Tuesday, August 14, 2012

ಅಖಂಡ ಭಾರತ ಸಂಕಲ್ಪ ದಿನದ ಔಚಿತ್ಯವೇನು...



ಇಂದು (ಆಗಸ್ಟ್ 14) ಸಂಘಪರಿವಾರಾದಿಯಾಗಿ ಕೆಲ ಸಂಘಟನೆಗಳು 'ಅಖಂಡ ಭಾರತ ಸಂಕಲ್ಪ ದಿನ'ವೆಂದು ಆಚರಿಸುತ್ತಾರೆ. ಪ್ರಾಚೀನ ಭಾರತದ ಭಾಗಗಳಾಗಿದ್ದ ಈಗ ಸ್ವತಂತ್ರ ದೇಶಗಳಾಗಿರುವ ಇಂದಿನ ಪಾಕಿಸ್ತಾನ, ಬಾಂಗ್ಲಾ (ಹಾಗು ಇತರ) ಗಳನ್ನು ಮತ್ತೆ ಭಾರತದೊಂದಿಗೆ ಸೇರಿಸಲು ಇಂದು ಪ್ರತಿಜ್ಞೆಗೈಯಲಾಗುತ್ತದೆ. ಈ ಆಚರಣೆ ಮೇಲ್ನೋಟಕ್ಕೆ ದೇಶಭಕ್ತಿಯ ಪ್ರತೀಕವೆಂಬಂತೆ ಕಂಡರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗುವ ವಿಷಯವೇ ಎಂಬ ಪ್ರಶ್ನೆ ಬರುವುದು ಸುಳ್ಳಲ್ಲ. ಧರ್ಮ ದ್ವೇಷದ ಆಧಾರದ ಮೇಲೆ ವಿಭಜನೆಯಾಗಿರುವ ಈ ದೇಶಗಳು ಮತ್ತೆ ಭಾರತದೊಂದಿಗೆ ಸೇರುವುದು ಖಂಡಿತ ಅಸಂಭವ... ಒಂದು ವೇಳೆ ಹಾಗೂ ಹೀಗೂ ಅಖಂಡ ಭಾರತ ನಿರ್ಮಾಣವಾದರೆ ಭಾರತದ ಆಂತರಿಕ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಊಹಿಸಲೇ ಕಷ್ಟವಾಗುತ್ತದೆ.

ಭಾರತ-ಪಾಕ್ ಹಾಗು ಭಾರತ-ಬಾಂಗ್ಲಾ ವಿಭಜನೆಯಾದಂದಿನಿಂದ ಇಂದಿನವರೆಗೂ ಇವೆರಡೂ ದೇಶಗಳಲ್ಲಿ ಹಿಂದೂಗಳ ಮೇಲಿನ ಹಲ್ಲೆ, ಕೊಲೆ, ಅತ್ಯಾಚಾರ, ಬಲವಂತದ ಮತಾಂತರಗಳು ನಿಂತಿಲ್ಲ.. ಅಲ್ಲಿರುವ ಬೆರಳೆಣಿಕೆಯ ಹಿಂದುಗಳಿಗೆ ರಕ್ಷಣೆಯಿಲ್ಲದಾಗಿದೆ.  ಅಲ್ಲಿ ಹಿಂದೂಗಳ ಮೇಲೆ ನಡೆಯುವ ಎಲ್ಲಾ ಅತ್ಯಾಚಾರ, ಹತ್ಯಾಕಾಂಡಗಳು ಹೊರಗಿನ ಪ್ರಪಂಚಕ್ಕೆ ತಿಳಿಯುವುದಿಲ್ಲ.. ಕೆಲವೇ ಕೆಲವು ಘಟನೆಗಳು ಮಾತ್ರ ಮಾಧ್ಯಮದ ಮೂಲಕ ತಿಳಿಯುತ್ತದೆ. ಅಪ್ರಾಪ್ತ ಹಿಂದೂ ಬಾಲಕಿಯರನ್ನು ಅಪಹರಿಸಿ ಅತ್ಯಾಚಾರಗೈದು ಮುಸ್ಲಿಂ ಆಗಿ ಮತಾಂತರಿಸಲಾಗುತ್ತಿದೆ. ಹಿಂದೂ ಜನರನ್ನು ಅಟ್ಟಾಡಿಸಿಕೊಂಡು ಹತ್ಯೆಗೈಯಲಾಗುತ್ತಿದೆ. ಬಲವಂತದ ಸುನ್ನತ್-ಮತಾಂತರಗಳು ಎಗ್ಗಿಲ್ಲದೆ ನಡೆಯುತ್ತಿದೆ... ಅಲ್ಲಿನ ಹಿಂದೂ ದೇಗುಲಗಳು ಧರೆಗುರುಳುತ್ತಿವೆ, ಕೆಲ ಕಡೆ ಹಿಂದುಗಳನ್ನು ಅವರ ಮನೆಯಿಂದಲೇ ಹೊರಗಟ್ಟಲಾಗುತ್ತಿದೆ. ಈ ಎಲ್ಲಾ ಆಕ್ರಮಣಗಳಿಗೆ ಹೆದರಿ ಈಗಾಗಲೇ ಪಾಕಿಸ್ತಾನದಿಂದ ಭಾರತದತ್ತ ವಲಸೆ ಬರುತ್ತಿರುವ ಹಿಂದೂ ಕುಟುಂಬಗಳ ಬಗ್ಗೆ ಕೇಳಿರುತ್ತೀರಿ. ಪಾಪ ಅವರ ಸ್ಥಿತಿ ಅತ್ತ ಪಾಕಿಸ್ತಾನವೂ ಇಲ್ಲ ಇತ್ತ ಭಾರತವೂ ಇಲ್ಲವೆಂಬಂತಾಗಿದೆ.


ಅದೇ ರೀತಿ ಬಾಂಗ್ಲಾದಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ.. ಅಲ್ಲಿನ ಮುಸ್ಲಿಂ ನುಸುಳುಕೋರರು ಈಗಾಗಲೇ ಭಾರತಕ್ಕೆ ಅಕ್ರಮ ವಲಸೆ ಬಂದು ಭಾರತದ ಈಶಾನ್ಯ ರಾಜ್ಯಗಳಲ್ಲಿ ಹಿಂದೂಗಳ ಮೇಲೆ ಮಾಡುತ್ತಿರುವ ಆಕ್ರಮಣಗಳು, ಅವರ ಧಾಳಿಯಿಂದ ತತ್ತರಿಸಿ ನೆಲೆ ಕಳೆದುಕೊಂಡಿರುವ ಅಲ್ಲಿನ ಹಿಂದೂಗಳ ಪರಿಸ್ಥಿತಿ ಇವೆಲ್ಲ ಎಂತಹ ಕಟು ಹೃದಯಿಯ ಕಣ್ಣಲ್ಲೂ ನೀರು ತರಿಸುತ್ತವೆ. ಪ್ರಸ್ತುತ ಅಸ್ಸಾಂ ನಲ್ಲಿ ನಡೆಯುತ್ತಿರುವ ಹಿಂದೂಗಳ ಮಾರಣಹೋಮವೇ ಇದಕ್ಕೆ ಜ್ವಲಂತ ಸಾಕ್ಷಿ. ಅಲ್ಲಿನ ಹೆಚ್ಚಿನ ಹಿಂದೂ ಬೋಡೊ ಬುಡಕಟ್ಟು ಜನಾಂಗದವರು ಬಾಂಗ್ಲಾದ ಅಕ್ರಮ ವಲಸಿಗ ಮುಸ್ಲಿಮರಿಗಾಗಿ ತಮ್ಮ ಮನೆ ಮಠವನ್ನೆಲ್ಲ ಕಳೆದುಕೊಂಡಿದ್ದಾರೆ. ಅಲ್ಲಿನ ಹಿಂದೂ ಹೆಣ್ಣುಮಕ್ಕಳ ದಯನೀಯ ಸ್ಥಿತಿಯನ್ನಂತೂ ಯಾವ ಪದಗಳಿಂದ ಹೇಳುವುದು ಎಂದೇ ತೋಚುತ್ತಿಲ್ಲ. 



