Tuesday, February 28, 2012

ಧರೆಗಿಳಿದ ಹುಣ್ಣಿಮೆಯೇ...


ಅಂದ ಅಂದ ಅಂದ ಅಂದಗಾತಿ ನೀನು
ಈ ಚೆಲುವಿಗಿನ್ನು ಸಾಟಿಯಿಲ್ಲ ಏನೂ
ಆ ಚಂದಮಾಮ ಕೂಡ ನಾಚಿಕೊಂಡನೇನು...

ಅಗೋ ಹುಣ್ಣಿಮೆಯು ಕಳೆದು ಹೋಗಿದೆಯೆಂದು
ಚಂದಿರ ದೂರಿತ್ತಿಹ
ಅದು ಎಲ್ಲಿ ಎಂದು ಹುಡುಕಿ ಹೋಗಲು
ಅದು ನೀನೆ ಅಂದಿಹ
ಹುಣ್ಣಿಮೆಯ ರೂಪದವಳೇ, ಚೆಲುವಿನ ಸಿರಿಯಿವಳೇ
ಅಂದ ಅಂದ ಅಂದ ಅಂದಗಾತಿಯೇ...

ನೇಸರನ ಕಾಂತಿಗಿಂತ ನಿನ್ನ ಕಣ್ಣ ಕಾಂತಿಯೇ ಅಂದ
ಆ ಸಪ್ತ ಸ್ವರಗಳಿಗಿಂತ ನಿನ್ನ ಕಂಠ ಸ್ವರವೇ ಚಂದ
ಉಪಮೆಯಿಲ್ಲದ ಚೆಲುವೇ, ತಿದ್ದಿ ತೀಡಿದ ಬೊಂಬೆಯೇ
ಅಂದ ಅಂದ ಅಂದ ಅಂದಗಾತಿಯೇ...

ನಾ ಕಳೆದುಹೋಗಿಹೆನು ನಿನ್ನ ಚೆಲುವಿನಲೆಯಲ್ಲಿ 
ನಿನ್ನ ಕಾಲ್ಗೆಜ್ಜೆ ದನಿಗೆ ನಾ ಮರುಳಾಗಿ ಹೋಗಿ
ಒಲವ ಮೆರವಣಿಗೆಗೆ ಶುರುವಿಟ್ಟುಕೊಂಡಿಹೆನು 
ನನ್ನೊಲವ ಪ್ರಾಣವೇ, ನೀನೆಂದು ನನ್ನವಳೇ  
ಅಂದ ಅಂದ ಅಂದ ಅಂದಗಾತಿಯೇ..

ಅಂದ ಅಂದ ಅಂದ ಅಂದಗಾತಿ ನೀನು
ಈ ಚೆಲುವಿಗಿನ್ನು ಸಾಟಿಯಿಲ್ಲ ಏನೂ
ಆ ಚಂದಮಾಮ ಕೂಡ ನಾಚಿಕೊಂಡನೇನು...

Sunday, February 5, 2012

ದ್ವಾರಕನಾಥ್ ರವರೆ, ನಿಮಗೆ 'ಕೇಸರಿ' ಎಂಬ ಕಲರ್ ಕೋಡ್ ಕೊಟ್ಟವರಾರು..

(ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಅವರಿಗೊಂದು ಬಹಿರಂಗ ಪತ್ರ.)

ದ್ವಾರಕನಾಥ್ ಅವರೇ, ನೀವು ಇತ್ತೀಚಿಗೆ ಪ್ರಜಾವಾಣಿಯಲ್ಲಿ ಬರೆದ 'ಪ್ರಾಥಮಿಕ ಪಠ್ಯದಲ್ಲಿ ಕೇಸರೀಕರಣದ ಸ್ಯಾಂಪಲ್' ಎಂಬ ಲೇಖನದ ಬಗ್ಗೆ ಹಲವು ಸಂದೇಹಗಳಿರುವುದರಿಂದ ಈ ಪ್ರತಿಕ್ರಿಯೆಯನ್ನು ನೀಡಲಿಚ್ಚಿಸುತ್ತೇನೆ. 

ಮೊದಲನೆಯದಾಗಿ ನೀವು ಅರ್ಥೈಸಿಕೊಂಡಂತೆ 'ಕೇಸರೀಕರಣ' ಎಂದರೇನು ಎಂದು ತಿಳಿಯಬಯಸುತ್ತೇನೆ. ಭಾರತದ ಮೂಲ ಇತಿಹಾಸವನ್ನು, ಸಂಸ್ಕೃತಿಯನ್ನು, ಪರಂಪರೆಯನ್ನು, ಪ್ರಾಚೀನ ಭಾರತದ ಜನರ ಜೀವನ ವಿಧಾನಗಳನ್ನು, ಅವರು ಆಚರಿಸಿಕೊಂಡು ಬರುತ್ತಿದ್ದ ವಿವಿಧ ಆಚರಣೆಗಳನ್ನು ಯಥಾವತ್ತಾಗಿ ತಿಳಿಸಿಕೊಡುವುದು ಕೇಸರೀಕರಣವಾಗುತ್ತದೆಯೇ?.. ಇಷ್ಟಕ್ಕೂ ನಿಮಗೆ ಈ 'ಕೇಸರಿ' ಎಂಬ ಕಲರ್ ಕೋಡ್ ಕೊಟ್ಟವರು ಯಾರು?... ಹಾಗಿದ್ದಲ್ಲಿ ಹಿಂದಿನ ಪಠ್ಯಪುಸ್ತಕಗಳಲ್ಲಿ ಇದ್ದಂತೆ ಭಾರತದ ಮೇಲೆ ಹಲವು ಬಾರಿ ಧಾಳಿ ಮಾಡಿ ಇಲ್ಲಿನ ಹಲವು ವೈಭವೋಪೇತ ದೇಗುಲಗಳನ್ನು ನಾಶ ಮಾಡಿ, ಸಂಪತ್ತನ್ನು ಲೂಟಿಗೈದ ಮಹಮ್ಮದ್ ಗಜಿನಿ, ಮಹಮ್ಮದ್ ಘೋರಿ ಮುಂತಾದ ಲೂಟಿಕೋರರ ವರ್ಣನೆ.. ಭಾರತದ ಮೇಲೆ ದಂಡೆತ್ತಿ ಬಂದ ಅಲೆಕ್ಸಾಂಡರನನ್ನು ಸೋಲಿಸಿ ಓಡಿಸಿದ 'ಭಾರತೀಯ' ದೊರೆ 'ಪೌರವ'ನನ್ನು ವರ್ಣಿಸದೇ ಅಲೆಕ್ಸಾಂಡರನನ್ನು ವರ್ಣಿಸಿರುವುದು.. ಸ್ವಾತಂತ್ರ ಹೋರಾಟದ ಪಾಠಗಳಲ್ಲಿ ಆಜಾದ್, ಸಾವರ್ಕರ್, ನೇತಾಜಿ, ಭಗತ್ ಸಿಂಗ್, ಲಾಲ ಲಜಪತ್ ರಾಯ್ ಯಂತವರನ್ನು ನಾಲ್ಕೈದು ಸಾಲುಗಳಿಗೆ ಸೀಮಿತಗೊಳಿಸಿ ಗಾಂಧೀ-ನೆಹರೂ ಮುಂತಾದ ಕಾಂಗ್ರೆಸ್ಸ್ ನಾಯಕರುಗಳ ಬಗ್ಗೆ ಪುಟಗಟ್ಟಲೆ ಬರೆಯುವುದು.. ಮೌಲಾನ ಅಬ್ದುಲ್ ಕಲಾಮ್ ಅಜಾದರಂತಹ ಗಾಂಧಿಯ ಹಿಂಬಾಲಕರ ಬಗ್ಗೆ ಪಾಠಗಳನ್ನು ಸೃಷ್ಟಿಸಿ, ಅಶ್ಫಾಕುಲ್ಲ ಖಾನ್ ನಂತಹ ಕ್ರಾಂತಿಕಾರಿ ದೇಶಪ್ರೇಮಿಯನ್ನು ಕಡೆಗಣಿಸಿರುವುದು.. ಶಿವಾಜಿ ರಾಜ್ಯ ಕಟ್ಟಿದ ರೀತಿ, ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ಅವನು ಪಟ್ಟ ಶ್ರಮದ ಬಗ್ಗೆ ಪಾಠಗಳನ್ನು ರಚಿಸದೇ ಧರ್ಮಾಂಧ ಔರಂಗಜೇಬ, ಟಿಪ್ಪು ಸುಲ್ತಾನ್ ನನ್ನು ಪಠ್ಯದಲ್ಲಿ ವರ್ಣಿಸಿ ಸೇರಿಸಿರುವುದು .. ಇವೆಲ್ಲ ನಿಮಗೆ ಸರಿ ಕಂಡು ಬರುವುದೇ.. ಒಂದರ್ಥದಲ್ಲಿ ಇವೆಲ್ಲ 'ಹಸಿರೀಕರಣ'ವಾಗದೆ?!!!! ಅದಕ್ಕೇಕೆ ನೀವು 'ಹಸಿರು' ಎಂಬ ಕಲರ್ ಕೋಡ್ ಕೊಡುವುದಿಲ್ಲ.? ಸುಳ್ಳು ಇತಿಹಾಸವನ್ನು ಸೃಷ್ಟಿಸಿ ಬರೆದರೆ ಅದು ನಿಮಗೆ ಒಪ್ಪಿಗೆಯಾಗುತ್ತದೆ. ಅದೇ ಭಾರತದ ನಿಜವಾದ ಇತಿಹಾಸವನ್ನು ಮಕ್ಕಳಿಗೆ ತೆರೆದಿಟ್ಟರೆ ಅದು ಹೇಗೆ ಕೆಸರೀಕರಣವಾಗುತ್ತದೆ?

