Thursday, May 16, 2013

'ವಂದೇ ಮಾತರಂ' ದೇವರ ಭಜನೆಯಲ್ಲ...... ನೂರು ಕೋಟಿ ಭಾರತೀಯರ ನಾಡಿ ಮಿಡಿತ......!!





ವಂದೇ ಮಾತರಂ.... 
ಎದೆಯುಬ್ಬಿಸಿ ಗರ್ವದಿಂದ ಗರ್ಜಿಸಿದಿವೆಂದರೆ ಮೈ ಮನಸ್ಸುಗಳು ರೋಮಾಂಚನಗೊಳ್ಳುತ್ತವೆ.. ಅದೆಂತಾ ಶಕ್ತಿಯಿದೆ ಈ 'ವಂದೇ ಮಾತರಂ' ನಲ್ಲಿ. ಅದೆಷ್ಟೋ ಹೋರಾಟಗಳ ಸ್ಪೂರ್ತಿ ಇದು, ದೇಶ ಪ್ರೇಮವ ಬಡಿದೆಬ್ಬಿಸುವ ಬೀಜಮಂತ್ರ , ಬ್ರಿಟಿಷರ ನಿದ್ದೆಗೆಡಿಸಿದ ಕ್ರಾಂತಿಗೀತೆ, ಪ್ರತಿಯೊಬ್ಬ  ಭಾರತೀಯನ ನಾಡಿ ಮಿಡಿತ...  ವಂದೇ ಮಾತರಂ ಅನ್ನು ವಿಶ್ಲೇಶಿಸ ಹೊರಟರೆ ಆ ವಿಶ್ಲೇಷಣೆಯೇ ಒಂದು ವೀರ ಗೀತೆ ಯಾದೀತು...!!!!

ಆದರೆ... ವಂದೇ ಮಾತರಂ ಅನ್ನು ಗೌರವಿಸುವ ವೀರ ಮನಸ್ಸುಗಳ ನಡುವೆ ಧರ್ಮದ ನೆಪವೊಡ್ಡಿ ಅದನ್ನು ವಿರೋಧಿಸುವ ಕೆಲ ವಿಷ ಮನಸ್ಸುಗಳೂ ತುಂಬಿರುವುದು ಖೇದಕರ..


ಮೊನ್ನೆ ಮೊನ್ನೆ ತಾನೆ ತಾನು ಮುಸ್ಲಿಂ ಎಂಬ ಕಾರಣಕ್ಕೆ ವಂದೇ ಮಾತರಂ ಹಾಡುವುದಿಲ್ಲ ಎಂದು ವಂದೇ ಮಾತರಂ ಹಾಡಿನ ಮಧ್ಯೆಯೇ ಸಂಸತ್ತಿನಿಂದ ಹೊರನಡೆದು ಉದ್ದಟತನ ತೋರಿದ ಬಿಎಸ್ಪಿ ಸಂಸದ ಶಫಿಕುರ್ ರೆಹಮಾನ್ ಬಗ್ಗೆ ಕೇಳಿರುತ್ತೀರಿ. ಇಂತಹ ಮತಾಂಧವಾದದ ನಡೆ ಇದೇ ಮೊದಲಲ್ಲ. ವಂದೇ ಮಾತರಂ ಅನ್ನು ವಿರೋಧಿಸಿ ಭಾರತೀಯರಲ್ಲಿ  ಬೀಜ ಬಿತ್ತಿದವರಲ್ಲಿ ಆಲಿ ಸಹೋದರರು ಮೊದಲಿಗರಾಗಿ ಕಂಡು ಬರುತ್ತಾರೆ.