ಹೀಗಿರುವಾಗ ಅವೆರಡೂ ದೇಶಗಳು ಮತ್ತೆ ಭಾರತದೊಂದಿಗೆ ವಿಲೀನಗೊಂಡು 'ಅಖಂಡ ಭಾರತ' ನಿರ್ಮಾಣವಾದರೆ ಅವೆರಡೂ ದೇಶಗಳ ಮುಸ್ಲಿಂಮರು ನಮ್ಮ ಹಿಂದೂಗಳ ಮೇಲೆ ಯಾವ ರೀತಿಯಲ್ಲಿ ಆಕ್ರಮಣಗೈಯಬಹುದು ಎಂಬುದನ್ನು ಒಂದು ಕ್ಷಣ ಊಹಿಸಿ. ಭಾರತದಲ್ಲಿ ಈಗಾಗಲೇ ಸರಿ ಸುಮಾರು 18 ಶೇಕಡಾದಷ್ಟಿರುವ ಮುಸ್ಲಿಮರು ಇಲ್ಲಿನ ಹಿಂದೂಗಳ ಮೇಲೆ ಮಾಡುತ್ತಿರುವ ದೌರ್ಜನ್ಯಗಳನ್ನು ಎಲ್ಲಾ ಕಡೆಗಳಲ್ಲಿ ತಡೆಯಲಾಗುತ್ತಿಲ್ಲ. ಹಾಗಿರುವಾಗ ಇಲ್ಲಿನ 18  ಶೇಕಡಾ, ಪಾಕ್-ಬಾಂಗ್ಲಾದ ಮುಸ್ಲಿಮರೆಲ್ಲ ಸೇರಿ ಸುಮಾರು 40-45 ಶೇಕಡಾವಾಗುವಾಗ ಇಲ್ಲಿನ ಹಿಂದೂಗಳ ಮೇಲೆ ಆಕ್ರಮಣವಾಗದಿರುತ್ತದೆಯೇ. ಮುಸ್ಲಿಮರ ಜನಸಂಖ್ಯೆ 40 ರಿಂದ 45 ಶೇಕಡಾದಷ್ಟಾಗುವಾಗ ಚುನಾವಣೆಗಳಲೆಲ್ಲ ಮುಸ್ಲಿಂ ಲೀಗ್, ಜಮಾತೆ ಇಸ್ಲಾಂ ನಂತಹ ಮುಸ್ಲಿಂ ಮೂಲಭೂತವಾದಿ ಪಕ್ಷಗಳು ಅಧಿಕಾರಕ್ಕೆ ಬರುವುದಿಲ್ಲವೇ? ಕ್ರಮೇಣ 45 ಶೇಕಡಾದಿಂದ 50 , ನಂತರ 55 , ಮುಂದೆ 60 ಹೀಗೆ ಮುಸ್ಲಿಮರ ಜನಸಂಖ್ಯೆ ಭಾರತದಲ್ಲಿ ಹೆಚ್ಚಳವಾಗುತ್ತ ಹೋಗುವಾಗ ಹಿಂದೂಗಳ ಸ್ವಂತ ನಾಡಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗುತ್ತಾರಲ್ಲ!!! ಆಗಲೂ ನಾವು ಅಖಂಡ ಭಾರತವನ್ನು ಹೊಂದಬೇಕು ಎಂಬ ಆಸೆ ಇರುವುದೇ...?!


ಇಂದು 'ಅಖಂಡ ಭಾರತ ಸಂಕಲ್ಪ ದಿನ'ವೆಂದು ಆಚರಿಸುವವರಿಗೆ ಅದರ ಉದ್ಧೇಶ ಹಾಗು ಅದರಿಂದಾಗುವ ಪರಿಣಾಮಗಳ ಅರಿವಿರಲಿಕ್ಕಿಲ್ಲ. ಯಾವುದೇ ಆಚರಣೆಗಳನ್ನು ಆಚರಣೆ ಮಾಡಬೇಕೆಂದು ಆಚರಿಸುವುದಕಿಂತ ಅದರ ಪರಿಣಾಮಗಳನ್ನು ಅವಲೋಕಿಸಿ ಆಚರಿಸಿದರೆ ಉತ್ತಮ ಅಲ್ಲವೇ...


ಜೈ ಭವಾನಿ...



Saturday, August 4, 2012

ದೇವತೆ I LOVE YOU


ಚಡಪಡಿಕೆಯೇತಕೆ ಚೆಲುವೇ..
ಚಡಪಡಿಸದಿರು ನನ್ನ ಒಲವೇ..
ಮಂದಾರ ಪುಷ್ಪದ ಚೆಲುವು ಪಡೆದ ನೀನು ನನ್ನವಳೇ..
ಕ್ಷಣ ಬಿಡದೆ ಎದೆಯಾ ತುಂಬಾ ನಿನ್ನೆ ನಾ ತುಂಬಿಡುವೇ...

ಆ ಶಿಖರದ ಮೇಲಿನಿಂದ ಹಾದು ಹೋದ ಕಾಮನಬಿಲ್ಲೇ

ಈ ನನ್ನ ಹೃದಯದಲಿ ಪುಳಕ ತಂದ ಹುಣ್ಣಿಮೆ ತುಂಡೇ
ನನ್ನ ಬಾಳ ಸಿಹಿ ನೀನು ಹಾದು ಹೋಗದಿರು ಇರುವೆಗಳ ಮುಂದೆ
ನಿನಗಾಗಿಯೇ ನಾನಿರುವೆನು ನಿನ ಬದುಕಲಿ ಇನ್ನು ಮುಂದೇ...

ಆನಂದದ ಉಯ್ಯಾಲೆಯಲಿ ನಿನ್ನ ನಾ ಕೂರಿಸುವೇ

ಎವೆಯಿಕ್ಕದೆ ನಿನ್ನ ನೋಡುತ ನಾ ಅಲ್ಲೇ ಕಾದಿರುವೇ..
ಆಗರ್ಭ ಸಿರಿವಂತ ನಾನು ನಿನ್ನ ಪ್ರೀತಿ ಪಡೆದ ಮೇಲೆ
ನಿನ್ನಿಂದಲೇ ನಾನಾಗಿಯೇ ನಾನಿಂದು...

ಚಡಪಡಿಕೆಯೇತಕೆ ಚೆಲುವೇ..

ಚಡಪಡಿಸದಿರು ನನ್ನ ಒಲವೇ..
ಕ್ಷಣ ಬಿಡದೆ ಎದೆಯಾ ತುಂಬಾ ನಿನ್ನೆ ನಾ ತುಂಬಿಡುವೇ...


Saturday, May 26, 2012

ಕನ್ನಡ ಭಾಷೆ ಮತ್ತು ಡಬ್ಬಿಂಗ್

ರಿಯಾಲಿಟಿ ಶೋಗಳೆಂದರೆ ಯಾವುದೋ ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಕಾಲಹರಣ, ತುಂಡುಡುಗೆಯ ಮಾನಿನಿಯರ ಮೇಲಾಟ, ಅನೈತಿಕ ವಿಷಯಗಳ ಬಗ್ಗೆ ಚರ್ಚೆ, ಹುಚ್ಚು ಕುಣಿತ, ತುಸು ಮನೋರಂಜನೆ.. ಬರೀ ಇಂತಹ ಅಭಿಪ್ರಾಯಗಳೇ ಎಲ್ಲರ ಮನದಲ್ಲಿ ಮನೆಮಾಡಿಕೊಂಡಿರುವ ಈ ಕಾಲದಲ್ಲಿ ಎಲ್ಲ ರಿಯಾಲಿಟಿ ಶೋ ಗಳಿಗಿಂತ ಭಿನ್ನವಾಗಿ ಕಾಣುವಂತಹುದು ಹಿಂದಿಯ ಸ್ಟಾರ್ ಪ್ಲಾಸ್ ನಲ್ಲಿ ಪ್ರಸಾರವಾಗುವ 'ಸತ್ಯಮೇವ ಜಯತೇ'..