ಹೈದರಾಲಿಯನ್ನು ಶತ್ರುವೆಂದು ಬಿಂಬಿಸಲಾಗಿದೆ ಎಂದಿರುವ ನೀವು ಅದು ಹೈದರಾಲಿಯ ಬಗೆಗಿನ ಪಾಠವೋ ಅಥವಾ ರಾಣಿ ಚೆನ್ನಮ್ಮನ ಬಗೆಗಿನ ಪಾಠವೋ ಎಂಬುದನ್ನು ಸ್ಪಷ್ಟಪಡಿಸಿ. ನನಗೆ ಗೊತ್ತಿರುವಂತೆ ಅದು ರಾಣಿ ಚೆನ್ನಮ್ಮನ ಕುರಿತ ಪಾಠವಾಗಿರುವುದರಿಂದ ಅವಳ ವಿರುದ್ಧ ಯುದ್ಧ ಮಾಡಿ ಸೋತ ಹೈದರಾಲಿ 'ಶತ್ರು'ವೇ ಆಗುತ್ತಾನೆ ಹೊರತು ಮಿತ್ರನಾಗುವುದಿಲ್ಲ. ಒಂದು ಕಲ್ಪನೆಯ ಉದಾಹರಣೆ ಕೊಡುವುದಾದರೆ ಒಂದು ವೇಳೆ ಆ ಕಾಲಕ್ಕೆ ಚೆನ್ನಮ್ಮ ಹಾಗು ನನ್ನ ನಡುವೆ ಯುದ್ದವಾಗಿದ್ದರೆ, ಆ ಘಟನೆಯನ್ನು ಚೆನ್ನಮ್ಮ ಕುರಿತ ಪಠ್ಯದಲ್ಲಿ ಅಳವಡಿಸುವಾಗ ನನ್ನನ್ನು 'ಶತ್ರು' ಎಂದೇ ಸಂಭೋಧಿಸಲಾಗುತ್ತಿತ್ತು. ಅದರಲ್ಲಿ ಎದುರಾಳಿ ಮುಸ್ಲಿಂಮನೋ, ಹಿಂದುವೋ ಎಂಬ ಪ್ರಶ್ನೆ ಬರುವುದಿಲ್ಲ. ಇನ್ನು ಚೆನ್ನಮ್ಮನ ಕುರಿತ ವಿಸ್ಕ್ರುತವಾದ ಪಾಠದಲ್ಲಿ 'ಮಂಗಳೂರಿನ ಇಗರ್ಜಿಯೊಂದು ರಾಣಿ ಚೆನ್ನಮ್ಮಾಜಿ ದಾನವಿತ್ತ ನಿವೇಶನದಲ್ಲಿದೆ' ಎಂಬುದು ಅನಗತ್ಯ ಎನಿಸುವುದಿಲ್ಲ. ಅದಕ್ಕೆ ಸಾಕ್ಷ್ಯವಿಲ್ಲ, ಅದು ಸುಳ್ಳು ಎಂಬುವುದಾದರೆ ಮಾತ್ರ ಅದು ಅನಗತ್ಯವಾಗುತ್ತಿತ್ತು. ಅದು ಸತ್ಯವಾದ ಕಾರಣ ನಿಮಗೆ 'ಅನಗತ್ಯ'ವಾಗಿ ಕಂಡು ಬಂದಿದೆ. ಯಾಕೆಂದರೆ ನಿಮಗೆ 'ಸುಳ್ಳಿನ ಇತಿಹಾಸ'ವೇ ಇಷ್ಟವೆನಿಸಿರಬೇಕು.

ಈ ಹಿಂದೆ 
ಪಠ್ಯಗಳಲ್ಲಿ ರಾಮ-ರಹೀಮ ಎಂಬ ಹೆಸರುಗಳನ್ನೂ ಬಳಸಲಾಗುತ್ತಿತ್ತು ಆದರೆ ಈಗಿನ 'ಕುಟುಂಬ, ಸಮುದಾಯ ಮತ್ತು ಸಮಾಜ' ಎಂಬ ಪಾಠದಲ್ಲಿ ಕೇವಲ ಹಿಂದೂ ಕುಟುಂಬವನ್ನಷ್ಟೇ ವಿವರಿಸಲಾಗಿದೆ ಎಂದಿದ್ದೀರಿ. ಅಂದರೆ ನಿಮ್ಮ ಮಾತಿನ ಅರ್ಥ ರಾಮನ ಜತೆ ರಹೀಮನನ್ನೂ ಸೇರಿಸಬೇಕು ಎಂದು. ಆದರೆ ಭಾರತದಲ್ಲಿ ರಾಮ ರಹೀಮ ಒಂದೇ ಕುಟುಂಬದಲ್ಲಿ ಇರುವುದನ್ನು ಎಲ್ಲಾದರೂ ಕಂಡಿದ್ದೀರಾ? ಅಲ್ಲದೆ 'ಕುಟುಂಬ, ಸಮುದಾಯ ಮತ್ತು ಸಮಾಜ' ಎಂಬ ಪಾಠದಲ್ಲಿ ಬಹು ಸಂಖ್ಯಾತ ಸಮುದಾಯದ ಕುಟುಂಬವನ್ನು ವಿವರಿಸದೆ ಅಲ್ಪಸಂಖ್ಯಾತ ಸಮುದಾಯದ ಕುಟುಂಬವನ್ನು ವಿವರಿಸಲಾಗುವುದೇ?

ಇನ್ನು ಪುಟ ೬೭ ರ ಮರು ಮತಾಂತರದ ಬಗ್ಗೆ. 'ಮತಾಂತರವೆಂದರೆ ರಾಷ್ಟ್ರಾಂತರ' ಎಂದು ಸಾವರ್ಕರರು ಬಹಳ ಹಿಂದೆಯೇ ಹೇಳಿದ್ದರು. ಇತ್ತೀಚಿಗೆ ಇಂಡೋನೇಷಿಯ ಧರ್ಮದ ಆಧಾರದ ಮೇಲೆ ವಿಭಜನೆ ಹೊಂದಿದ್ದನ್ನು ನೀವು ಮರೆತಿರಲಾರಿರಿ. ಹಾಗಿರುವಾಗ ಪುಟ ೬೭ ರಲ್ಲಿ ಮರು ಮತಾಂತರವನ್ನು ದೇಶಪ್ರೇಮವೆಂದು ಹೇಳಿರುವುದು ಸರಿಯಾಗಿಯೇ ಇದೆ ಅಲ್ಲವೇ?

ಇನ್ನು'ವೇದಕಾಲದ ಭಾರತ' ಎಂಬ ಪಾಠದಲ್ಲಿ ವೇದಗಳು ಹಾಗು ವೈದಿಕ ಆಚರಣೆಗಳ ಬಗ್ಗೆ ಬರೆಯದೆ ನಮ್ಮ-ನಿಮ್ಮ ಬಗ್ಗೆ ಬರೆಯಲಾಗುವುದೇ.. ಪಾಠದ ಹೆಸರೇ 'ವೇದಕಾಲದ ಭಾರತ' ಎಂದಿರುವಾಗ ನಿಮ್ಮದೇಕೆ ಕೊಂಕುನುಡಿ ಎಂದು ಅರಿವಾಗಲಿಲ್ಲ.

8 ನೇ ತರಗತಿಯ ಸಮಾಜ ವಿಜ್ಞಾನವನ್ನು ತೆರೆಯುತ್ತಿದ್ದಂತೆ ಆಘಾತವಾಗುತ್ತದೆ ಎಂದಿದ್ದೀರಿ.! ಯಾಕೆ ಅದರಲ್ಲಿ ಯಾವುದಾದರೂ ಚೇಳು, ವಿಷಜಂತುಗಳಿತ್ತೆ?! ಅದರಲ್ಲಿರುವ 'ಅಖಂಡ ಭಾರತ'ದ ನಕ್ಷೆ ನೋಡಿ ನಿಮಗೆ ಆಘಾತವಾಗಿದೆ. ಪ್ರಾಚೀನ ಭಾರತದ ಇತಿಹಾಸ ನೋಡಿದರೆ ನಮ್ಮ ಭಾರತ ಆ ನಕ್ಷೆಯಲ್ಲಿರುವಂತೆಯೇ ಇತ್ತು. ಅದರಲ್ಲೇನೂ ಹೊಸದಿಲ್ಲ. ಹಿಂದಿನ ಭಾರತ ಹೇಗಿತ್ತು ಎಂಬುದನ್ನು ಮಕ್ಕಳಿಗೆ ತಿಳಿಸುವ ಸಲುವಾಗಿ ಆ ನಕ್ಷೆಯನ್ನು ಹಾಕಲಾಗಿದೆ. ಅದರಲ್ಲಿರುವ ಪಾಕಿಸ್ತಾನ, ಬಾಂಗ್ಲಾ, ಬರ್ಮಾ, ಬೂತಾನ್, ಜೊತೆಗೆ ಮಹಾಭಾರತ ಕಾಲದ ಗಾಂಧಾರ ದೇಶ (ಈಗಿನ ಅಫ್ಘಾನಿಸ್ತಾನ), ಬ್ರಹ್ಮ ದೇಶ, ಶ್ಯಾಮ ದೇಶ ಗಳು ಪ್ರಾಚೀನ ಭಾರತದ ಅಂಗಗಳೇ.. ಅಲ್ಲಿ ಅಮೇರಿಕ, ಜಪಾನ್, ಜರ್ಮನಿಗಳಿದ್ದರೆ ನಿಮ್ಮ ಆಘಾತಕ್ಕೊಂದು ಅರ್ಥವಿರುತ್ತಿತ್ತು..! 

ಇನ್ನು ಪ್ರಜಾಪ್ರಭುತ್ವ ಎಂಬ ಅಧ್ಯಾಯದಲ್ಲಿ ಕಮ್ಯುನಿಷ್ಟ್ ಸರಕಾರಗಳ ಬಗ್ಗೆ ಹೇಳಿರುವುದು ಸರಿಯಾದುದೇ ಆಗಿದೆ.. ಹಾಗೆಯೇ ದ್ವಿಪಕ್ಷ ವ್ಯವಸ್ಥೆಯ ಬಗ್ಗೆ ಚರ್ಚಿಸಲು ಹೇಳಿರುವುದು ಭಾರತದ ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ರಾಜಕೀಯ ನಾಯಕರುಗಳು ತಮ್ಮ ಸ್ವಾರ್ಥಕ್ಕಾಗಿ ಹುಟ್ಟು ಹಾಕುವ ಪ್ರಾದೇಶಿಕ ಪಕ್ಷಗಳು ರಾಜಕೀಯ ಅಸ್ಥಿರತೆಯನ್ನು ಉಂಟುಮಾಡುತ್ತದೆ. ದೇಶದ ಅಭಿವೃದ್ದಿಯ ದೃಷ್ಟಿಯಿಂದ ಹಾಗು ಹಲವಾರು ಸಕಾರಾತ್ಮಕ ಅಂಶಗಳ ಕಾರಣದಿಂದ ದ್ವಿಪಕ್ಷ ವ್ಯವಸ್ಥೆ ತುಂಬಾ ಉತ್ತಮವಾದದ್ದು. ಉದಾಹರಣೆಗೆ ಬೇಕಾದರೆ ವಿಶ್ವದ ದೈತ್ಯ 'ಅಮೇರಿಕ' ವನ್ನೇ ತೆಗೆದುಕೊಳ್ಳಿ.  ದ್ವಿಪಕ್ಷ ವ್ಯವಸ್ಥೆಯಲ್ಲಿ ಈ ಮೈತ್ರಿ ಸರಕಾರಗಳ ಜಂಜಾಟ ಇರುವುದಿಲ್ಲ, ಕಚ್ಚಾಟಗಳಿರುವುದಿಲ್ಲ, ಅಭಿವೃದ್ದಿಗೆ ಯಾವುದೇ ತೊಡರುಗಳಿರುವುದಿಲ್ಲ. ಇಂತಹ ಒಂದು ದ್ವಿಪಕ್ಷ ವ್ಯವಸ್ಥೆಯ ಬಗ್ಗೆ ಭಾರತದ ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಅರಿವು ಮೂಡಿಸುವ ಯತ್ನಕ್ಕೆ ನಾವು ಸಂತೋಷಪಡಬೇಕಾಗಿದೆ. ಹಾಗೆಯೇ ಅಲ್ಲಿ ಕೇಳಲಾದ 'ವಂಶಪಾರಂಪರ್ಯದ ಆಡಳಿತವನ್ನು ನೀವು ಇಷ್ಟ ಪಡುತ್ತೀರಾ?' ಎಂಬ ಪ್ರಶ್ನೆಯಲ್ಲಿ ಎಲ್ಲೂ ಕಾಂಗ್ರೆಸ್ ಅನ್ನು ಉಲ್ಲೇಖ ಮಾಡಿಲ್ಲ. ಆದರೆ ಆ ಪ್ರಶ್ನೆ ನೇರವಾಗಿ ಕಾಂಗ್ರೆಸ್ ಅನ್ನು ಉಲ್ಲೇಖಿಸಿದಂತಿದೆ ಎಂದು ನೀವು ಭಾವಿಸಿದರೆ ನೀವು ವಂಶಪಾರಂಪರ್ಯದ ಆಡಳಿತವನ್ನು ಇಷ್ಟಪಡುತ್ತೀರೆಂದಾಯಿತು. 