ಆ ಘಟನೆ ಹೀಗಿದೆ,

1923. ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್ಸ್ ನ ರಾಷ್ಟ್ರೀಯ ಅಧಿವೇಶನ ನಡೆಯುತ್ತಿತ್ತು. ಆಗ ಪ್ರತಿ ಅಧಿವೇಶನದಲ್ಲಿ ವಂದೇ ಮಾತರಂ ಹಾಡುವ ಸಂಪ್ರದಾಯ ಬೆಳೆದು ಬಂದಿತ್ತು. ಪಂಡಿತ್ ವಿಷ್ಣು ದಿಗಂಬರ ಫಲುಸ್ಕರ್ ಪ್ರತಿ ವರ್ಷದಂತೆ ವಂದೇ ಮಾತರಂ ಹಾಡ ಹೊರಟಾಗ ಆಗಿನ ಕಾಂಗ್ರೆಸ್ಸ್ ಅಧ್ಯಕ್ಷ (ಮುಸ್ಲಿಂ ಲೀಗ್ ನ ಸ್ಥಾಪಕರಲ್ಲೊಬ್ಬರಾದ) ಮೌಲಾನ ಅಹಮದ್ ಆಲಿ ಆತನ ಸಹೋದರ ಶೌಕತ್ ಆಲಿ ತಡೆದರು. ಇಸ್ಲಾಂ ನ ಕಾನೂನಿನಂತೆ ಸಂಗೀತ ನಿಷಿದ್ಧ ಎಂಬುದು ಆವರ ಅವರು ಕೊಟ್ಟ ಕಾರಣವಾಗಿತ್ತು. ಹಠಾತ್ ಬೆಳವಣಿಗೆಯಿಂದ ಕೆಂಡಾ ಮಂಡಲರಾದ ಫಲುಸ್ಕರ್ ಇದು ಕಾಂಗ್ರೆಸ್ಸ್ ನ ಅಧಿವೇಶನ, ಒಂದು ಧರ್ಮದ ಸಭೆಯಲ್ಲ.. ಮುಸ್ಲಿಮರ ದರ್ಗಾ,  ಮಸೀದಿಯೂ ಅಲ್ಲ..  ಈ ರಾಷ್ಟ್ರೀಯ ವೇದಿಕೆ ಮೇಲೆ ವಂದೇ ಮಾತರಂ ಗೆ ಅಡ್ಡಿಪಡಿಸಲು ನಿಮಗೇನು ಅಧಿಕಾರವಿದೆ? ಅಧಿವೇಶನ ಪ್ರಾರಂಭವಾಗುವ ಮೊದಲು ಅಧ್ಯಕ್ಷೀಯ ಮೆರವಣಿಗೆ ಯಲ್ಲಿ ವಿಜೃಂಭಣೆಯ ಸಂಗೀತ ವಾದ್ಯಗಳೊಂದಿಗೆ ಬರುವಾಗ ನಿಮಗೆ ಹಿಡಿಸಿತೇ ?! ವಂದೇ ಮಾತರಂ ಗೆ ವಿರೋಧ ಇರುವವರು ಧಾರಾಳವಾಗಿ ಹೊರ ನಡೆಯಬಹುದು ಎಂದು ಆಲಿ ಸಹೋದರರನ್ನು ಜಾಡಿಸಿದರು. ನಂತರ ವಂದೇ ಮಾತರಂ ಅನ್ನು ಪೂರ್ತಿಯಾಗಿ ಹಾಡಿ ವಂದಿಸಿ ಕೆಳಗಿಳಿದರು.
ಮುಂದೆ ಇದೇ ಆಲಿ ಸಹೋದರರು ಜಿನ್ನಾ ಜತೆಗೂಡಿ ಪ್ರತ್ಯೇಕ ರಾಷ್ಟ್ರ ಪಾಕಿಸ್ತಾನದ ರಚನೆಗೆ ಕಾರಣರಾಗಿ ಅಲ್ಲಿಗೇ ವಲಸೆ ಹೋದರು. ಆದರೆ ಅವರಂತಹ  ವಿಷ ಮನಸ್ಸುಗಳು ಕೆಲವು ಇಲ್ಲೇ ಉಳಿದುಬಿಟ್ಟವು.  ಇಂದು ಅಂತಹ ಹಲವು ವಿಷ ಮನಸ್ಸುಗಳು ಕಾಣಸಿಗುತ್ತವೆ. . ಬಿಎಸ್ಪಿ ಸಂಸದ ಶಫಿಕುಲ್ ರೆಹಮಾನ್ ಹಾಗು ಆ ಘಟನೆ ನಂತರ ಆತನನ್ನು ಬೆಂಬಲಿಸಿ ವಾದಕ್ಕಿಳಿದ ಆತನ ಕೆಲ ಧರ್ಮೀಯರೂ ಕೂಡ ಈ ಪಟ್ಟಿಗೆ ಬರುತ್ತಾರೆ.