'ಸತ್ಯಮೇವ ಜಯತೇ' ರಾಷ್ಟ್ರದ ಜ್ವಲಂತ ಸಮಸ್ಯೆಗಳನ್ನು, ಅಮಾನವೀಯ ಘಟನಾವಳಿಗಳನ್ನು, ಸಮಾಜದಲ್ಲಿ ಕಂಡೂ ಕಾಣದಂತಿರುವ ಪಿಡುಗುಗಳನ್ನು ನೇರವಾಗಿ ಜನರಿಗೆ ತೋರಿಸುತ್ತಾ ಜನರಲ್ಲಿ ಅರಿವನ್ನು ಮೂಡಿಸುತ್ತಿರುವ ಒಂದು ಪ್ರಶಂಶನೀಯ ಕಾರ್ಯಕ್ರಮ. ಇದನ್ನು ನಡೆಸಿಕೊಡುತ್ತಿರುವವರು ಹಿಂದಿಯ ಹೆಸರಾಂತ ನಟ ಅಮೀರ್ ಖಾನ್.. ಅಮೀರ್, ಪಾಕಿಸ್ತಾನದ ಬಗ್ಗೆ ಮೃದು ಧೋರಣೆ ಹೊಂದಿರುವ ಮುಸ್ಲಿಂ ಮೂಲಭೂತವಾದಿ ಶಾರುಖ್ ಖಾನ್ ಹಾಗು ಇತರೆ ಖಾನ್ ಗಳನ್ತಲ್ಲ.. ಸದಾ ದೇಶ ಜಾಗೃತಿಯ ಬಗ್ಗೆ ಸಿನಿಮಾಗಳನ್ನು ಮಾಡುತ್ತಾ ದೇಶ ಸೇವೆಗೈಯುತ್ತಿರುವ ಅಮೀರ್ ನ ವ್ಯಕ್ತಿತ್ವ ನಿಜಕ್ಕೂ ಇತರ ಖಾನ್ ಗಳಿಗೆ ಮಾದರಿಯಾಗುವಂತಹುದು...

ಇದೇ ಅಮೀರ್ ನ ಸತ್ಯಮೇವ ಜಯತೇ ದಕ್ಷಿಣದ ಇತರೆ ಭಾಷೆಗಳಿಗೆ ಡಬ್ ಆಗಿರುವುದು, ಕನ್ನಡದಲ್ಲಿ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿ ಕನ್ನಡಿಗರಿಗೆ ಸತ್ಯಮೇವ ಜಯತೆಯ  ಕನ್ನಡ ರೂಪಾಂತರವನ್ನು ನೋಡಲು ಸಾಧ್ಯವಾಗದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.. ಇಂತಹ ಒಂದು ಜನ ಜಾಗೃತಿಯ ಕಾರ್ಯಕ್ರಮ ದೇಶದ ಮೂಲೆ ಮೂಲೆಗೂ ಅವರದೇ ಭಾಷೆಯಲ್ಲಿ ತಲುಪಬೇಕೆಂಬ ಅಮೀರ್ ನ ಆಸೆ ಕರ್ನಾಟಕದ ಮಟ್ಟಿಗೆ ನೆರವೇರಲಿಲ್ಲ..  ಇಲ್ಲಿನ ಕಿರುತೆರೆ, ಚಿತ್ರರಂಗದ ಸಂಘ ಸಂಸ್ಥೆ ಗಳು, ಕಲಾವಿದರು ತಂತ್ರಜ್ಞರ ತೀವ್ರ ಪ್ರತಿರೋಧದಿಂದ ಇದು ಸಾಧ್ಯವಾಗದೆ ಹೋಯಿತು... ಈಗ ನಾವು ನೀವುಗಳು  ಸತ್ಯಮೇವ ಜಯತೆಗಾಗಿ ಬೇರೆ  ಭಾಷೆಯ ಛಾನಲನ್ನು ನೋಡುವಂತಾಗಿದೆ.. ಇದು ಅಸಂಖಾತ ಕನ್ನಡ ಪ್ರೇಕ್ಷಕರಿಗೆ ಹಾಗು ಕನ್ನಡ ಭಾಷೆಗೆ ಕನ್ನಡ ಚಿತ್ರರಂಗ ಮಾಡಿದ ಅತೀ ದೊಡ್ಡ ದ್ರೋಹ...

ಡಬ್ಬಿಂಗ್ ಯಾಕೆ ಬೇಡ...?! ಚಿತ್ರರಂಗ ಕಿರುತೆರೆಯರ ಪ್ರಕಾರ ಡಬ್ಬಿಂಗ್ ನಿಂದಾಗಿ ಕನ್ನಡ ಚಿತ್ರರಂಗ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ, ಕನ್ನಡದ ಸಂಸ್ಕೃತಿಯ ನಾಶವಾಗುತ್ತದೆ.. ಇದು ಅವರ ವಾದ.. ಕನ್ನಡದಲ್ಲಿ ಒಂದು ಹಿಡಿದಿಟ್ಟುಕೊಳ್ಳುವಂತಹ, ಜನ ಜಾಗೃತಿಯ ಕಾರ್ಯಕ್ರಮ ತಯಾರಿಸಲಾಗದ ಇವರುಗಳು ಮತ್ತೇನು ತಾನೇ ಹೇಳಿಯಾರು? ಈಗಾಗಲೇ ಕುಲಗೆಟ್ಟ ಕಾರ್ಯಕ್ರಮಗಳು, ಸ್ವಂತಿಕೆ ಇಲ್ಲದ ಸಿನೆಮಾ. ರಿಮೇಕ್ ಗಳಿಂದ ಹೆಸರು ಕೆಡಿಸಿಕೊಂಡು ಹೆಚ್ಚಿನ ಕನ್ನಡ ಪ್ರೇಕ್ಷಕರನ್ನು ದೂರಕಟ್ಟಿರುವ ಕನ್ನಡ ಚಿತ್ರರಂಗ ಈ ಡಬ್ಬಿಂಗ್ ವಿರೋಧಿ ಆಂದೋಲನದಿಂದ ಸಾಧಿಸುವುದಾದರೂ ಏನು?


ಡಬ್ಬಿಂಗ್ ವಿರುದ್ದ ತೋಳೆತ್ತಿ ಆರ್ಭಟಿಸುತ್ತಿರುವ ಶಿವಣ್ಣ ಹಾಗು ಅವರ ಬಳಗಕ್ಕೆ ತಾವು ಮಾಡುತ್ತಿರುವುದು ಕಾನೂನು ವಿರೋಧಿ ಹೋರಾಟ ಎಂಬುದರ ಕಿಂಚಿತ್ತಾದರೂ ಅರಿವಿದೆಯೇ? ಡಬ್ಬಿಂಗ್ ಗೆ ಭಾರತದ ಕಾನೂನಿನಲ್ಲಿ ಯಾವುದೇ ವಿರೋಧವಿಲ್ಲ. ಡಬ್ಬಿಂಗ್ ಸಂವಿಧಾನಾತ್ಮಕವಾದುದು. ಹೀಗಿರುವಾಗ ಡಬ್ಬಿಂಗ್ ಗೆ ವಿರೋಧ ವ್ಯಕ್ತ ಪಡಿಸುವುದು ಅಪ್ರಜಾಸತ್ಮಕವಲ್ಲವೇ. ಪಾಳೇಗಾರಿಕೆ ಮೂಲಕ ಡಬ್ಬಿಂಗ್ ಅನ್ನು ಕನ್ನಡದಿಂದ ದೂರಕತ್ತುವುದು ಎಷ್ಟರ ಮಟ್ಟಿಗೆ ಸರಿ..