ಈ ಪಠ್ಯಗಳನ್ನು ಓದಿದರೆ ಮಕ್ಕಳು ಮತೀಯವಾದಿಗಳಾಗುತ್ತಾರೆ ಎಂದಿದ್ದೀರಿ. ಆದರೆ ಅದು ಇಲ್ಲಿರುವ ಯಾವ ಅಂಶಗಳಿಂದ ಎಂದು ತಿಳಿಯಲಿಲ್ಲ. ಯಾಕೆಂದರೆ ಇಲ್ಲಿ ಯಾವುದೇ ಒಂದು ಧರ್ಮದ ನಿಂದನೆಯಾಗಲಿ, ಮತ್ತೊಂದು ಧರ್ಮದ ವೈಭವೋಪೇತ ವರ್ಣನೆಯಾಗಲೀ ಇಲ್ಲ. ಬದಲಾಗಿ ಇಲ್ಲಿ ಭಾರತೀಯ ಸಂಸ್ಕೃತಿಯ ವರ್ಣನೆ ಇದೆ, ಭವ್ಯ ಪರಂಪರೆಯ ಸಾಲುಗಳಿವೆ, ಪ್ರಾಚೀನ ಭಾರತದ ಘಮವಿದೆ, ಸ್ವಾತಂತ್ರ್ಯ ಸಂಗ್ರಾಮದ ನೈಜ್ಯ ಚಿತ್ರಣಗಳಿವೆ. ಒಟ್ಟಾರೆಯಾಗಿ ಮಕ್ಕಳಿಗೆ ಕಲ್ಪನಾರಹಿತವಾದ 'ನೈಜ್ಯ' ಇತಿಹಾಸದ ಭೋಧೆಗಳಿವೆ. ಹಾಗಾಗಿ ಇಲ್ಲಿ ಯಾರೂ ಇದರ ವಿರುದ್ಧ ಎಚ್ಚೆತ್ತುಕೊಳ್ಳಬೇಕಾದ, ಪ್ರತಿಭಟಿಸಬೇಕಾದ ಅಗತ್ಯ ಇಲ್ಲ. ಬದಲಾಗಿ ನಿಮ್ಮ ಮನೋಧರ್ಮದ ವಿರುದ್ಧ ನೀವೇ ಪ್ರತಿಭಟಿಸಿ. ಆಗ ನೀವು 'ಕೇಸರಿ' ಎಂದು ಕರೆಯುತ್ತಿರುವ ಬಣ್ಣವು ಶುಭ್ರವಾಗಿ ಕಂಡು ಬರುವುದು.!

ಕೊನೆ ಕುಟುಕು : ದಯವಿಟ್ಟು 'ಕೇಸರಿ'ಯನ್ನು ಪಾಷಾಣ ಎನ್ನಬೇಡಿ. ಮಕ್ಕಳು ಚಿತ್ರ ಬಿಡಿಸುವಾಗ ಪಾಪ ಹೆದರಿಕೊಂಡು 'ಕೇಸರಿ' ಬಣ್ಣವನ್ನೇ ಬಳಸದಿರಬಹುದು..!


Saturday, February 4, 2012

ನಿರ್ಭಾವುಕ ಹೃದಯದಲ್ಲಿ...


ಕರಿಮುಗಿಲ ಬಾನಿನಲ್ಲಿ ಮಿಂಚೊಂದು ಹಾದು ಹೋದಂತೆ
ಈ ಬಾಳ ಹಾದಿಯಲ್ಲಿ ಒಲವೊಂದು ಸುಳಿದು ಹೋಗಿ
ಕಣ್ಣಾಮುಚ್ಚಾಲೆಯಾಟ ಆಡುತ್ತಿದೆಯಲ್ಲ..

ಅಂಧಕಾರದ ಅಡವಿಯಲ್ಲಿ ಅಂಧನಾಗಿ ಸಾಗುತ್ತಿರಲು 
ಕಣ್ಣ ನೀಡಿ ಕಿತ್ತು ಕೊಂಡರೆ ತಿರುಗಿ ಸಾಗಲಿ ಹೇಗೆ..
ನಿರ್ಭಾವುಕ ಹೃದಯದಲ್ಲಿ ಭಾವನೆಗಳ ಬೆಳೆಸಿ ಹೋದರೆ
ಬಂಧವಿಲ್ಲದೆ ಭಾವನೆಗಳು ಅಸುನೀಗದೇ...

ಪ್ರೀತಿ ಕಾಣದ ಬದುಕಿನಲ್ಲಿ ಪ್ರೀತಿ ಬಿತ್ತಿ ದೂರ ಹೋದರೆ
ಒಂಟಿ ಪ್ರೀತಿಯ ಜಂಟಿ ಮಾಡಲು ಮತ್ತೆ ಹೆಣಗಲಿ ಹೇಗೆ..
ಒಲವ ಪಾಠವ
ಹೇಳಿಕೊಟ್ಟು ಮರೆವ ಪಾಠವ ಮರೆತೇ ಹೋದರೆ
ಒಲವ ವ್ಯೂಹದಿ ಸಿಲುಕಿ ಹೃದಯ ಅಸ್ತಮಿಸದೇ...



Thursday, February 2, 2012

ಏನ್ ಗುರು ರಾಜಕೀಯನಾ?


ಇತ್ತೀಚೆಗೆ ಬನವಾಸಿ ಬಳಗದವರು ನಡೆಸುತ್ತಿರುವ  ‘ಏನ್ ಗುರು’ ಎಂಬ ಬ್ಲಾಗ್ ನಲ್ಲಿ ಪ್ರಕಟವಾದ ‘RSS ಕಣ್ಣಲ್ಲಿ ಭಾಷಾ ನೀತಿ, ಒಕ್ಕೂಟ ಮತ್ತು ಸಮಾಜ’ ಎಂಬ ಲೇಖನವನ್ನು ಓದಿದೆ. ಲೇಖಕರ ಮಾತುಗಳು ಏಕಮುಖಿಯಾಗಿವೆಯೇನೋ ಎನಿಸಿ ಈ ಪ್ರತಿಕ್ರಿಯೆಯನ್ನು ದಾಖಲಿಸುತ್ತಿದ್ದೇನೆ. 

ಲೇಖನ ಆರಂಭದಲ್ಲಿ ಆರೆಸ್ಸೆಸ್ಸಿನ ಧನಾತ್ಮಕ ಅಂಶಗಳ ಕುರಿತು ಲೇಖಕರು ಗಮನ ಸೆಳೆಯುತ್ತಾರೆ. ಆದರೆ ಒಂದು ಕಡೆ ನೆರೆ ಬರ ಹಾಗು ಇತರ ವಿಕೋಪಗಳ ಸಂದರ್ಭದಲ್ಲಿ ಜಾತಿ ಮತ ಲೆಕ್ಕಿಸದೆ ಜನತೆಯ ಸಹಾಯಕ್ಕೆ ಧಾವಿಸುವ ಆರೆಸ್ಸೆಸ್ ನ ಬಗ್ಗೆ ಹೊಗಳುವ ಲೇಖಕರು ಮತ್ತೊಂದು ಕಡೆ ಪ್ರಾಂತೀಯ ವಿರೋಧದ ಬಗ್ಗೆ ಮಾತನಾಡುತ್ತಾರೆ.! ಪ್ರಾಂತೀಯ ಹಾಗು ವೈವಿಧ್ಯತಾ ವಿರೋಧವಿದ್ದರೆ ಆರೆಸ್ಸೆಸ್ ದೇಶದ ಯಾವದೇ ಭಾಗದಲ್ಲಿ ಉಂಟಾಗುವ ವಿಕೋಪಗಳ ಸಂದರ್ಭದಲ್ಲಿ ನೆರವಿಗೆ ಧಾವಿಸುತ್ತಿತ್ತೆ..?!
ಆರೆಸ್ಸೆಸಿನ ಪೂಜನೀಯ ಗುರುಗಳಾದ ಮಾಧವ ಸದಾಶಿವ ಗೋಳವಾಲ್ಕರ್ ಗುರೂಜಿಯವರ ‘ಚಿಂತನ ಗಂಗಾ’ ಪುಸ್ತಕವನ್ನಾಧರಿಸಿ ಆ ಲೇಖನವನ್ನು ಬರೆಯಲಾಗಿದೆ. ಆ ಸಮಗ್ರ ಗ್ರಂಥವನ್ನು ಲೇಖಕರು ಓದಿರುವುದು ಸಂತೋಷದಾಯಕ. ಆದರೆ ಅದನ್ನು ಸರಿಯಾಗಿ ಅರ್ಥೈಸುವಲ್ಲಿ ಎಡವಿದ್ದಾರೆ ಎಂಬುದೇ ವಿಪರ್ಯಾಸ.!