ಅಷ್ಟಕ್ಕೂ ವಂದೇ ಮಾತರಂ ನಲ್ಲಿ ಏನಿದೆ??


ಬಂಕಿಮ ಚಂದ್ರರು ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಹೊರಗಿನ ಸುಂದರ ಪರಿಸರವನ್ನು ನೋಡಿ ಪುಳಕಿತರಾಗಿ ಬರೆದ ಗೀತೆಯಿದು. ಇಲ್ಲಿ ಇರುವುದು ನಮ್ಮ ದೇಶದ ಭೂಮಿಯ, ಪ್ರಕೃತಿಯ, ಮರಗಿಡಗಳಿಂದ ಕೂಡಿದ ಹಚ್ಚ ಹಸುರಿನ ವರ್ಣನೆ ಬಣ್ಣನೆ ಹಾಗು ದೇಶ ಪ್ರೇಮವನ್ನು ಬಡಿದೆಬ್ಬಿಸಿ ನಾವು ಇಂತಹ ಅಮೋಘ  ಮಣ್ಣಿಗೆ ತಲೆ ಬಾಗಬೇಕು ಅನ್ನುವ ಸಂದೇಶ.. ಆದರೆ ಇದೇ ಭೂಮಿಯಲ್ಲಿ ಜೀವಿಸಿ ಆ ಭೂಮಿಗೆ ತಲೆಬಾಗುವುದಿಲ್ಲ ಅದು ನಮ್ಮ ಧರ್ಮಕ್ಕೆ ವಿರುಧ್ಧ ಎಂದರೆ ಎಂತಹ ಉದ್ಧಟತನವದು. ??! ನಾವು ಅಲ್ಲಾಹ್ ನನ್ನು ಬಿಟ್ಟು ಬೇರೆ ಯಾರಿಗೂ ತಲೆ ಬಾಗುವುದಿಲ್ಲ ಎನ್ನುತ್ತೀರಲ್ಲ ಹಾಗಾದರೆ ನಿಮ್ಮ ತಾಯಿ ?? ಅವಳಿಗೆ ತಲೆ ಬಾಗುವುದಿಲ್ಲವೇ ??  ನಿಮ್ಮ ಜೀವನ ಶೈಲಿ ಕುರಾನ್ ನಲ್ಲಿ ಹೇಳಿದಂತೆ ಇದೆಯೇ? ಒಮ್ಮೆ ನಿಮ್ಮ ಜೀವನ ಹಾಗು ನಿಮ್ಮ ಕುರಾನ್ ನಲ್ಲಿ ಹೇಳಿದ ಕೆಲ ನಿರ್ಭಂಧಗಳನ್ನು ಒಮ್ಮೆ ನೆನಪಿಸಿ ಅವಲೋಕಿಸಿ.  ನಿಮಗೆ ಬೇಕಾದಲ್ಲಿ ಕುರಾನ್ ಅನ್ನು ಮರೆತು ಜೀವನ ನಡೆಸುವ ನೀವು ದೇಶದ ಶಾಂತಿ ಕದಡಲು ಮಾತ್ರ ನಿಮ್ಮ ಕುರಾನ್ ಅನ್ನು ಅಡ್ಡ ತರುತ್ತೀರೆನು ??