ಬಹುಶಃ ಡಬ್ಬಿಂಗ್ ಗೆ ಅವಕಾಶ ಕೊಟ್ಟರೆ ಅವರುಗಳು ಬೇರೆ ಭಾಷೆಯಿಂದ ಕದ್ದು ರಿಮೇಕ್ ಮಾಡಲು, ನಾಲ್ಕೈದು  ಸಿನಿಮಾದ ಕತೆ ಸೇರಿಸಿ ಖಿಚಡಿ ಸಿನಿಮಾ ಮಾಡಲು ಸಾಧ್ಯವಾಗದು ಎಂಬ ಆತಂಕವೋ ಏನೋ..? ಒಂದು ಮಾತ್ರ ಸತ್ಯ ಈ ಸ್ವಂತಿಕೆ ಇಲ್ಲದ  ಕನ್ನಡ ಚಿತ್ರರಂಗದಿಂದ ಜನ ದಿನೇ ದಿನೇ ವಿಮುಖರಾಗುತ್ತಿದ್ದಾರೆ. ತಮ್ಮ ಮನೋರಂಜನೆಗಾಗಿ ಬೇರೆ ಭಾಷೆಗಳ ಮೊರೆ ಹೋಗುತ್ತಿದ್ದಾರೆ.. "10 ಹೊಸ ಚಿತ್ರಗಳ ಪೈಕಿ 1  ಮಾತ್ರ ಆಯ್ಕೆಗೆ ಅರ್ಹವಾಗಿರುತ್ತವೆ.  ಉಳಿದವು ಎಲ್ಲಾ ಸವಕಲು" ಎಂದು ವಿಷಾದದಿಂದ ಹೇಳುವ ಕನ್ನಡದ ಹಿರಿಯ ನಟ ಅನಂತ್ ನಾಗ್ ರವರ ಮಾತುಗಳು ಇಲ್ಲಿ ಪ್ರಸ್ತುತವೆನಿಸುತ್ತದೆ. ಇಂತಹ ಚಿತ್ರರಂಗದಿಂದ ಕನ್ನಡ ಭಾಷೆ-ಸಂಸ್ಕೃತಿ ಬೆಳೆಯುತ್ತದೆ ಎಂದು ನಿರೀಕ್ಷಿಸುವುದು ದೊಡ್ಡ ಅಪರಾಧವಾಗುತ್ತದೆ.



ಸತ್ಯಮೇವ ಜಯತೆ ಕನ್ನಡದಲ್ಲಿ ದೊರೆಯದ ಕಾರಣ ನಾವು ಬೇರೆ ಭಾಷೆಯ ಮೊರೆ ಹೋದ ಹಾಗೆ ಅದೆಷ್ಟೋ ಕನ್ನಡಿಗರು ತಮ್ಮಿಷ್ಟದ ಮನೋರಂಜನಾ ಕಾರ್ಯಕ್ರಮಕ್ಕಾಗಿ ಬೇರೆ ಭಾಷೆಯ ಚಾನಲ್ ಗಳಿಗೆ ಟ್ಯೂನಿಸುತ್ತಾರೆ. ಇಲ್ಲಿ ನಮಗೇನೂ ನಷ್ಟವೆನಿಸುವುದಿಲ್ಲ. ನಮಗೆ ಬೇಕಾದ ಮಾಹಿತಿ, ಮನೋರಂಜನೆ ಎಲ್ಲವೂ ದೊರಕುತ್ತದೆ. ಆದರೆ ಇಲ್ಲಿ ನಿಜವಾಗಿ ನಷ್ಟಕ್ಕೊಳಗಾಗುವುದು ಮಾತ್ರ ಕನ್ನಡ ಭಾಷೆ..! ನಮ್ಮಿಷ್ಟದ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ಡಬ್ ಮಾಡಿ ತೋರಿಸಿದರೆ ನಾವೆಲ್ಲಾ ಮನೆ ಮಂದಿಯೊಂದಿಗೆ ಕುಳಿತು ಕನ್ನಡದಲ್ಲೇ ವೀಕ್ಷಣೆ ಮಾಡುತ್ತೇವೆ. ಆಗ ಕನ್ನಡ ಭಾಷೆ ಬೆಳೆಯುತ್ತದೆ, ಭಾಷಾ ಜ್ಞಾನ ವಿಸ್ತಾರಗೊಳ್ಳುತ್ತದೆ. ಆದರೆ ಅದನ್ನೇ ಬೇರೆ ಭಾಷೆಗಳಲ್ಲಿ ನೋಡಿದಾಗ ಆ ಬೇರೆ ಭಾಷೆ ಬೆಳೆಯುತ್ತದೆಯೇ ಹೊರತು ಕನ್ನಡವಲ್ಲ. ಕನ್ನಡ ನಿಧಾನವಾಗಿ ಮರೆಗೆ ಸರಿಯಲಾರಂಬಿಸುತ್ತದೆ  . ಈಗ ಅದೆಷ್ಟೋ ಉಪಯುಕ್ತ ಚಾನಲ್ ಗಳಾದ  ಹಿಸ್ಟರಿ, ಡಿಸ್ಕಾವರಿ, ನ್ಯಾಷನಲ್ ಜಿಯೋಗ್ರಾಫಿ  ಮುಂತಾದವುಗಳು ಭಾರತದ ಹೆಚ್ಚಿನ ಭಾಷೆಗಳಲ್ಲಿ ಡಬ್ ಗೊಂಡಿವೆ. ಆದರೆ ಕನ್ನಡದಲ್ಲಿ ಮಾತ್ರ ಅದಕ್ಕೆ ಅವಕಾಶ ನೀಡಿಲ್ಲ. ಮೊದಲೆಲ್ಲ ಮಕ್ಕಳಿಗೆ ಮನೆಯಲ್ಲಿ ರಾಮಾಯಣ, ಮಹಾಭಾರತದ ಕತೆಗಳನ್ನು ಹೇಳುತ್ತಿದ್ದರು.  ಆದರೆ ಈಗಿನ ಜೀವನ ಸ್ಥಿತಿಯಲ್ಲಿ ಅದು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾವು ಮಕ್ಕಳಿಗೆ ರಾಮಾಯಣ-ಮಹಾಭಾರತದ ಕಾರ್ಟೂನ್ ಗಳ DVD  ಗಳನ್ನು ತಂದುಕೊಡುತ್ತೇವೆ. ಅದು ಹಿಂದಿ ಆದಿಯಾಗಿ ಇಂಗ್ಲಿಷ್, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ದೊರೆಯುತ್ತದೆ. ಆದರೆ ಕನ್ನಡದಲ್ಲಿ ದೊರೆಯುವುದಿಲ್ಲ. ಅದೇ ಕನ್ನಡದಲ್ಲಿ ಡಬ್ಬಿಂಗ್ ಗೆ ಅವಕಾಶ ಕೊಟ್ಟಿದ್ದರೆ ಅದೇ ಮಗು ಕಾರ್ಟೂನ್ ಗಳನ್ನು ಕನ್ನಡದಲ್ಲೇ ನೋಡುತ್ತಿತ್ತು. ಕನ್ನಡದಲ್ಲೇ ಕಾರ್ಟೂನ್ ನೋಡುವುದರಿಂದ ಆ ಮಗು ಎಷ್ಟು ಚೆನ್ನಾಗಿ ಕನ್ನಡ ಕಲಿಯುತಿತ್ತು ಅಲ್ಲವೇ.. ಮಗುವೂ ಬೆಳೆಯುತ್ತಿತ್ತು ಜೊತೆಗೆ ಕನ್ನಡವೂ..