ಗೋಳವಾಲ್ಕರ್ ಅವರು ‘ಹಿಂದಿ’ಯನ್ನು ರಾಷ್ಟ್ರ ಭಾಷೆಯನ್ನಾಗಿ ತರಲು ಇಚ್ಚಿಸಿದ್ದರು ನಿಜ. ಅದಕ್ಕೆ ಒಂದು ಗಟ್ಟಿಯಾದ ಕಾರಣವೂ ಇತ್ತು. ಭಾರತದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತಿನಿಂದ ಮಣಿಪುರದವರೆಗೆ ಹಿಂದಿಯ ಪರಿಚಯವಿದೆ. ತಮಿಳುನಾಡು ಮತ್ತು ಕೇರಳದ ಕೆಲ ಪ್ರದೇಶಗಳನ್ನು ಹೊರತುಪಡಿಸಿದರೆ ಹೆಚ್ಚು ಕಡಿಮೆ ಭಾರತದಾದ್ಯಂತ ಹಿಂದಿಯನ್ನು ಮಾತನಾಡುತ್ತಾರೆ ಇಲ್ಲವೇ ಅರ್ಥ ಮಾದಿಕೊಳ್ಳುತ್ತಾರೆ. ಈ ಕಾರಣಗಳಿಂದ ಹಿಂದಿಯು ಭಾರತದಂತಹ ದೇಶದಲ್ಲಿ ವ್ಯಾಪಕ ಸಂವಹನ ಮಾಧ್ಯಮವಾಗಬಲ್ಲುದು ಎಂಬ ದೂರದೃಷ್ಟಿ ಗುರೂಜಿಯವರದಾಗಿತ್ತು. ಅವರು ‘ಹಿಂದಿ’ಯನ್ನು ರಾಷ್ಟ್ರ ಭಾಷೆಯಾಗಿ ಬಳಸಲು ಹೇಳಿದರೆ ಹೊರತು ಭಾರತದ ಇತರ ಮೂಲ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲಯಾಳಂ, ಗುಜರಾತಿ ಹಾಗು ಇತರ ಭಾಷೆಗಳನ್ನು ತೆಗೆದುಹಾಕಲು ಎಲ್ಲೂ ಹೇಳಿಲ್ಲ. ಕೇವಲ ಗುರೂಜಿಯವರಷ್ಟೇ ಅಲ್ಲದೆ, ಈ ದೇಶದ ‘ರಾಷ್ಟ್ರಪಿತ’ ಎಂದು ಕರೆಸಿಕೊಳ್ಳುವ ಗಾಂಧೀಜಿಯವರು ಕೂಡ ದೇಶದ ಮೂಲೆ ಮೂಲೆಗಳಲ್ಲಿ ಹಿಂದಿ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದರು ಎಂಬುದನ್ನು ಇತಿಹಾಸದ ಪುಟಗಳಿಂದ ತಿಳಿದುಕೊಂಡಿರುತ್ತೀರಿ. ಆ ಕಾರಣಕ್ಕೆ ಗಾಂಧಿಯವರನ್ನು ಕೂಡ ವಿರೋಧಿಸುವಿರೇನು?!.


ಇನ್ನು ಸಂಸ್ಕೃತದ ವಿಷಯಕ್ಕೆ ಬರೋಣ. ಸ್ವತಃ ಗುರೂಜಿಯವರೇ ಹೇಳುವಂತೆ ಎಲ್ಲ ಭಾರತೀಯ ಭಾಷೆಗಳ ಸಾಹಿತ್ಯದ ಮೂಲಪ್ರೇರಣೆಯೇ ಸಂಸ್ಕೃತ. ಇದರಲ್ಲಿ ಎರಡು ಮಾತಿಲ್ಲ. ಪ್ರಾಚೀನ, ಮಧ್ಯಕಾಲ ಭಾಷೆಗಳೊಳಗೆ ಸಂಸ್ಕೃತದ ಬೇರುಗಳು ಹಾಸುಹೊಕ್ಕಾಗಿ ಕಂಡು ಬರುತ್ತವೆ. ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಕಲ್ಪನೆಗಳು, ಪರಿಭಾಷೆಗಳ ಕುರಿತು ಹೇಳುವ ಕಾಲಕ್ಕೆ ಇಂದಿಗೂ ನಾವು ಸಂಸ್ಕೃತದ ಕಡೆಗೆ ನೋಡುತ್ತೇವೆ. ಇದು ಸಂಸ್ಕೃತ ಭಾಷೆಗಿರುವ ಗಟ್ಟಿತನವನ್ನು ಸೂಚಿಸುತ್ತದೆ. ಇದೇ ಕಾರಣಗಳಿಗಾಗಿ ಗುರೂಜಿಯವರು ಸಂಸ್ಕೃತದ ಬಳಕೆಯನ್ನು ಉತ್ತೆಜಿಸಿದರು ಮತ್ತು ಸಂಸ್ಕೃತ ಬಳಕೆಗೆ ಬರುವವರೆಗೆ ಅನುಕೂಲದ ದೃಷ್ಟಿಯಿಂದ ನಮ್ಮದೇ ದೇಶದ ಹಿಂದಿಗೆ ಆದ್ಯತೆ ನೀಡಿದರು. ಕನ್ನಡ ಹಾಗು ಸಂಸ್ಕೃತದ ಸಂಬಂಧದ ಬಗ್ಗೆ ಹೇಳುವುದಾದರೆ, ಕನ್ನಡದ ಎಲ್ಲಾ ಪ್ರಾಚೀನ ಸಾಹಿತ್ಯಗಳು ಸಂಸ್ಕೃತ ಪಠ್ಯಗಳ ಪ್ರಭಾವದಿಂದಲೇ ರಚಿಸಲ್ಪಟ್ಟವುಗಳಾಗಿವೆ. ಇದೇ ಕಾರಣಕ್ಕೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ಹಿಂದೆ ಮುಂದೆ ನೋಡುತ್ತಿತ್ತು. ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯ ಹೊರತು ಪಡಿಸಿ ಮಿಕ್ಕೆಲ್ಲ ಸಾಹಿತ್ಯ ಪ್ರಕಾರಗಳು ಸಂಸ್ಕೃತ ಪ್ರಭಾವದಿಂದ ಹುಟ್ಟಿದವು. ಅದುದರಿಂದ ಸ್ವೋಪಜ್ಞತೆಯ ದೃಷ್ಟಿಯಿಂದ ಕನ್ನಡದ ಸಾಹಿತ್ಯ ಪ್ರಕಾರಗಳು ಕಡಿಮೆ ಎಂದು ಕಾಂಗ್ರೆಸ್ ಸರ್ಕಾರ ವಾದಿಸಿತ್ತು. ಅದೃಷ್ಟವಶಾತ್ ಕನ್ನಡದ ಚಿಂತಕ ಮನಸ್ಸುಗಳ ಒತ್ತಾಯದಿಂದ ಶಾಸ್ತ್ರೀಯ ಸ್ಥಾನಮಾನ ಲಭ್ಯವಾಯಿತು. ವಿಶೇಷವೆಂದರೆ ಕೋರ್ಟಿನಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗದ ಹಾಗೆ ಪಿರ್ಯಾದೆ ಮಾಡಿದ್ದು ನಮ್ಮದೇ ದ್ರಾವಿಡ ಗಾಂಧಿ ಎಂಬ ವ್ಯಕ್ತಿ. ಇನ್ನು  ಗುರೂಜಿಯವರ ನಿರ್ಧಾರಗಳು, ಯೋಜನೆಗಳು ಯಾವುದೂ ಬಾಲಿಶವಾಗಿರಲಿಲ್ಲ ಅಥವಾ ಪ್ರಾಂತೀಯ ವಿರೋಧಿಯಾಗಿರಲಿಲ್ಲ. ದೇಶದ ಹಿತ ದೃಷ್ಟಿಯಿಂದ ಒಂದು ಗಟ್ಟಿ ನಿರ್ಧಾರ ಕೈಗೊಳ್ಳಲು ಅವರು ಸಮರ್ಥರಾಗಿದ್ದರು.
ರಾಜ್ಯಗಳ ಸ್ವಯಂಮಾಧಿಕಾರದ ಬಗ್ಗೆ ಪ್ರಸ್ತಾಪಿಸಿರುವ ಬನವಾಸಿ ಬಳಗದ ಲೇಖಕರು ಗುರೂಜಿಯವರ ಅಖಂಡ ಭಾರತದ ನಿಲುವನ್ನು ವಿರೋಧಿಸುತ್ತಿದ್ದಾರೆ. ಬಹುಶಃ ಲೇಖಕರ ಮನಸ್ಸು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿ ಸಂಕುಚಿತಗೊಂಡಂತೆ ಕಾಣುತ್ತದೆ. ಅವರಿಗೆ ಭಾರತ ಹಾಗು ಭಾರತದ ಏಕತೆಯ ಬಗ್ಗೆ ಚಿಂತೆಯಿದ್ದಂತಿಲ್ಲ. ಆದರೆ ಗುರೂಜಿ ಗೋಳವಾಲ್ಕರ್ ಅವರು ದೇಶದ ಹಾಗು ದೇಶದ ಜನರ ಏಕತ್ವದ ಬಗ್ಗೆ ಚಿಂತಿತರಾಗಿದ್ದರು. ದೇಶವನ್ನು ಭಾಷೆ, ಗುಂಪು, ಜನಾಂಗ, ಸಂಸ್ಕೃತಿಗಳ ಆಧಾರದ ಮೇಲೆ ವಿಂಗಡಿಸಿ ಹೆಚ್ಚು ಕಡಿಮೆ ಸ್ವಯಾಮಾಧಿಕಾರ ಕೊಡುವುದನ್ನು ಗುರೂಜಿ ವಿರೋಧಿಸಿದರು. ಬಹುಶಃ ಈಗ ನೀರು, ನೆಲ, ಭಾಷೆಗಾಗಿ, ರಾಜ್ಯ-ರಾಜ್ಯಗಳು ಕಚ್ಚಾಡುವುದನ್ನು ಗುರೂಜಿಯವರು ಮುಂಚೆಯೇ ಮನಗಂಡಿರಬೇಕು. ಇಂತಹ ಒಬ್ಬ ದೂರದೃಷ್ಟಿಯ ನೇತಾರನನ್ನು ಹೊಂದಿದ್ದ ಆರೆಸ್ಸೆಸ್ ಬಗ್ಗೆ ಹೆಮ್ಮೆ ಪಡಬೇಕಾಗಿದೆ. ಕರ್ನಾಟಕದ ಒಳಗೂ ಹೈದ್ರಾಬಾದ್ ಕರ್ನಾಟಕ, ಹಳೆ ಮೈಸೂರು, ಮುಂಬೈ ಕರ್ನಾಟಕ ಎಂಬ ಹಲವು ಕರ್ನಾಟಕಗಳಿವೆ ಎಂಬುದನ್ನು ನಾವು ನೆನಪಿನಲ್ಲಿ ಇಡಬೇಕಾಗುತ್ತದೆ. ಇದು ನಾಳೆ ಪ್ರಾಂತೀಯತೆಯನ್ನು ಮತ್ತೆ ಕೆಣಕುವುದಿಲ್ಲ ಎಂಬುದಕ್ಕೆ ಏನೂ ಗ್ಯಾರಂಟಿ?