ವಂದೇ ಮಾತರಂ ಕೇವಲ ಭರತ ಭೂಮಿಯನ್ನು ಹೊಗಳುವ ಸ್ತುತಿ ಗೀತೆಯಾಗಿ ಉಳಿದಿಲ್ಲ .. ಇದೊಂದು ರಾಷ್ಟ್ರ ಪ್ರೇಮವನ್ನು ಬಡಿದೆಬ್ಬಿಸುವ ವೀರ ಗೀತೆ... ಅಂದಿನ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಕ್ರಾಂತಿ ಗೀತೆಯಾಗಿ ಜನರನ್ನು ಉತ್ತೆಜಿಸಿದ್ದು ಇದೇ ವಂದೇ ಮಾತರಂ.. ೧೯೦೫ ರಲ್ಲಿ ಬಂಗಾಳ ವಿಭಜನೆ ಮಾಡಲು ಹೊರಟ ಸಂದರ್ಭದಲ್ಲಿ ವಂಗ ಭಂಗ ಚಳುವಳಿ ಗೆ ಇದೇ  ವಂದೇ ಮಾತರಂ ಸ್ಫೂರ್ತಿ. ತಿಲಕರ ನೇತೃತ್ವದಲ್ಲಿ ನಡೆದ ಈ ಚಳುವಳಿಯಲ್ಲಿ ಹಿಂದೂ ಮುಸ್ಲಿಮರೆಲ್ಲರೂ ಭಾಗವಹಿಸಿ ವಂದೇ ಮಾತರಂ ಅನ್ನು ಸಾರ್ವಜನಿಕವಾಗಿ ಹಾಡಿ ಚಳುವಳಿಯ ಕಿಚ್ಚು ಹೆಚ್ಚಿಸಿದ್ದರು. ಇದೇ ಕಿಚ್ಚು ಆಗ ಬಂಗಾಳ ವಿಭಜನೆಯನ್ನು ತಡೆದು ಯಶಸ್ವಿಯಾಗಿತ್ತು. ಅಂದಿನಿಂದ ೧೯೪೭ ರ ಸ್ವಾತಂತ್ರ ಸಿಗುವವರೆಗೆ ನಮ್ಮ ಸ್ವಾತಂತ್ರ ಸಂಗ್ರಾಮದ ಕ್ರಾಂತಿ ಗೀತೆಯಾಗಿ ವಿರಾಜಮಾನವಾದದ್ದು ಇದೇ ವಂದೇ ಮಾತರಂ.

ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ವಂದೇ ಮಾತರಂ ಬಗ್ಗೆ ಚಕಾರವೆತ್ತದ ಮುಸ್ಲಿಮರು ಈಗ ಧರ್ಮದ ಲೇಪ ಹಚ್ಚುತ್ತಿರುವುದು ಅವರ ಉದ್ದಟತನ ಹಾಗು ಸ್ವಾರ್ಥತೆಯನ್ನು ಬಿಂಬಿಸುತ್ತದೆ. ಹಾಗೆಯೇ ಅವರ ದೇಶ ವಿರೋಧಿ ಮನೋಭಾವವನ್ನೂ. ಸ್ವಾತಂತ್ರ ಬೇಕಾದಾಗ ಇವರಿಗೆಲ್ಲ ವಂದೇ ಮಾತರಂ ಬೇಕಿತ್ತು. ಜತೆಗೆ ಹಿಂದೂಗಳೂ ಬೇಕಿದ್ದರು. ಹಿಂದೂ ಮುಸ್ಲಿಮರು ಜತೆಯಾಗಿ ವಂದೇ ಮಾತರಂ ಹಾಡುತ್ತಿದ್ದರು. ಆದರೆ ಯಾವಾಗ ಭಾರತಕ್ಕೆ ಸ್ವಾತಂತ್ರ ಸಿಗುವ ಮುನ್ಸೂಚನೆ ದೊರಕಿತೋ ಆ ಕ್ಷಣದಿಂದ ಈ ಮುಸ್ಲಿಂ ಮತಾಂಧತೆ ಸೃಷ್ಟಿಯಾಯಿತು ಎನ್ನಬಹುದು. ೧೯೨೦ ರ ನಂತರ ನಡೆದದ್ದೆಲ್ಲ ಈ ಮುಸ್ಲಿಂ ಮತಾಂಧತೆಯ ರಾಜಕಾರಣವೇ.... ಪರಿಣಾಮ ದೇಶ ವಿಭಜನೆ.. !!


