಸಿದರೆ ಉತ್ತಮ ಅಲ್ಲವೇ...


ಜೈ ಭವಾನಿ...



1 comment:

  1. ಇರುವ ಭಾರತವನ್ನೇ ಸರಿಯಾಗಿ ಉಳಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಅಖಂಡ ಭಾರತವಾದರೆ ಅದರಿಂದ ದುಷ್ಪರಿಣಾಮ ಇದೆ ಅನ್ನುವುದು ನಿಜ. ಅದರ ಕಣಸು ಕಾಣುತ್ತಿರುವವರು ಮೊದಲು ಇಲ್ಲಿನ ಭ್ರಷ್ಟಾಚಾರ, ಜಾತಿವಾದಗಳನ್ನು ತೊಲಗಿಸಲು ಪ್ರಯತ್ನಿಸಲಿ.

    ReplyDelete