ಸಂಘದ ಧರ್ಮ ದೃಷ್ಟಿಯ ಬಗ್ಗೆ ಹೇಳುತ್ತಾ ಗುರೂಜಿಯವರನ್ನು ತಪ್ಪಾಗಿ ಅರ್ಥೈಸಿರುವುದು ಕಂಡು ಬರುತ್ತದೆ. ಭಾಷೆಯ ರಕ್ಷಣೆಗಾಗಿ ಇರುವ ಬನವಾಸಿ ಬಳಗ ಇಲ್ಲಿ ಧರ್ಮ, ರಾಜಕೀಯದ ವಿಷಯಗಳನ್ನು ಯಾಕೆ ಎತ್ತಿದೆ ಎಂಬುದೇ ತಿಳಿಯುವುದಿಲ್ಲ. ಇದು ಕೇವಲ ಆರೆಸ್ಸೆಸ್ ಅನ್ನು ನಿಂದಿಸಲೇಬೇಕೆಂಬ ಮನೋಭಾವದಿಂದ ಬರೆದಿರುವಂತಿದೆ. ಕ್ರಿಶ್ಚಿಯನ್ನರ ಮತಾಂತರ, ಇಸ್ಲಾಮಿಗರ ಭಯೋತ್ಪಾದನೆ, ಕಮ್ಯುನಿಷ್ಟರ ಅಭಿವೃದ್ದಿ ಕಾಣದ ಆಡಳಿತ, ಇವರೆಲ್ಲರುಗಳಿಂದ ಭಾರತೀಯ ಸಂಸ್ಕೃತಿ, ಪರಂಪರೆ ಮೇಲಾಗುತ್ತಿರುವ ಆಕ್ರಮಣಗಳನ್ನು ಕಣ್ಣಾರೆ ನೋಡಿಯೇ ಗುರೂಜಿಯವರು ಇವುಗಳನ್ನು ರಾಷ್ಟ್ರದ ಆಪತ್ತುಗಳೆಂದು ಉಲ್ಲೇಖಿಸಿದ್ದರು. ಇಲ್ಲಿ ಭಾರತದ ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳ ಮೇಲಿನ ಗುರೂಜಿಯವರ ಕಾಳಜಿ ಎದ್ದು ಕಾಣುತ್ತದೆಯೇ ಹೊರತು ಧರ್ಮ ನಿಂದನೆಯಲ್ಲ.

ಆರೆಸ್ಸೆಸ್ ಗೆ ‘ಬಿಜೆಪಿ’ ಎನ್ನುವ ಇನ್ನೊಂದು ಮುಖವಿದೆ ಎಂದಿದ್ದೀರಿ. ಬಿಜೆಪಿ ಆರೆಸ್ಸೆಸ್ಸಿನ ಮುಖವಲ್ಲ. ಅದು ಆರೆಸ್ಸೆಸ್ ಮೂಲದಿಂದ ಬಂದ ಒಂದು ರಾಜಕೀಯ ಪಕ್ಷವಷ್ಟೇ. ಆರೆಸ್ಸೆಸ್ಸಿಗೆ ತನ್ನದೇ ಆದ ಶಿಸ್ತು-ಸಿದ್ದಾಂತಗಳಿವೆ, ಜೊತೆಗೆ ಆರೆಸ್ಸೆಸ್ಸಿನ ಉಸ್ತುವಾರಿ ನೋಡಿಕೊಳ್ಳಲು ಬೇರೆಯವರದ್ದೇ ಆದ ಒಂದು ಪಡೆಯಿದೆ. ಅದೇ ರೀತಿ ಬಿಜೆಪಿಗೆ ಬೇರೆಯೇ ಆದ ಪದಾಧಿಕಾರಿಗಳು, ಸಮಿತಿಗಳಿವೆ. ಕೆಲ ಕ್ಲಿಷ್ಟ ಸಂದರ್ಭಗಳಲ್ಲಿ ಬಿಜೆಪಿ, ಆರೆಸ್ಸೆಸ್ಸಿನ ಕೆಲ ಹಿರಿಯರ ಸಲಹೆ ಕೇಳಿರಬಹುದು. ಬಿಜೆಪಿಯ ಹೆಚ್ಚಿನವರು ಆರೆಸ್ಸೆಸ್ಸ್ ಮೂಲದವರಾದ್ದರಿಂದ ಸಲಹೆಗಳನ್ನು ಕೇಳುವುದು ಸಾಮಾನ್ಯ. ಅದರಲ್ಲೇನೂ ವಿಶೇಷ ಕಂಡು ಬರುವುದಿಲ್ಲ. ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಮತ ಪಡೆಯಲು ಮುಸ್ಲಿಮರ ಓಲೈಕೆ ಮಾಡುತ್ತದೆ ಎನ್ನುವ ನೀವು ಕಾಂಗ್ರೆಸ್ ನ ಮುಸ್ಲಿಂ ಓಲೈಕೆ ಅಸ್ತ್ರಗಳಾದ ‘ಕೋಮು ಸೌಹಾರ್ದ ಕಾಯಿದೆ’, ಹಿಂದುಳಿದ ವರ್ಗಗಳಲ್ಲಿ ಕೋಟಾದಲ್ಲಿ ಮುಸ್ಲಿಮರಿಗೆ ಒಳ ಮೀಸಲಾತಿಗಳಂತಹ ದೊಡ್ಡ ದೊಡ್ಡ ವಿಷಯಗಳನ್ನೇ ಮುಚ್ಚಿಟ್ಟಿರುವುದು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯುವಂತಿದೆ.! ನೀವು ಬರೆದ ಲೇಖನದ ಕೊನೆಯ ಪ್ಯಾರಕ್ಕೂ ಉಳಿದ ಭಾಗಕ್ಕೂ ಯಾವುದೇ ಸಂಬಂಧ ಕಂಡು ಬರುವುದಿಲ್ಲ. ಅದು ಕೇವಲ ಬಿಜೆಪಿ, ಆರೆಸ್ಸೆಸ್ಸ್ ಅನ್ನು ಜರಿಯಲೆಂದೇ ಸೃಷ್ಟಿಸಿದಂತಿದೆ.

ಇಷ್ಟೆಲ್ಲ ಹೇಳಿದ ಮೇಲೆ ತಮ್ಮ ಲೇಖನಕ್ಕೆ ಕಾರಣವಾದ ಹುಬ್ಬಳಿ ಆರೆಸೆಸ್ಸ್ ಸಮಾವೇಶದ ವಿಷಯಕ್ಕೆ ಬರೋಣ. ಇಲ್ಲಿ ಮೋಹನ್ ಭಾಗವತರ ಮಾತುಗಳನ್ನು ಹೊರತುಪಡಿಸಿ ಎಲ್ಲ ಸಂದರ್ಭದಲ್ಲೂ ಕನ್ನಡಕ್ಕೆ ಅಗ್ರಸ್ಥಾನ ನೀಡಲಾಗಿದೆ. ಆಯಾ ಪ್ರಾಂತ್ಯಭಾಷೆಗಳು ಎಷ್ಟು ಮುಖ್ಯ ಎಂಬುದು ತಿಳಿಯದೇ ರಾಷ್ಟ್ರವನ್ನು ಸಂಘಟಿಸಲು ಸಾಧ್ಯವಿಲ್ಲ ಎಂಬ ಸಂಗತಿ ಆರೆಸೆಸ್ಸ್ ನಾಯಕರುಗಳಿಗೆ ತಿಳಿಯದೇ ಇರುತ್ತದೆಯೇ?

ರಾಜಕೀಯ ಮಾಡಬೇಕೆಂದಾದಲ್ಲಿ ನೇರವಾಗಿ ಮಾಡಬಹುದು. ಧರ್ಮದ ಹೆಸರಿನಲ್ಲಿ ಆರೆಸ್ಸೆಸ್ ರಾಜಕೀಯ ಮಾಡುತ್ತಿದೆ ಎಂದು ಹೇಳುವ ಲೇಖನವು ಭಾಷೆಯೆಂಬ ಸಂಗತಿಯನ್ನು ಇಟ್ಟುಕೊಂಡು ತಾನು ಮಾಡುತ್ತಿರುವ ರಾಜಕೀಯವನ್ನು ಮರೆಮಾಚುತ್ತದೆ.




(ಈ ಲೇಖನ ಬರೆಯಲು ಪ್ರೇರೇಪಿಸಿದ ಗೆಳೆಯ ಸಾತ್ವಿಕ್ ಅವರಿಗೆ ಪ್ರೀತಿ ತುಂಬಿದ ಕೃತಜ್ಞತೆಗಳು)

Sunday, January 22, 2012

ಅವರು ನಿಷ್ಕ್ರಿಯರ 'ಗಾಂಧಿ' ಆಗಿರಲಿಲ್ಲ.. ಕ್ರೀಯಾಶೀಲರ 'ನೇತಾಜಿ' ಆಗಿದ್ದರು...