ದೇಶ ವಿಭಜನೆಯ ನಂತರ ಮತಾಂಧ ಮುಸ್ಲಿಮರೆಲ್ಲ ಪಾಕಿಸ್ತಾನಕ್ಕೆ ಹೋದ ಮೇಲಾದರೂ ನೆಮ್ಮದಿಯ ಸೌಹಾರ್ದದಿಂದ ಬಾಳಬಹುದೆಂದುಕೊಂಡಿದ್ದ ಭಾರತೀಯರ ಕನಸು ಮಾತ್ರ  ನನಸಾಗಲೇ ಇಲ್ಲ. ದೇಶದ ಬಗೆಯೇ ಗೌರವ ಇಲ್ಲದವರು ನಮ್ಮ ನಡುವೆ ಇರುವಾಗ ಎಲ್ಲಿಯ ನೆಮ್ಮದಿ, ಎಲ್ಲಿಯ ಸೌಹಾರ್ದ. ನಮಗೆ ದೇಶಕ್ಕಿಂತ ಧರ್ಮವೇ ಮೇಲು ಎನ್ನುವವರು ೧೯೪೭ ರಲ್ಲೇ ತೊಲಗಬಹುದಿತ್ತಲ್ಲ... ಅಂದು ಹಿಂದೂ ರಾಷ್ಟ್ರ ಮುಸ್ಲಿಂ ರಾಷ್ಟ್ರವೆಂದು ವಿಭಜನೆಯಾದ ಮೇಲೂ ಹಿಂದೂ ರಾಷ್ಟ್ರದಲ್ಲೇ ಉಳಿಯುತ್ತೇವೆ ಎಂದು ಯಾವ ಪುರುಷಾರ್ಥಕ್ಕಾಗಿ ಉಳಿದಿರಿ?!


ಒಂದು ರಾಷ್ಟ್ರ ಬೇರೆ , ಧರ್ಮ ಬೇರೆ. ಅವೆರಡನ್ನು ಬೆರೆಸಿ ವಾದಿಸುವ ಹುಂಬತನ ಬೇಡ. ಒಬ್ಬ ಭಾರತೀಯನಾಗಿ ಹುಟ್ಟಿದ ಮೇಲೆ ಆತ ಆ ದೇಶ, ಆ ದೇಶದ ಸಂಸ್ಕೃತಿ, ಸಂಪ್ರದಾಯ, ಸಂವಿಧಾನ, ರಾಷ್ಟ್ರ ಗೀತೆ, ರಾಷ್ಟ್ರ   ಧ್ವಜ, ಲಾಂಛನ ಹಾಗು ದೇಶ ಪ್ರೇಮದ ಕುರಿತಾದ ಯಾವುದಕ್ಕಾದರೂ ಗೌರವ ಕೊಡಲೇಬೇಕು. ನಾನು ಮುಸ್ಲಿಂ ಅದೆಲ್ಲ ಸಾಧ್ಯವಿಲ್ಲವೆಂದಾದರೆ ೧೯೪೭ ರಲ್ಲೇ ನಿಮಗಾಗಿ ಭಾರತದ ಒಂದು ತುಂಡನ್ನು ಕಿತ್ತುಕೊಂಡು ಹೋದರಲ್ಲ. ದಯವಿಟ್ಟು ಅಲ್ಲಿಗೇ ಹೊರಡಬಹುದು. ಈಗಲೂ ಕಾಲ ಮಿಂಚಿಲ್ಲ .


ವಂದೇ ಮಾತರಂ...



Friday, May 3, 2013

ಜಾಜಿ ಮಲ್ಲಿಗೆ


ನಿನ್ನ ಸನಿಹವ ಬಯಸಿ ಬಂದೆನು 

ದೂರವೇತಕೆ ಓಡಿದೆ... 
ಎದೆಯ ತುಂಬಾ ಒಲವು ತುಂಬಿದ 
ನಿನ್ನ ನೆನೆಪೇ ಕಾಡಿದೇ... 
ನಿನ್ನ ಮೋಡಿಗೆ ನನ್ನ ನಾಡಿಯೇ ಮಿಡಿವುದಾ ಮರೆತೋಗಿದೆ... 