ಇದೆಲ್ಲ ಒಂದು ನೂರು ಜನರ ಗುಂಪು ಕಟ್ಟಿಕೊಂಡು ಬೆದರಿಸುವ ಶಿವಣ್ಣ ನಿಗೆ ಅರ್ಥವಾಗುತ್ತದೆಯೇ? ಡಬ್ಬಿಂಗ್ ಬೇಕು ಎನ್ನುವವರು ಕನ್ನಡಿಗರಲ್ಲ ಎಂಬಂತೆ ಮಾತನಾಡುವ ಶಿವಣ್ಣ ಕನ್ನಡಿಗನೇ? ಕನ್ನಡಿಗರ ಕನ್ನಡತನವನ್ನು ಪ್ರಶ್ನಿಸಲು ಶಿವಣ್ಣ ಯಾರು? ಕನ್ನಡ ಭಾಷಾ ಬೆಳವಣಿಗೆಗೆ ಅಡ್ಡಗಾಲಿಡುವ ಪ್ರಯತ್ನದಲ್ಲಿರುವ ಇವರುಗಳು ಒಂದರ್ಥದಲ್ಲಿ ಕನ್ನಡಿಗರೇ ಅಲ್ಲ... ತಮ್ಮ ಸ್ವಾರ್ಥ ಸಾಧನೆಗಾಗಿ ಆಂದೋಲನ ಚಳುವಳಿ ಮಾಡುವ ಶಿವಣ್ಣ ಟೀಂ ಗೆ ನಿಜವಾದ ಕನ್ನಡಿಗರು (ಡಬ್ಬಿಂಗ್ ಪರ) ಸೆಟೆದು ನಿಂತರೆ ಇಲ್ಲಿ ನಿಲ್ಲಲೂ ಸಾಧ್ಯವಾಗದು ಎಂಬುದರ ಅರಿವಾಗಬೇಕು..  ಕನ್ನಡ ಚಿತ್ರರಂಗವೊಂದನ್ನು ಬಿಟ್ಟು ಎಲ್ಲ ಕನ್ನಡ ಸಂಘಟನೆಗಳ ಸಹಿತ ಇಡೀ ಕರುನಾಡಿಗೆ ಕರುನಾಡೆ  ಡಬ್ಬಿಂಗ್ ಬೆಂಬಲಿಸುತ್ತಿರುವಾಗ ಶಿವಣ್ಣ ಟೀಮ್ ನ ಅಪ್ರಜಾಸಾತ್ಮಕ ಹೋರಾಟ ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ ವ್ಯರ್ಥವಾಗುವುದು ಖಂಡಿತ..


ಜೈ ಭುವನೇಶ್ವರಿ..


Friday, March 23, 2012

ಒಲವ ಅಮಲಿನಲಿ...


ಏನಾಗಿದೆ ಇಂದು ನನಗೇನಾಗಿದೆ ಇಂದು 
ಏನೋ ನಾನರಿಯೆ ಯಾಕೋ ನಾ ತಿಳಿಯೆ
ಬಾನ ಮುಗಿಲಲ್ಲಿ ತೇಲಂಗಾಯ್ತಲ್ಲೇ...

ನಿನ್ನ ಆ ಕಣ್ಣೋಳಪು  ಮೊಗದ ಆ ಸಿಹಿಗಂಪು
ಸೇರಿ ಅದು ಯಾಕೋ ಅಮಲೇರಿತಲ್ಲೇ 
ನಿನ್ನ ಹೃದಯದ ಮಿಡಿತ ನನ್ನ ಹೃದಯವ ಮೀಟಿ
ನನಗರಿಯದೇ ಒಲವ ದೀಪ ಹಚ್ಚಿತಲ್ಲೇ...

ಈ ಚುಮು ಚುಮು ಚಳಿಯಲ್ಲಿ ನಿನ್ನ ಬೆಚ್ಚನೆ ಕೈ ಸ್ಪರ್ಶ
ಎದೆಯಾಳದ ತುಂಬಾ ಬಿಸಿ ಭಾವ ತಂದಿತಲ್ಲೇ
ಅದು ಯಾಕೋ ಅದು ಯಾಕೋ ನಿನ್ನ ತುಟಿಯ ಸಿಹಿಜೇನು
ನನ್ನ ತುಟಿಗೆ ತಾಗಿ ನಾ ಮೈ ಮರೆಯೊಂಗಾಯ್ತಲ್ಲೇ... 



ನೆನಪಾಗದಿರು ಓ ನೆನಪೇ...


ನೀ ಒಂದು ಮುಗಿಯದ ಅಧ್ಯಾಯ
ನನ್ನ  ನೆನಪಿನ ಪುಟಗಳಲಿ 
ತಿರುವಿ ತಿರುವಿ ಹಾಕಿದರೂ ಮತ್ತದೇ ತಿರುವಿನ ನೆನಪು
ಮರೆವೆನೆಂದರೂ ಮರೆಯಲಾಗದೆ ತಿರು ತಿರುಗೋ ನೆನಪು
ಹೇಗೆ ಮರೆಯಲಿ ನಾ ಮರೆಯದ ನೆನಪ...

ನೆನಪಿದು ಕೊಲ್ಲುತಿಹುದು, ಅಳಿಸುತಿಹುದು
ಇದು ಕೊಲೆಪಾತಕ ಉಗ್ರ ನೆನಪು
ಮರೆವೆನೆಂದರೂ ಮರೆಯಲಾಗದೆ
ಕಾಡಿಸುವ ಕಹಿ ನೆನಪು..

ನೆನಪಾಗದಿರು ಓ ನೆನಪೇ
ಬೇಡ ಎನಗೆ ಸಂಕಟದ ನೆನಪು 
ಸುಂಕ ನೀಡುವೆ ನಿನಗೆ ಮತ್ತೆ ಬರದಿರು ನೆನಪೇ
ನೆನಪಿನ ಪುಟಗಳಲಿ ಮತ್ತೆ ನೆನಪಾಗಿ..

ನೀ ಒಂದು ಮುಗಿಯದ ಅಧ್ಯಾಯ
ನನ್ನ  ನೆನಪಿನ ಪುಟಗಳಲಿ ...


Tuesday, February 28, 2012

ಧರೆಗಿಳಿದ ಹುಣ್ಣಿಮೆಯೇ...


ಅಂದ ಅಂದ ಅಂದ ಅಂದಗಾತಿ ನೀನು
ಈ ಚೆಲುವಿಗಿನ್ನು ಸಾಟಿಯಿಲ್ಲ ಏನೂ
ಆ ಚಂದಮಾಮ ಕೂಡ ನಾಚಿಕೊಂಡನೇನು...

ಅಗೋ ಹುಣ್ಣಿಮೆಯು ಕಳೆದು ಹೋಗಿದೆಯೆಂದು
ಚಂದಿರ ದೂರಿತ್ತಿಹ
ಅದು ಎಲ್ಲಿ ಎಂದು ಹುಡುಕಿ ಹೋಗಲು
ಅದು ನೀನೆ ಅಂದಿಹ
ಹುಣ್ಣಿಮೆಯ ರೂಪದವಳೇ, ಚೆಲುವಿನ ಸಿರಿಯಿವಳೇ
ಅಂದ ಅಂದ ಅಂದ ಅಂದಗಾತಿಯೇ...

ನೇಸರನ ಕಾಂತಿಗಿಂತ ನಿನ್ನ ಕಣ್ಣ ಕಾಂತಿಯೇ ಅಂದ
ಆ ಸಪ್ತ ಸ್ವರಗಳಿಗಿಂತ ನಿನ್ನ ಕಂಠ ಸ್ವರವೇ ಚಂದ
ಉಪಮೆಯಿಲ್ಲದ ಚೆಲುವೇ, ತಿದ್ದಿ ತೀಡಿದ ಬೊಂಬೆಯೇ
ಅಂದ ಅಂದ ಅಂದ ಅಂದಗಾತಿಯೇ...

ನಾ ಕಳೆದುಹೋಗಿಹೆನು ನಿನ್ನ ಚೆಲುವಿನಲೆಯಲ್ಲಿ 
ನಿನ್ನ ಕಾಲ್ಗೆಜ್ಜೆ ದನಿಗೆ ನಾ ಮರುಳಾಗಿ ಹೋಗಿ
ಒಲವ ಮೆರವಣಿಗೆಗೆ ಶುರುವಿಟ್ಟುಕೊಂಡಿಹೆನು 
ನನ್ನೊಲವ ಪ್ರಾಣವೇ, ನೀನೆಂದು ನನ್ನವಳೇ  
ಅಂದ ಅಂದ ಅಂದ ಅಂದಗಾತಿಯೇ..