ಭಾರತದ ಸ್ವಾತಂತ್ರ ಸಂಗ್ರಾಮದ ಇತಿಹಾಸವನ್ನು ಹೇಳ ಹೊರಟರೆ ಅದು ಇಂದು ನಾಳೆಗೆ ಮುಗಿಯುವಂತದ್ದಲ್ಲ.. ಆ ಪ್ರವಾಹೋಪಾದಿಯ ಘಟನೆಗಳೇ ಹಲವು ಕೋಟಿ ಪುಟಗಳ ಮಹಾ ಗ್ರಂಥವಾದೀತು.! ಆ ಸಮಯದಲ್ಲಿ ಭಾರತ ಮಾತೆಯ ಬಿಡುಗಡೆಗಾಗಿ ಹೋರಾಡಿದ ಮಹಾನ್  ನಾಯಕರುಗಳೆಷ್ಟೋ, ಹೋರಾಟಗಾರರೆಷ್ಟೋ.. ಅಂತಹ ಹಲವರ ಮದ್ಯೆ ಭಿನ್ನವಾಗಿ ನಿಲ್ಲುವ, ಅಹಿಂಸಾವಾದವನ್ನು ಬಹಿರಂಗವಾಗಿ ವಿರೋಧಿಸಿದ, ಭಗವದ್ಗೀತೆಯ ತಿರುಳಾದ ದುಷ್ಟದಮನ ಶಿಷ್ಟಪಾಲನವನ್ನು ಅನುಷ್ಠಾನಕ್ಕೆ ತರಲು ಯತ್ನಿಸಿದ ಧೀಮಂತ ನಾಯಕ, ಕ್ರಾಂತಿ ಪುರುಷ ನೇತಾಜಿ ಸುಭಾಶ್ ಚಂದ್ರ ಬೋಸ್ ರ ಜನ್ಮ ದಿನವಿಂದು (ಜನವರಿ 23). 
ನೇತಾಜಿಯವರ ಹೋರಾಟದ ದಿನಗಳು ರಾಷ್ಟ್ರೀಯ ಕಾಂಗ್ರೆಸ್ ನಿಂದ ಆರಂಭವಾಯಿತು. ಆಗ ಗಾಂಧೀಜಿಯವರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿತ್ತು. ಆದರೆ ಗಾಂಧೀಜಿ ಅಹಿಂಸೆಯಲ್ಲಿ ನಂಬಿಕೆ ಇಟ್ಟವರು. ತಮ್ಮ ನಾಯಕತ್ವದ ಚಳುವಳಿಗಳಲ್ಲಿ  ಎಲ್ಲಾದರೂ ಹಿಂಸಾ ಘಟನೆಗಳು ನಡೆದರೆ ಅದನ್ನು ವಿರೋಧಿಸುತ್ತಿದ್ದರು. ಯಾಕೆಂದರೆ ಬ್ರಿಟಿಷರಿಗೆ ನೋವಾಗುವುದು ಗಾಂಧೀಜಿಯವರಿಗೆ ಇಷ್ಟವಿರಲಿಲ್ಲ. !!!! ಗಾಂಧೀಜಿಯವರ ಪ್ರತಿಯೊಂದು ಚಳುವಳಿಗಳಲ್ಲೂ ಇದು ಎದ್ದು ಕಾಣುತ್ತದೆ.! ಇದು ಬಿಸಿ ರಕ್ತದ ಯುವಕ ಸುಭಾಷ್ ಚಂದ್ರ ಬೋಸ್ ರಿಗೆ ಸಹ್ಯವಾಗಲಿಲ್ಲ. ಅದನೆಲ್ಲ ಒಪ್ಪಿಕೊಳ್ಳಲು ಅವರು ಗಾಂಧಿಯಾಗಿರಲಿಲ್ಲ..! ಅವರು ಸುಭಾಶ್ ಚಂದ್ರ ಬೋಸ್ ಆಗಿದ್ದರು..! ಕ್ರಾಂತಿ ಕ್ರಾಂತಿ ಎಂದು ಜಪಿಸುತಿದ್ದ ನೇತಾಜಿಯವರ ಮನಸ್ಸು ಈ ಗಾಂಧಿಯ ಶಿಖಂಡಿತನವನ್ನು ಒಪ್ಪಿಕೊಳ್ಳುವುದಾದರೂ ಹೇಗೆ..?! ಮುಂದೆ ಕಾಂಗ್ರೆಸ್ಸಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ್ದರೂ ಗಾಂಧೀಜಿ ಸುಭಾಷರ ಜಯವನ್ನು ಒಪ್ಪದ ಕಾರಣ ಹಾಗು ತನ್ನ ಮನಸ್ಸಿಗೆ ವಿರುದ್ಧವಾದ ಭಾವನೆ ಹೊಂದಿರುವ ಗಾಂಧೀಜಿಯೊಡನೆ ಮುಂದುವರಿಯಲು ಸಾಧ್ಯವಾಗದ ಕಾರಣ ನೇತಾಜಿ ಕಾಂಗ್ರೆಸ್ ನಿಂದ ಅನಿವಾರ್ಯವಾಗಿ ಹೊರಬಂದರು. ಅಲ್ಲಿಂದ ಸುಭಾಷರ ಕ್ರಾಂತಿಯ ಜೀವನ ಆರಂಭವಾಯಿತು. ಜೊತೆಗೆ ಭಾರತದ ಕ್ರಾಂತಿಯ ಪುಟಕ್ಕೆ ಹೊಸ ತಿರುವು ಕೂಡ..!

ಸುಭಾಷ್ ಚಂದ್ರ ಬೋಸರು ಅಪ್ರತಿಮ ದೇಶಭಕ್ತರಾಗಿದ್ದರು. ಸದಾ ಕ್ರಾಂತಿಗಾಗಿ ಬಯಸುತ್ತಿದ್ದರು. ನಿಷ್ಕ್ರಿಯತೆಯನ್ನು ಸಹಿಸುತ್ತಿರಲಿಲ್ಲ. ಮಹಾ ಜ್ಞಾನಿಗಳಾಗಿದ್ದರು. ಯಾವುದೇ ವಿಷಯವಿರಲಿ ಅಳೆದು ತೂಗಿ ತೀರ್ಮಾನ ತೆಗೆದುಕೊಳ್ಳುವ ಶಕ್ತಿ ಅವರಲ್ಲಿತ್ತು. ಆದರೆ ಗಾಂಧೀಜಿ ಇದಕ್ಕೆ ತದ್ವಿರುದ್ದರಾಗಿದ್ದರು. ಗಾಂಧೀಜಿಯ ಅಹಿಂಸಾವಾದ ಭಾರತೀಯರನ್ನು ನಿಷ್ಕ್ರಿಯರನ್ನಾಗಿ, ನಿರ್ವೀರ್ಯರನ್ನಾಗಿ, ಸೋಮಾರಿಗಳನ್ನಾಗಿ ಮಾಡಿತ್ತು.! ಗಾಂಧಿ ತಮ್ಮ ತತ್ವವನ್ನು ಜನರ ಮೇಲೆ ಸತ್ಯಾಗ್ರಹಗಳೆಂಬ ಮಾನಸಿಕ ಬಲ ಪ್ರಯೋಗಗಳ ಮೂಲಕ ಹೇರುತ್ತಿದ್ದರು. ತನ್ನ ತತ್ವವನ್ನು ಒಪ್ಪದವರನ್ನು ತನ್ನ ಗುಂಪಿನಿಂದ ಹೊರಗಿಡುತ್ತಿದ್ದರು. ಅಷ್ಟೇ ಅಲ್ಲದೆ ಅಂತಹವರನ್ನು ದೇಶವಿರೋಧಿಗಳಂತೆ ನಡೆಸಿಕೊಳ್ಳುತ್ತಿದ್ದರು. ಒಂದರ್ಥದಲ್ಲಿ ಗಾಂಧೀಜಿ ಸೋಮಾರಿಗಳ ನಾಯಕರಾಗಿದ್ದರೆ, ಸುಭಾಷ್ ಚಂದ್ರ ಬೋಸರು ಕ್ರಾಂತಿಕಾರಿಗಳ, ಉತ್ಸಾಹದ ಚಿಲುಮೆಗಳ, ಬಿಸಿ ರಕ್ತದ ಯುವ ಜನತೆಯ, ಸದಾ ಕ್ರೀಯಾಶೀಲರಾಗಿರುವವರ, ಅಪ್ರತಿಮ ದೇಶ ಭಕ್ತ ಬಂಧುಗಳ ನಾಯಕರಾಗಿದ್ದರು.




ನೇತಾಜಿಯವರು ಉಳಿದೆಲ್ಲ ನಾಯಕರುಗಳಿಗಿಂತ ಶ್ರೇಷ್ಠರಾಗಿ ಕಾಣುವುದು ಅವರ ಕ್ರೀಯಾಶೀಲತೆಗೆ. ನೇತಾಜಿ ಸುಭಾಷ್ ಚಂದ್ರ ಬೋಸರು ಕಟ್ಟಿದ 'ವಿದೇಶದಲ್ಲಿ ಸಂಘಟನೆಗೊಂಡ ಭಾರತದ ಮೊದಲ ಸೈನ್ಯ' ಎಂಬ ಹೆಗ್ಗಳಿಕೆ ಹೊಂದಿದ ( INA ) ಇಂಡಿಯನ್ ನ್ಯಾಷನಲ್ ಆರ್ಮಿಯ ಸ್ಥಾಪನೆಗಾಗಿ ನೇತಾಜಿಯವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಅದಕ್ಕಾಗಿ ಇಟಲಿ. ಜಪಾನ್, ಜರ್ಮನ್, ರಷ್ಯ ಗಳಲ್ಲಿ ಸುತ್ತಾಡಿ ಆ ದೇಶಗಳ ಸಹಾಯ ಕೋರಿ ಇಂಡಿಯನ್ ನ್ಯಾಷನಲ್ ಆರ್ಮಿ ಎಂಬ ವೀರರ ಯುವ ಸೈನ್ಯವನ್ನು ಹುಟ್ಟುಹಾಕಿದರು. ದುರ್ದೈವವಶಾತ್ ನೇತಾಜಿಯವರು 1945 ರ ವಿಮಾನ ಅವಘಡದಲ್ಲಿ ಕೊನೆಯುಸಿರೆಳೆಯದಿದ್ದರೆ(ಇನ್ನೂ ಶಂಕಾಸ್ಪದವಾಗಿಯೇ ಉಳಿದಿದೆ) ಹಾಗು 1945 ರ ವಿಶ್ವ ಮಹಾ ಯುದ್ಧದಲ್ಲಿ ಜಪಾನ್ ಇಟಲಿ ಜರ್ಮನ್ ರಾಷ್ಟ್ರಗಳು ಸೋತುಹೋಗದಿದ್ದರೆ ಬಹುಶಃ INA ಬ್ರಿಟಿಷರ ವಿರುದ್ಧ ಯುದ್ಧ ಮಾಡಿ ಭಾರತವನ್ನು 1947 ರ ಮುಂಚೆಯೇ ಸ್ವತಂತ್ರ ಗೊಳಿಸುತ್ತಿತ್ತೇನೋ..

ಇಂತಹ ಧೀಮಂತ ರಾಷ್ಟ್ರ ಪುರುಷ ನೇತಾಜಿಗೆ ಪ್ರೇರಣೆಯಾದವರದ್ದೇ ಒಂದು ತೂಕವಿದೆ. ಸುಭಾಷರು ಮಹಾಯೋಗಿ ವಿವೇಕಾನಂದರ ಭೋಧನೆಗಳಿಂದ ಪ್ರೆರಿತರಾಗಿದ್ದರು. ಹಿರಿಯ ಮುತ್ಸದ್ದಿ ಅರವಿಂದ ಘೋಷರ ಬರಹಗಳನ್ನು ತಪ್ಪದೆ ಓದುತ್ತಿದ್ದರು. ದೇಶಬಂಧು ಚಿತ್ತರಂಜನ್ ದಾಸ್ ನೇತಾಜಿಯವರ ರಾಜಕೀಯ ಗುರುಗಳಾಗಿದ್ದರು. ಇಟಲಿಯ ದೇಶಭಕ್ತ ಕ್ರಾಂತಿಕಾರಿ ಜೋಸೆಫ್ ಮೆಟೆನ್ಸಿಯ ಸಂಘಟನಾ ಚತುರತೆಯಿಂದ ಆಕರ್ಷಿತರಾಗಿದ್ದರು. ಕ್ರೂರ ಆಡಳಿತಗಾರ ಎಂದು ಕರೆಸಿಕೊಂಡ ಹಿಟ್ಲರ್ ನೊಂದಿಗೆ ನೇತಾಜಿಗೆ ಆತ್ಮೀಯ ಭಾಂಧವ್ಯವಿತ್ತು. ಶ್ರೀ ಕೃಷ್ಣ ಭೋದಧಿಸಿದ ಭಗವದ್ಗೀತೆಯ ಪ್ರಮುಖ ಸಾಲುಗಳನ್ನು ಯಾವಾಗಲೂ ಮನನ ಮಾಡಿಕೊಳ್ಳುತ್ತಿದ್ದರು. ಇವರೆಲ್ಲರ ಆದರ್ಶಗಳನ್ನು ಸ್ವತಃ ತನ್ನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದರು ಮತ್ತು ಅಳವಡಿಸಿಕೊಂಡಿದ್ದರು ಕೂಡ. ಇದೇ ಕಾರಣಕ್ಕೆ ಸುಭಾಷ್ ಚಂದ್ರ ಬೋಸ್ ಉಳಿದೆಲ್ಲ ಸ್ವಾತಂತ್ರ ಹೋರಾಟಗಾರರಿಗಿಂತ ಭಿನ್ನವಾಗಿ ಕಾಣುತ್ತಾರೆ.