ನನ್ನ ಪ್ರೀತಿಯು ಜಾಜಿಮಲ್ಲಿಗೆ 
ಕಾಡಮಲ್ಲಿಗೆ ನಿನಗೇತಕೆ... 

ಒಲವಂಚಿತ ಬಾಳು ಸವೆಸಲು
ನಿನಗೇತಕೆ ಆಸೆಯೇ...

ಮುಳ್ಳು ಬೇಲಿಯ ಸಂಗವೇತಕೆ
ನವಿರು ಬಟ್ಟೆಯು ಹರಿಯದೇ...
ನಲುಗದ ಮಲ್ಲಿಗೆ ನೀನು
ನಲುಗುವಾಸೆಯು ಸಹ್ಯವೇ...

ದೇಹದಲ್ಲಿ ವಿವಿಧ ಜನಪದ
ಉಸಿರಿನಲ್ಲಿ ಏನೋ ಕಲರವ
ಮನಸ್ಸಿನಲ್ಲಿ ಧೀರ ಮೌನ
ನಿನ್ನ ಮೌನದ ಛಾಯೆಗೆ...

ದಿಗಿಲಾಗಿದೆ ಮನ ಬಾಳ ಕರಿಮುಗಿಲಿನಲಿ
ಚುಕ್ಕಿಯೊಂದು ಬಾನ ಜಾರಿದಂತೆ...
ಕೈ ಹಿಡಿಯಲು ನೀನಿಲ್ಲ
ಕತ್ತಲೆಯ ಬದುಕಿನಲ್ಲಿ, ಎಲ್ಲವೂ ಕರಾಳ...

ಕನಸ ಗೋಪುರ ಅಲುಗಿದೆ
ಮನವು ತೊದಲಿ ನಲುಗಿದೆ...
ಬಾಳ ಮೆರವಣಿಗೆ ಖಾಲಿ ಖಾಲಿ
ನಾನಿಲ್ಲಿ, ನೀನೆಲ್ಲಿ ?...

ಸಂಜೆ ಪಯಣವು ಬೇಸರಿಸಿದೆ
ನಿನ್ನ ಇರವು ಕಾಣದೆ...
ಅಂಬೆಗಾಲಿಡುತ ಬಂದಿದೆ ಹೃದಯ
ಕಾಣದಾದೆಯಾ ನನ್ನೊಲವೇ... 


Tuesday, April 9, 2013

ನಿನ್ನದೇ ಖುಷಿಯಲಿ..


ಮುಸ್ಸಂಜೆಯ ತುಂತುರಿನಲ್ಲಿ ಕೈಯ ಹಿಡಿದು ನಡೆಯುವೆನು
ಬಾಳ ಹಾದಿಯ ತುಂಬಾ ಬರುವೆಯಾ ಗೆಳತಿ.....
ನನ್ನ ಕೂಡೆ ನೀನಿರಲು ನನಗೇಕೆ ಅವರಿವರು
ಜಗ ಮರೆತು ಜತೆಗಿರುವೆ ಒಡತಿ...

ನಿನ್ನ ಕಣ್ಣಾಗಿ, ಕಣ್ಣೀರ ಮರೆಮಾಚಿ
ನಿನ್ನ ಹೆಜ್ಜೆ ಗುರುತಲ್ಲಿ ನನ್ನದರವ ಸೋಕಿ
ಏಳು ಜನ್ಮದ ಖುಷಿಯ ನಿನ್ನ ಮುಂದಿಡುವೆ
ನಿನ್ನ ಮೊಗದಿ ನಗುವ ಸಹಿ ಮಾಡುತ....

ನೀ ಪೀಡಿಸು ಸತಾಯಿಸು
ಮುದ್ದಾಗಿ ಒಮ್ಮೆ ಕೋಪಿಸು
ನೀ ನನ್ನ ಕಂದ, ಆನಂದಿಸುವೆ ನಾ
ನಿನ್ನ ಪ್ರತಿ ತುಂಟ ಚೇಷ್ಟೆಗಳಾ...