ಅಂದ ಅಂದ ಅಂದ ಅಂದಗಾತಿ ನೀನು
ಈ ಚೆಲುವಿಗಿನ್ನು ಸಾಟಿಯಿಲ್ಲ ಏನೂ
ಆ ಚಂದಮಾಮ ಕೂಡ ನಾಚಿಕೊಂಡನೇನು...

Sunday, February 5, 2012

ದ್ವಾರಕನಾಥ್ ರವರೆ, ನಿಮಗೆ 'ಕೇಸರಿ' ಎಂಬ ಕಲರ್ ಕೋಡ್ ಕೊಟ್ಟವರಾರು..

(ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಅವರಿಗೊಂದು ಬಹಿರಂಗ ಪತ್ರ.)

ದ್ವಾರಕನಾಥ್ ಅವರೇ, ನೀವು ಇತ್ತೀಚಿಗೆ ಪ್ರಜಾವಾಣಿಯಲ್ಲಿ ಬರೆದ 'ಪ್ರಾಥಮಿಕ ಪಠ್ಯದಲ್ಲಿ ಕೇಸರೀಕರಣದ ಸ್ಯಾಂಪಲ್' ಎಂಬ ಲೇಖನದ ಬಗ್ಗೆ ಹಲವು ಸಂದೇಹಗಳಿರುವುದರಿಂದ ಈ ಪ್ರತಿಕ್ರಿಯೆಯನ್ನು ನೀಡಲಿಚ್ಚಿಸುತ್ತೇನೆ. 

ಮೊದಲನೆಯದಾಗಿ ನೀವು ಅರ್ಥೈಸಿಕೊಂಡಂತೆ 'ಕೇಸರೀಕರಣ' ಎಂದರೇನು ಎಂದು ತಿಳಿಯಬಯಸುತ್ತೇನೆ. ಭಾರತದ ಮೂಲ ಇತಿಹಾಸವನ್ನು, ಸಂಸ್ಕೃತಿಯನ್ನು, ಪರಂಪರೆಯನ್ನು, ಪ್ರಾಚೀನ ಭಾರತದ ಜನರ ಜೀವನ ವಿಧಾನಗಳನ್ನು, ಅವರು ಆಚರಿಸಿಕೊಂಡು ಬರುತ್ತಿದ್ದ ವಿವಿಧ ಆಚರಣೆಗಳನ್ನು ಯಥಾವತ್ತಾಗಿ ತಿಳಿಸಿಕೊಡುವುದು ಕೇಸರೀಕರಣವಾಗುತ್ತದೆಯೇ?.. ಇಷ್ಟಕ್ಕೂ ನಿಮಗೆ ಈ 'ಕೇಸರಿ' ಎಂಬ ಕಲರ್ ಕೋಡ್ ಕೊಟ್ಟವರು ಯಾರು?... ಹಾಗಿದ್ದಲ್ಲಿ ಹಿಂದಿನ ಪಠ್ಯಪುಸ್ತಕಗಳಲ್ಲಿ ಇದ್ದಂತೆ ಭಾರತದ ಮೇಲೆ ಹಲವು ಬಾರಿ ಧಾಳಿ ಮಾಡಿ ಇಲ್ಲಿನ ಹಲವು ವೈಭವೋಪೇತ ದೇಗುಲಗಳನ್ನು ನಾಶ ಮಾಡಿ, ಸಂಪತ್ತನ್ನು ಲೂಟಿಗೈದ ಮಹಮ್ಮದ್ ಗಜಿನಿ, ಮಹಮ್ಮದ್ ಘೋರಿ ಮುಂತಾದ ಲೂಟಿಕೋರರ ವರ್ಣನೆ.. ಭಾರತದ ಮೇಲೆ ದಂಡೆತ್ತಿ ಬಂದ ಅಲೆಕ್ಸಾಂಡರನನ್ನು ಸೋಲಿಸಿ ಓಡಿಸಿದ 'ಭಾರತೀಯ' ದೊರೆ 'ಪೌರವ'ನನ್ನು ವರ್ಣಿಸದೇ ಅಲೆಕ್ಸಾಂಡರನನ್ನು ವರ್ಣಿಸಿರುವುದು.. ಸ್ವಾತಂತ್ರ ಹೋರಾಟದ ಪಾಠಗಳಲ್ಲಿ ಆಜಾದ್, ಸಾವರ್ಕರ್, ನೇತಾಜಿ, ಭಗತ್ ಸಿಂಗ್, ಲಾಲ ಲಜಪತ್ ರಾಯ್ ಯಂತವರನ್ನು ನಾಲ್ಕೈದು ಸಾಲುಗಳಿಗೆ ಸೀಮಿತಗೊಳಿಸಿ ಗಾಂಧೀ-ನೆಹರೂ ಮುಂತಾದ ಕಾಂಗ್ರೆಸ್ಸ್ ನಾಯಕರುಗಳ ಬಗ್ಗೆ ಪುಟಗಟ್ಟಲೆ ಬರೆಯುವುದು.. ಮೌಲಾನ ಅಬ್ದುಲ್ ಕಲಾಮ್ ಅಜಾದರಂತಹ ಗಾಂಧಿಯ ಹಿಂಬಾಲಕರ ಬಗ್ಗೆ ಪಾಠಗಳನ್ನು ಸೃಷ್ಟಿಸಿ, ಅಶ್ಫಾಕುಲ್ಲ ಖಾನ್ ನಂತಹ ಕ್ರಾಂತಿಕಾರಿ ದೇಶಪ್ರೇಮಿಯನ್ನು ಕಡೆಗಣಿಸಿರುವುದು.. ಶಿವಾಜಿ ರಾಜ್ಯ ಕಟ್ಟಿದ ರೀತಿ, ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ಅವನು ಪಟ್ಟ ಶ್ರಮದ ಬಗ್ಗೆ ಪಾಠಗಳನ್ನು ರಚಿಸದೇ ಧರ್ಮಾಂಧ ಔರಂಗಜೇಬ, ಟಿಪ್ಪು ಸುಲ್ತಾನ್ ನನ್ನು ಪಠ್ಯದಲ್ಲಿ ವರ್ಣಿಸಿ ಸೇರಿಸಿರುವುದು .. ಇವೆಲ್ಲ ನಿಮಗೆ ಸರಿ ಕಂಡು ಬರುವುದೇ.. ಒಂದರ್ಥದಲ್ಲಿ ಇವೆಲ್ಲ 'ಹಸಿರೀಕರಣ'ವಾಗದೆ?!!!! ಅದಕ್ಕೇಕೆ ನೀವು 'ಹಸಿರು' ಎಂಬ ಕಲರ್ ಕೋಡ್ ಕೊಡುವುದಿಲ್ಲ.? ಸುಳ್ಳು ಇತಿಹಾಸವನ್ನು ಸೃಷ್ಟಿಸಿ ಬರೆದರೆ ಅದು ನಿಮಗೆ ಒಪ್ಪಿಗೆಯಾಗುತ್ತದೆ. ಅದೇ ಭಾರತದ ನಿಜವಾದ ಇತಿಹಾಸವನ್ನು ಮಕ್ಕಳಿಗೆ ತೆರೆದಿಟ್ಟರೆ ಅದು ಹೇಗೆ ಕೆಸರೀಕರಣವಾಗುತ್ತದೆ?