ಎಲ್ಲರಿಂದಲೂ 'ನೇತಾಜಿ' ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಸುಭಾಷ್ ಚಂದ್ರ ಬೋಸರನ್ನು ಗಾಂಧೀ-ನೆಹರು ಹಾಗು ಅವರ ಹಿಂಬಾಲಕ ಕಾಂಗ್ರೆಸ್ ನಾಯಕರುಗಳು ಹೊರಗಿಡಲು ಯತ್ನಿಸಿದರು. ಅವರುಗಳಿಗೆ ನೇತಾಜಿಯವರ ಕ್ರೀಯಾಶೀಲತೆ ಹಿಡಿಸಿಲ್ಲವೇನೋ ಅಥವಾ ರಾಜಕೀಯ ಮತ್ಸರವೋ.! ಆದರೆ ಒಂದಂತೂ ಸತ್ಯ. ನಿಷ್ಕ್ರಿಯ ಹಾಗು ಪರಮ ಸ್ವಾರ್ಥಿಗಳಾದ ಗಾಂಧೀಜಿ-ನೆಹರುಗಳಿಗಿಂತ ಸುಭಾಷ್ ಚಂದ್ರ ಬೋಸರ ವ್ಯಕ್ತಿತ್ವ ಯಾವಾಗಲೂ ಎತ್ತರದ ಸ್ಥಾನದಲ್ಲಿ ಕಂಡುಬರುತ್ತದೆ. ಮಹಾತ್ಮರಲ್ಲದವರನ್ನು ಮಹಾತ್ಮ ಎಂದು ಸ್ಮರಿಸುವ ಬದಲು ಮಹಾತ್ಮ ಎಂದು ಕರೆಸಿಕೊಳ್ಳಲು ಅರ್ಹರಾಗಿರುವ 'ನೇತಾಜಿ'ಯಂತವರನ್ನು ಸ್ಮರಿಸೋಣ..!
ಕ್ರೀಯಾಶೀಲರಾಗಿ.................. ನಿಷ್ಕ್ರಿಯರಾಗದಿರಿ..................!



Saturday, December 24, 2011

ಇದು ಲವ್ ಅಲ್ಲ... ಜಿಹಾದ್..!


ಚಿಕ್ಕಂದಿನಿಂದ ಹೆತ್ತು ಹೊತ್ತು ಸಾಕಿದ ಆ ಮುಗ್ಧ ತಂದೆ ತಾಯಿ, ಜೊತೆಯಲ್ಲೇ ಆಡುತ್ತ, ಚೇಷ್ಟೆ ಮಾಡುತ್ತ ಬೆಳೆದ ಪ್ರೀತಿಯ ಅಣ್ಣ, ತಮ್ಮ, ಅಕ್ಕ-ತಂಗಿಯರು, ಮೊಮ್ಮಗಳ ಮದುವೆ ನೋಡಲು ಒಂದಿನಿತು ಜೀವ ಹಿಡಿದು ನಿಂತ ಅಜ್ಜ ಅಜ್ಜಿಯರು, ಆತ್ಮೀಯ ಬಂಧು ಬಾಂಧವರು.. ಇಂತಹ ಒಂದು ಜನ್ಮಾಂತರದ ಭಾಂಧವ್ಯವನ್ನು ಕೆಲವೇ ಕ್ಷಣಗಳಲ್ಲಿ ತುಂಡರಿಸಿ ಯಾವುದೋ ಪರಧರ್ಮೀಯ 'ಲವ್ ಜಿಹಾದಿ' ಹುಡುಗನ ಜೊತೆ ಪರಾರಿಯಾದ ಜ್ಯೋತಿ, ರಮ್ಯ, ಪ್ರಿಯಾಂಕ, ಸಹನಾ.......ರವರುಗಳ ಈಗಿನ ಬದುಕು ಎಷ್ಟು ನರಕ ಸದೃಶವಾಗಿದೆ ಎಂಬುದನ್ನು ತಿಳಿಸಲಾದರೂ ಅವರು ಸಮಾಜದ ಮುಂದೆ ಬರುವರೇ..?! ಅವರನ್ನು ಅಗಲಿ ಕಣ್ಣೀರಾಗಿರುವ ಅವರ ಕುಟುಂಬಿಕರ ಮೋರೆ ನೋಡಲಾದರೂ ಬರುವರೇ..?! ಇಲ್ಲ... ಖಂಡಿತ ಬರಲಾರರು..! ಕತ್ತಲ ಕೂಪದಲ್ಲಿರುವ ಅವರುಗಳು ಈಗ ಸಮಾಜದ ಮುಂದೆ ಬರುವಷ್ಟೂ ಸ್ವತಂತ್ರರಾಗಿ ಉಳಿದಿಲ್ಲ...!

ಇವರುಗಳ ಬದುಕನ್ನು ಇಷ್ಟು ಹೀನಾಯವಾಗಿಸಿದ ಆ ಜಾಲದ ಹೆಸರಾದರು ಏನು? ಅದುವೇ 'ಲವ್ ಜಿಹಾದ್'. ಹಿಂದೂ-ಕ್ರಿಶ್ಚಿಯನ್ ತರುಣಿಯರನ್ನು 'ಪ್ರೀತಿ' ಎಂಬ ಎರಡಕ್ಷರದ ಪವಿತ್ರ ಭಾವನೆಯ ಹೆಸರಿನಲ್ಲಿ ನಾಟಕವಾಡಿ ಮತಾಂತರಿಸುವ ಮುಸ್ಲಿಂ ಮತಾಂಧರ ಜಾಲವೇ 'ಲವ್ ಜಿಹಾದ್'. ಒಂದು ವರ್ಷದ ಕೆಳಗೆ ಭಾರಿ ಸುದ್ದಿ ಮಾಡಿದ್ದ ಇದು ನಂತರ ಹಲವು ಪ್ರತಿಭಟನೆ, ಪ್ರತಿರೋಧಗಳ ಮಧ್ಯೆ ನಿಂತಂತೆ ಕಂಡರೂ ಈಗ ಮತ್ತೆ ಮರು ಹುಟ್ಟು ಪಡೆದುಕೊಂಡಿರುವುದು ಆಘಾತಕಾರಿ..!

ಮುಸ್ಲಿಮೇತರ ತರುಣಿಯರನ್ನು ಅವರ ಶಾಲೆ-ಕಾಲೇಜು, ಉದ್ಯೋಗದ ಸ್ಥಳಗಳಲ್ಲಿ ಪರಿಚಯಿಸಿಕೊಂಡು, ಬಣ್ಣ ಬಣ್ಣದ ಮಾತಿನಿಂದ ಮೋಡಿಗೊಳಿಸಿ, ಆಕರ್ಷಕ ಉಡುಗೊರೆಗಳನ್ನು ನೀಡಿ, ಪ್ರೀತಿಸಿ, ರಮಿಸಿ, ಕಾಮಿಸುವ ಲವ್ ಜಿಹಾದಿ (ಮುಸ್ಲಿಂ) ತರುಣರು ಆ ಹುಡುಗಿಯರ ಮನಸ್ಸನ್ನು ಪ್ರೀತಿಯ ಹೆಸರಿನಲ್ಲಿ ಕುರುಡಾಗಿಸಿಬಿಡುತ್ತಾರೆ. (ಇದರಲ್ಲಿ ಹೆಚ್ಚಿನ ಲವ್ ಜಿಹಾದಿ ಮುಸ್ಲಿಂ ತರುಣರು ತಮ್ಮನ್ನು ತಾವು 'ಹಿಂದೂ' ಎಂದು ಪರಿಚಯಿಸಿಕೊಂಡು ಜಾಲ ಹೆಣೆಯುವುದಿದೆ.) ಆದರೆ ಆತನ ಪ್ರೀತಿ ನಿಜವಲ್ಲ ಅದು ತಮ್ಮ ಭವಿಷ್ಯವನ್ನು ಹಾಳುಗೆಡವಲು ಹೆಣೆದಿರುವ ಜಾಲ ಎಂದು ಅರಿವಾಗುವುದು ಆ ಹುಡುಗಿ ತನ್ನ ಮನೆಯವರನ್ನೆಲ್ಲ ಬಿಟ್ಟು ಆ ಮುಸ್ಲಿಂ ಹುಡುಗನ ಜೊತೆ ನಿಖಾ (ಮದುವೆ) ಆಗಿ ಆತನ ಧರ್ಮಕ್ಕೆ ಮತಾಂತರಗೊಂಡ ಮೇಲೆಯೇ, ಇಲ್ಲವೇ ಆ ಹುಡುಗ ಕ್ಲಿಕ್ಕ್ಕಿಸಿದ ಆಕೆಯ ನಗ್ನ-ಅರೆ ನಗ್ನ ಚಿತ್ರಗಳ MMS ಕ್ಲಿಪ್ ಊರಿಡೀ ಹರಿದು ಆಕೆಯ ಮೊಬೈಲಿಗೆ ಬಂದ ಮೇಲೆಯೇ.. ಆದರೆ ಅಷ್ಟೊತ್ತಿಗೆ ಕಾಲ ಮಿಂಚಿ ಹೋಗಿರುತ್ತದೆ..!!