ಹೈದರಾಲಿಯನ್ನು ಶತ್ರುವೆಂದು ಬಿಂಬಿಸಲಾಗಿದೆ ಎಂದಿರುವ ನೀವು ಅದು ಹೈದರಾಲಿಯ ಬಗೆಗಿನ ಪಾಠವೋ ಅಥವಾ ರಾಣಿ ಚೆನ್ನಮ್ಮನ ಬಗೆಗಿನ ಪಾಠವೋ ಎಂಬುದನ್ನು ಸ್ಪಷ್ಟಪಡಿಸಿ. ನನಗೆ ಗೊತ್ತಿರುವಂತೆ ಅದು ರಾಣಿ ಚೆನ್ನಮ್ಮನ ಕುರಿತ ಪಾಠವಾಗಿರುವುದರಿಂದ ಅವಳ ವಿರುದ್ಧ ಯುದ್ಧ ಮಾಡಿ ಸೋತ ಹೈದರಾಲಿ 'ಶತ್ರು'ವೇ ಆಗುತ್ತಾನೆ ಹೊರತು ಮಿತ್ರನಾಗುವುದಿಲ್ಲ. ಒಂದು ಕಲ್ಪನೆಯ ಉದಾಹರಣೆ ಕೊಡುವುದಾದರೆ ಒಂದು ವೇಳೆ ಆ ಕಾಲಕ್ಕೆ ಚೆನ್ನಮ್ಮ ಹಾಗು ನನ್ನ ನಡುವೆ ಯುದ್ದವಾಗಿದ್ದರೆ, ಆ ಘಟನೆಯನ್ನು ಚೆನ್ನಮ್ಮ ಕುರಿತ ಪಠ್ಯದಲ್ಲಿ ಅಳವಡಿಸುವಾಗ ನನ್ನನ್ನು 'ಶತ್ರು' ಎಂದೇ ಸಂಭೋಧಿಸಲಾಗುತ್ತಿತ್ತು. ಅದರಲ್ಲಿ ಎದುರಾಳಿ ಮುಸ್ಲಿಂಮನೋ, ಹಿಂದುವೋ ಎಂಬ ಪ್ರಶ್ನೆ ಬರುವುದಿಲ್ಲ. ಇನ್ನು ಚೆನ್ನಮ್ಮನ ಕುರಿತ ವಿಸ್ಕ್ರುತವಾದ ಪಾಠದಲ್ಲಿ 'ಮಂಗಳೂರಿನ ಇಗರ್ಜಿಯೊಂದು ರಾಣಿ ಚೆನ್ನಮ್ಮಾಜಿ ದಾನವಿತ್ತ ನಿವೇಶನದಲ್ಲಿದೆ' ಎಂಬುದು ಅನಗತ್ಯ ಎನಿಸುವುದಿಲ್ಲ. ಅದಕ್ಕೆ ಸಾಕ್ಷ್ಯವಿಲ್ಲ, ಅದು ಸುಳ್ಳು ಎಂಬುವುದಾದರೆ ಮಾತ್ರ ಅದು ಅನಗತ್ಯವಾಗುತ್ತಿತ್ತು. ಅದು ಸತ್ಯವಾದ ಕಾರಣ ನಿಮಗೆ 'ಅನಗತ್ಯ'ವಾಗಿ ಕಂಡು ಬಂದಿದೆ. ಯಾಕೆಂದರೆ ನಿಮಗೆ 'ಸುಳ್ಳಿನ ಇತಿಹಾಸ'ವೇ ಇಷ್ಟವೆನಿಸಿರಬೇಕು.

ಈ ಹಿಂದೆ 
ಪಠ್ಯಗಳಲ್ಲಿ ರಾಮ-ರಹೀಮ ಎಂಬ ಹೆಸರುಗಳನ್ನೂ ಬಳಸಲಾಗುತ್ತಿತ್ತು ಆದರೆ ಈಗಿನ 'ಕುಟುಂಬ, ಸಮುದಾಯ ಮತ್ತು ಸಮಾಜ' ಎಂಬ ಪಾಠದಲ್ಲಿ ಕೇವಲ ಹಿಂದೂ ಕುಟುಂಬವನ್ನಷ್ಟೇ ವಿವರಿಸಲಾಗಿದೆ ಎಂದಿದ್ದೀರಿ. ಅಂದರೆ ನಿಮ್ಮ ಮಾತಿನ ಅರ್ಥ ರಾಮನ ಜತೆ ರಹೀಮನನ್ನೂ ಸೇರಿಸಬೇಕು ಎಂದು. ಆದರೆ ಭಾರತದಲ್ಲಿ ರಾಮ ರಹೀಮ ಒಂದೇ ಕುಟುಂಬದಲ್ಲಿ ಇರುವುದನ್ನು ಎಲ್ಲಾದರೂ ಕಂಡಿದ್ದೀರಾ? ಅಲ್ಲದೆ 'ಕುಟುಂಬ, ಸಮುದಾಯ ಮತ್ತು ಸಮಾಜ' ಎಂಬ ಪಾಠದಲ್ಲಿ ಬಹು ಸಂಖ್ಯಾತ ಸಮುದಾಯದ ಕುಟುಂಬವನ್ನು ವಿವರಿಸದೆ ಅಲ್ಪಸಂಖ್ಯಾತ ಸಮುದಾಯದ ಕುಟುಂಬವನ್ನು ವಿವರಿಸಲಾಗುವುದೇ?

ಇನ್ನು ಪುಟ ೬೭ ರ ಮರು ಮತಾಂತರದ ಬಗ್ಗೆ. 'ಮತಾಂತರವೆಂದರೆ ರಾಷ್ಟ್ರಾಂತರ' ಎಂದು ಸಾವರ್ಕರರು ಬಹಳ ಹಿಂದೆಯೇ ಹೇಳಿದ್ದರು. ಇತ್ತೀಚಿಗೆ ಇಂಡೋನೇಷಿಯ ಧರ್ಮದ ಆಧಾರದ ಮೇಲೆ ವಿಭಜನೆ ಹೊಂದಿದ್ದನ್ನು ನೀವು ಮರೆತಿರಲಾರಿರಿ. ಹಾಗಿರುವಾಗ ಪುಟ ೬೭ ರಲ್ಲಿ ಮರು ಮತಾಂತರವನ್ನು ದೇಶಪ್ರೇಮವೆಂದು ಹೇಳಿರುವುದು ಸರಿಯಾಗಿಯೇ ಇದೆ ಅಲ್ಲವೇ?

ಇನ್ನು'ವೇದಕಾಲದ ಭಾರತ' ಎಂಬ ಪಾಠದಲ್ಲಿ ವೇದಗಳು ಹಾಗು ವೈದಿಕ ಆಚರಣೆಗಳ ಬಗ್ಗೆ ಬರೆಯದೆ ನಮ್ಮ-ನಿಮ್ಮ ಬಗ್ಗೆ ಬರೆಯಲಾಗುವುದೇ.. ಪಾಠದ ಹೆಸರೇ 'ವೇದಕಾಲದ ಭಾರತ' ಎಂದಿರುವಾಗ ನಿಮ್ಮದೇಕೆ ಕೊಂಕುನುಡಿ ಎಂದು ಅರಿವಾಗಲಿಲ್ಲ.

8 ನೇ ತರಗತಿಯ ಸಮಾಜ ವಿಜ್ಞಾನವನ್ನು ತೆರೆಯುತ್ತಿದ್ದಂತೆ ಆಘಾತವಾಗುತ್ತದೆ ಎಂದಿದ್ದೀರಿ.! ಯಾಕೆ ಅದರಲ್ಲಿ ಯಾವುದಾದರೂ ಚೇಳು, ವಿಷಜಂತುಗಳಿತ್ತೆ?! ಅದರಲ್ಲಿರುವ 'ಅಖಂಡ ಭಾರತ'ದ ನಕ್ಷೆ ನೋಡಿ ನಿಮಗೆ ಆಘಾತವಾಗಿದೆ. ಪ್ರಾಚೀನ ಭಾರತದ ಇತಿಹಾಸ ನೋಡಿದರೆ ನಮ್ಮ ಭಾರತ ಆ ನಕ್ಷೆಯಲ್ಲಿರುವಂತೆಯೇ ಇತ್ತು. ಅದರಲ್ಲೇನೂ ಹೊಸದಿಲ್ಲ. ಹಿಂದಿನ ಭಾರತ ಹೇಗಿತ್ತು ಎಂಬುದನ್ನು ಮಕ್ಕಳಿಗೆ ತಿಳಿಸುವ ಸಲುವಾಗಿ ಆ ನಕ್ಷೆಯನ್ನು ಹಾಕಲಾಗಿದೆ. ಅದರಲ್ಲಿರುವ ಪಾಕಿಸ್ತಾನ, ಬಾಂಗ್ಲಾ, ಬರ್ಮಾ, ಬೂತಾನ್, ಜೊತೆಗೆ ಮಹಾಭಾರತ ಕಾಲದ ಗಾಂಧಾರ ದೇಶ (ಈಗಿನ ಅಫ್ಘಾನಿಸ್ತಾನ), ಬ್ರಹ್ಮ ದೇಶ, ಶ್ಯಾಮ ದೇಶ ಗಳು ಪ್ರಾಚೀನ ಭಾರತದ ಅಂಗಗಳೇ.. ಅಲ್ಲಿ ಅಮೇರಿಕ, ಜಪಾನ್, ಜರ್ಮನಿಗಳಿದ್ದರೆ ನಿಮ್ಮ ಆಘಾತಕ್ಕೊಂದು ಅರ್ಥವಿರುತ್ತಿತ್ತು..! 