ತನ್ನ 'ಬಲಿ'ಯಾದ ಆ ಹುಡುಗಿಯನ್ನು ಮದುವೆಯಾಗುವ ಆತ ಇಸ್ಲಾಮಿನ ಒಂದೊಂದೇ ನಿಯಮಗಳನ್ನು ಆಕೆಯ ಮೇಲೆ ಹೇರತೊಡಗುತ್ತಾನೆ. ಸಲ್ವಾರ್, ಸೀರೆ, ಪ್ಯಾಂಟ್, ಟೀ-ಶರ್ಟ್ ಎಂದು ಸ್ವತಂತ್ರವಾಗಿ ಉಡುಗೆಗಳನ್ನು ಧರಿಸುತ್ತಿದ್ದ ಆಕೆಯ ಮೇಲೆ ಕರಿ ಬುರ್ಖಾವನ್ನು ಹೇರಲಾಗುತ್ತದೆ. ಆತನನ್ನು ಪ್ರೀತಿಸಿದ ತಪ್ಪಿಗೆ ಆಕೆ ಒಪ್ಪಿಕೊಳ್ಳುತ್ತಾಳೆ. ಮುಂದೆ ಒಂದರ ನಂತರ ಒಂದರಂತೆ ಮಕ್ಕಳನ್ನು ಹುಟ್ಟಿಸುವ ಆತ ಆಕೆಯನ್ನು  ಒಂದು ಹೆರಿಗೆ ಯಂತ್ರವನ್ನಾಗಿ ಮಾಡುತ್ತಾನೆ. ಬರೀ ಅಷ್ಟಕ್ಕೇ ಮುಗಿಯಲಿಲ್ಲ.. ಕೆಲವೇ ದಿನಗಳಲ್ಲಿ ಮನೆಗೆ ಇನ್ನೊಬ್ಬಳು ಸವತಿ ಬರುತ್ತಾಳೆ. ಮುಂದೆ ಮತ್ತೊಬ್ಬಳು.. 3-4 ಮದುವೆಯಾಗುತ್ತಾನೆ. ಅದಕ್ಕಿಂತಲೂ ಹೆಚ್ಚು ಆಗಬಹುದು.! ಆಕೆಯೊಬ್ಬಳನ್ನೇ 'ಪತ್ನಿ' ಯಾಗಿ ಸ್ವೀಕರಿಸಲು ಆತನೇನು 'ಹಿಂದೂ'ವೇ ?!. ಒಬ್ಬಳೇ 'ಧರ್ಮಪತ್ನಿ' ಎಂಬ ಕಟ್ಟು ಪಾಡು, ಕಟ್ಟಲೆಗಳು ಅವನಲ್ಲಾಗಲೀ, ಅವನ ಇಸ್ಲಾಂ ಧರ್ಮದಲ್ಲಾಗಲೀ ಇಲ್ಲ. ಇದನ್ನೆಲ್ಲಾ ಸಹಿಸಿಕೊಂಡು ಕತ್ತಲ ಕೂಪದಲ್ಲಿ ಬದುಕು ಸವೆಸುವ ಆಕೆ ಮುಂದೊಂದು ದಿನ ಬೀದಿಗೆ ಬೀಳಬೇಕಾಗುತ್ತದೆ. ಅಷ್ಟರಲ್ಲಿ ಹೆತ್ತು ಹೆತ್ತು ಹೆರಿಗೆ ಯಂತ್ರವಾಗಿರುವ ಆಕೆ ತನ್ನ ಸೌಂದರ್ಯವನ್ನೆಲ್ಲ  ಕಳಕೊಂಡಿರುತ್ತಾಳೆ. ಆಕೆಯನ್ನು ಮೂಸಿ ನೋಡುವವರು ಯಾರೂ ಇರುವುದಿಲ್ಲ. ಅನಿವಾರ್ಯವಾಗಿ ಆಕೆ ಆ ಮುಸ್ಲಿಂ ಹುಡುಗನೊಂದಿಗೆ ಬದುಕು ಸವೆಸುತ್ತಾಳೆ. ಇಲ್ಲವೇ ಆತ್ಮಹತ್ಯೆಗೆ ಶರಣಾಗಿ ಈ ಪ್ರಪಂಚದಿಂದಲೇ ಬಹುದೂರ ಸಾಗುತ್ತಾಳೆ. ಕೆಲವೊಮ್ಮೆ ಬದುಕಿನ ಅಧಾರಕ್ಕಾಗಿ ವೇಶ್ಯಾವಾಟಿಕೆಗೆ ಮುಖ ಮಾಡುವುದೂ ಇದೆ.. ಇಲ್ಲಿಗೆ ಆ ಲವ್ ಜಿಹಾದಿ ಹುಡುಗನ ಉದ್ದೇಶ ಈಡೇರಿದಂತಾಗುತ್ತದೆ. ಅದೇ ಆ ಹುಡುಗಿಯ ಜೀವನದ ನಿರ್ನಾಮ!!

ಇಂತಹ 10,000 ಕ್ಕೂ ಹೆಚ್ಚು ಪ್ರಕರಣಗಳು ಇಲ್ಲಿಯವರೆಗೆ ಬೆಳಕಿಗೆ ಬಂದಿವೆ. ಕೇರಳದಲ್ಲಿ ಅತೀ ಹೆಚ್ಚಿನ 6000 ದಷ್ಟು ಪ್ರಕರಣಗಳು ಬೆಳಕಿಗೆ ಬಂದಿದ್ದು ನಂತರದ ಸ್ಥಾನದಲ್ಲಿ ಕರ್ನಾಟಕವಿದೆ. ಅದರಲ್ಲೂ ಇತ್ತೀಚಿಗೆ ಬೆಳಕಿಗೆ ಬರುತ್ತಿರುವ ಲವ್ ಜಿಹಾದ್ ಪ್ರಕರಣಗಳು ಕರ್ನಾಟಕದಲ್ಲೇ ಆಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ನಮ್ಮ ಬುದ್ಧಿಜೀವಿಗಳೆನಿಸಿಕೊಂಡವರು, ರಾಜಕಾರಣಿಗಳು ಮಾತ್ರ ಈ ಬಗ್ಗೆ ಹೆಚ್ಚಿನ ಚರ್ಚೆಗೆ ಮುಂದಾಗುವುದಿಲ್ಲ. ಅದೇ ಒಬ್ಬ ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು ಪ್ರೀತಿಸಿ ಓಡಿ ಹೋಗಿ ವರಿಸಿದ್ದರೆ ಆಕ್ರೋಶಗೊಂಡು ಅದನ್ನು ದೊಡ್ಡ ರಂಪ ಮಾಡಲು ಮಾತ್ರ ನಾ ಮುಂದು ತಾ ಮುಂದು ಎಂದು ಧಾವಿಸುತ್ತಿದ್ದರು. ಜಮ್ಮು ಕಾಶ್ಮೀರದ ಅಮೀನ ಎಂಬ ಮುಸ್ಲಿಂ ಹುಡುಗಿ ರಜನೀಶ ಎಂಬ ಹಿಂದೂ ಹುಡುಗನನ್ನು ಪ್ರೀತಿಸಿ ವರಿಸಿದ್ದಕ್ಕೆ ಏನಾಯಿತು. ಅಲ್ಲಿನ ಇಡೀ ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ರಜನೀಶ ಪೋಲಿಸ್ ಕಸ್ಟಡಿಯಲ್ಲೇ ಹೆಣವಾಗಬೇಕಾಯಿತು.. ಆಗ ಇದ್ದ ಮುಸ್ಲಿಂ ಮೌಲ್ವಿಗಳ ಆಕ್ರೋಶ, ಬುದ್ದಿಜೀವಿಗಳ ಕಿಡಿ ನುಡಿಗಳು ಈಗ ಎಲ್ಲಿ ಅವಿತು ಹೋಗಿವೆ..

'ಪ್ರೀತಿ' ಎಂಬ ಎರಡಕ್ಷರದ ಅಮೂಲ್ಯ ಪವಿತ್ರ ಭಾವನೆಯನ್ನೇ ದಾಳವಾಗಿಸಿ ನಡೆಯುವ ಈ ಜಾಲದ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಈ ಬಗ್ಗೆ ಹೆಚ್ಚಿನ ಪ್ರಚಾರವಾಗಬೇಕು. ಎಲ್ಲಾ ಮುಸ್ಲಿಮೇತರ (ಹಿಂದೂ, ಕ್ರಿಶ್ಚಿಯನ್) ತರುಣಿಯರಿಗೆ ಹಾಗು ಅವರುಗಳ ಪೋಷಕರುಗಳಿಗೆ ಈ ಬಗ್ಗೆ ಜ್ನಾನವಿರಬೇಕು. ಯಾವಾಗ ಆ ಜಾಗೃತ ಮನೋಭಾವ ಅವರವರ ಮನದಲ್ಲಿ ಮೂಡುತ್ತೋ ಆಗ ಈ ಮುಂದೊಗಲಿಲ್ಲದ ಮುಸ್ಲಿಂ ಪಡ್ಡೆಗಳ 'ಲವ್ ಜಿಹಾದ್' ಜಾಲ ತನ್ನಿಂತಾನೆ ಇಲ್ಲವಾಗುತ್ತದೆ. 
ಸಹೋದರಿಯರೇ ಜಾಗೃತರಾಗಿರಿ.. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲೇ ಇದೆ ಎಂಬುದನ್ನು ಮರೆಯದಿರಿ..

Sunday, December 11, 2011

ಮನದ ಪರಿಧಿಯ ದಾಟಿ..

 
ಓ ಪ್ರಾಣವೇ.. ನಾ ಕಾಣದಾಗಿಹೆ 
ನಿನ್ನೊಲವಿನಾಳದಲಿ ಕರಗಿ ಹೋಗುತಲಿ
ಪದೇ ಪದೇ ನನ್ನ ಮನಸು ಕನವರಿಸುತ್ತಿದೆ ನಿನ್ನೇ
ನನ್ನೇ ಮರೆಯುತ.. ಬರೀ ನಿನ್ನೇ ನೆನೆಯುತ..

ಪರಿ ಪರಿಯಲಿ ಕಾಡುತಿಹೆ
ನೀ ಮನದ ಪರಿಧಿಯ ದಾಟಿ
ನಿನ್ನನುರಾಗಕೆ ಏನ ಕೊಡಲಿ ನಾ
ನಿನ್ನನೇ ಹೃದಯದಲಿಟ್ಟ ನಾ ಬರಿಗೈ ದಾಸನು..

ಕಣ್ಣ ಮುಚ್ಚೋ ಘಳಿಗೆಯಲ್ಲಿ
ಕನಸ ತುಂಬಾ ನೀನಿರುವೆ
ಮನದ ತುಂಬಾ ನಿನದೇ ಮಂದಹಾಸ
ಮಂದಗಾಮಿ ನಾ ನಿನ್ನ ಒಲವಿಗೆ.. ಬರೀ ನಿನ್ನನೇ ಕಾಣುತ..

ನವಿರಾದ ಹಾಡ ಹಿಂದೆ ನಿನ್ನದೇ ರಾಗವ ಕಂಡೆ
ನನ್ನೆದೆಯ ಬಡಿತದಲಿ ನಿನ್ನದೇ ಮಿಡಿತವ ಕಂಡೆ
ನೀನೇನೆ ನನ್ನ ಪ್ರಾಣ.. ನಿನಗಾಗಿಯೇ ನನ್ನ ಧ್ಯಾನ
ನಾ ಋಣಿಯು ನಿನ್ನ ಪ್ರೀತಿಗೆ ನಿನ್ನನೇ ಪ್ರೇಮಿಸುತ..