ಇನ್ನು ಪ್ರಜಾಪ್ರಭುತ್ವ ಎಂಬ ಅಧ್ಯಾಯದಲ್ಲಿ ಕಮ್ಯುನಿಷ್ಟ್ ಸರಕಾರಗಳ ಬಗ್ಗೆ ಹೇಳಿರುವುದು ಸರಿಯಾದುದೇ ಆಗಿದೆ.. ಹಾಗೆಯೇ ದ್ವಿಪಕ್ಷ ವ್ಯವಸ್ಥೆಯ ಬಗ್ಗೆ ಚರ್ಚಿಸಲು ಹೇಳಿರುವುದು ಭಾರತದ ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ರಾಜಕೀಯ ನಾಯಕರುಗಳು ತಮ್ಮ ಸ್ವಾರ್ಥಕ್ಕಾಗಿ ಹುಟ್ಟು ಹಾಕುವ ಪ್ರಾದೇಶಿಕ ಪಕ್ಷಗಳು ರಾಜಕೀಯ ಅಸ್ಥಿರತೆಯನ್ನು ಉಂಟುಮಾಡುತ್ತದೆ. ದೇಶದ ಅಭಿವೃದ್ದಿಯ ದೃಷ್ಟಿಯಿಂದ ಹಾಗು ಹಲವಾರು ಸಕಾರಾತ್ಮಕ ಅಂಶಗಳ ಕಾರಣದಿಂದ ದ್ವಿಪಕ್ಷ ವ್ಯವಸ್ಥೆ ತುಂಬಾ ಉತ್ತಮವಾದದ್ದು. ಉದಾಹರಣೆಗೆ ಬೇಕಾದರೆ ವಿಶ್ವದ ದೈತ್ಯ 'ಅಮೇರಿಕ' ವನ್ನೇ ತೆಗೆದುಕೊಳ್ಳಿ.  ದ್ವಿಪಕ್ಷ ವ್ಯವಸ್ಥೆಯಲ್ಲಿ ಈ ಮೈತ್ರಿ ಸರಕಾರಗಳ ಜಂಜಾಟ ಇರುವುದಿಲ್ಲ, ಕಚ್ಚಾಟಗಳಿರುವುದಿಲ್ಲ, ಅಭಿವೃದ್ದಿಗೆ ಯಾವುದೇ ತೊಡರುಗಳಿರುವುದಿಲ್ಲ. ಇಂತಹ ಒಂದು ದ್ವಿಪಕ್ಷ ವ್ಯವಸ್ಥೆಯ ಬಗ್ಗೆ ಭಾರತದ ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಅರಿವು ಮೂಡಿಸುವ ಯತ್ನಕ್ಕೆ ನಾವು ಸಂತೋಷಪಡಬೇಕಾಗಿದೆ. ಹಾಗೆಯೇ ಅಲ್ಲಿ ಕೇಳಲಾದ 'ವಂಶಪಾರಂಪರ್ಯದ ಆಡಳಿತವನ್ನು ನೀವು ಇಷ್ಟ ಪಡುತ್ತೀರಾ?' ಎಂಬ ಪ್ರಶ್ನೆಯಲ್ಲಿ ಎಲ್ಲೂ ಕಾಂಗ್ರೆಸ್ ಅನ್ನು ಉಲ್ಲೇಖ ಮಾಡಿಲ್ಲ. ಆದರೆ ಆ ಪ್ರಶ್ನೆ ನೇರವಾಗಿ ಕಾಂಗ್ರೆಸ್ ಅನ್ನು ಉಲ್ಲೇಖಿಸಿದಂತಿದೆ ಎಂದು ನೀವು ಭಾವಿಸಿದರೆ ನೀವು ವಂಶಪಾರಂಪರ್ಯದ ಆಡಳಿತವನ್ನು ಇಷ್ಟಪಡುತ್ತೀರೆಂದಾಯಿತು. 

ಈ ಪಠ್ಯಗಳನ್ನು ಓದಿದರೆ ಮಕ್ಕಳು ಮತೀಯವಾದಿಗಳಾಗುತ್ತಾರೆ ಎಂದಿದ್ದೀರಿ. ಆದರೆ ಅದು ಇಲ್ಲಿರುವ ಯಾವ ಅಂಶಗಳಿಂದ ಎಂದು ತಿಳಿಯಲಿಲ್ಲ. ಯಾಕೆಂದರೆ ಇಲ್ಲಿ ಯಾವುದೇ ಒಂದು ಧರ್ಮದ ನಿಂದನೆಯಾಗಲಿ, ಮತ್ತೊಂದು ಧರ್ಮದ ವೈಭವೋಪೇತ ವರ್ಣನೆಯಾಗಲೀ ಇಲ್ಲ. ಬದಲಾಗಿ ಇಲ್ಲಿ ಭಾರತೀಯ ಸಂಸ್ಕೃತಿಯ ವರ್ಣನೆ ಇದೆ, ಭವ್ಯ ಪರಂಪರೆಯ ಸಾಲುಗಳಿವೆ, ಪ್ರಾಚೀನ ಭಾರತದ ಘಮವಿದೆ, ಸ್ವಾತಂತ್ರ್ಯ ಸಂಗ್ರಾಮದ ನೈಜ್ಯ ಚಿತ್ರಣಗಳಿವೆ. ಒಟ್ಟಾರೆಯಾಗಿ ಮಕ್ಕಳಿಗೆ ಕಲ್ಪನಾರಹಿತವಾದ 'ನೈಜ್ಯ' ಇತಿಹಾಸದ ಭೋಧೆಗಳಿವೆ. ಹಾಗಾಗಿ ಇಲ್ಲಿ ಯಾರೂ ಇದರ ವಿರುದ್ಧ ಎಚ್ಚೆತ್ತುಕೊಳ್ಳಬೇಕಾದ, ಪ್ರತಿಭಟಿಸಬೇಕಾದ ಅಗತ್ಯ ಇಲ್ಲ. ಬದಲಾಗಿ ನಿಮ್ಮ ಮನೋಧರ್ಮದ ವಿರುದ್ಧ ನೀವೇ ಪ್ರತಿಭಟಿಸಿ. ಆಗ ನೀವು 'ಕೇಸರಿ' ಎಂದು ಕರೆಯುತ್ತಿರುವ ಬಣ್ಣವು ಶುಭ್ರವಾಗಿ ಕಂಡು ಬರುವುದು.!

ಕೊನೆ ಕುಟುಕು : ದಯವಿಟ್ಟು 'ಕೇಸರಿ'ಯನ್ನು ಪಾಷಾಣ ಎನ್ನಬೇಡಿ. ಮಕ್ಕಳು ಚಿತ್ರ ಬಿಡಿಸುವಾಗ ಪಾಪ ಹೆದರಿಕೊಂಡು 'ಕೇಸರಿ' ಬಣ್ಣವನ್ನೇ ಬಳಸದಿರಬಹುದು..!