ಸಿಹಿಗನಸ ಆಯ್ದು ಕಳಿಸುವೆ ನಾ
ನಿನ್ನ ಕನಸಿನ ಲೋಕಕೆ
ಬೆಚ್ಚಿ ಬೀಳದಿರು ನನ್ನ ಒಲವೇ
ಬೆಚ್ಚಗಿಡುವೆ ಅನವರತ ನಿನ್ನೇ ಪ್ರೀತಿಸುತ...

ಮುಸ್ಸಂಜೆಯ ತುಂತುರಿನಲ್ಲಿ ಕೈಯ ಹಿಡಿದು ನಡೆಯುವೆನು
ಬಾಳ ಹಾದಿಯ ತುಂಬಾ ಬರುವೆಯಾ ಗೆಳತಿ.....
ನನ್ನ ಕೂಡೆ ನೀನಿರಲು ನನಗೇಕೆ ಅವರಿವರು
ಜಗ ಮರೆತು ಜತೆಗಿರುವೆ ಒಡತಿ...



ಒಲವೆಂದು ಗೀಚಿಡಲೇ...


ಏನೆಂದು ಬರೆದಿಡಲೇ ಹೃದಯದ ಈ ಸೆಳೆತಕೇ...
ಒಲವೆಂದು ಗೀಚಿಡಲೇ ನಿನ್ನಾ ಈ ಸನಿಹಕೆ...
ವಿಳಾಸವರಿಯದ ಅಲೆಮಾರಿ ನಿನ್ನ ಹೃದಯಕೆ ಬಂದಿರುವೆ
ಬಚ್ಚಿಡು ನನ್ನ ಅಲ್ಲೇ ಬೆಚ್ಚನೆ ಕೂತಿರುವೆ...

ಎದೆಯ ತುಂಬಾ ನಿನ್ನ ಚಿತ್ತಾರವ ಬಿಡಿಸಿ
ಎದೆಯ ಗೂಡ ಒಳಗೆ ಪ್ರೇಮದ ಕಣಜ ಕಟ್ಟಿರುವೆ...
ಈ ಸಂಭಾಷಣೆ ಆಲಾಪನೆ ಎಲ್ಲಾ ನಿನ್ನದೇನೆ
ಮನದಲ್ಲಿಯೂ ಕನಸಲ್ಲಿಯೂ ಎಲ್ಲಾ ನೀನೇನೆ...

ನೀನು ಬಂದ ಘಳಿಗೆ ಅದೇನೋ ವಿಸ್ಮಯ
ನಿನ್ನ ಸನಿಹದಲ್ಲಿ ನಾನೂ ತನ್ಮಯ...
ನೀ ನನ್ನ ಬೆಳಕು, ನಿನಗಾಗಿ ಈ ಬದುಕು
ಕಾರಣವ ಕೇಳದಿರು ಒಲವೇ ನಾ ನಿನ್ನೇ ಪ್ರೀತಿಸಿರುವೆ ನಿಜವೆ...

ಏನೆಂದು ಬರೆದಿಡಲೇ ಹೃದಯದ ಈ ಸೆಳೆತಕೇ...
ಒಲವೆಂದು ಗೀಚಿಡಲೇ ನಿನ್ನಾ ಈ ಸನಿಹಕೆ...







Monday, April 8, 2013

ಅದೇ ಕಣ್ಣು..



ಮಾನಸ ಕೊಳದಲಿರೋ ಹಂಸವೇ..


ಮಿಟುಕುವ ಚಂಚಲ ರೆಪ್ಪೆಯ ಸೊಬಗೇ..

ಶ್ವೇತ ಸರೋವರದಿ ಕಪ್ಪು ಚಂದಿರನು

ಹೊಳೆವ ಮಾಟಕೆ ಸೋತುಹೋಗಿಹೆನು

ಸೂಜಿ ನೋಟದ ಹರಿತ ತಾಳೆನು ಒಮ್ಮೆ ಚುಚ್ಚಿ ಬಿಡೇ...

ಸುಳ್ಳೇ ಆದರೂ ನನ್ನೇ ಕಾಣುವೆ ನಿನ್ನ ಕಣ್ಣೊಳಗೆ...



Thursday, February 14, 2013

ನಿನ್ನ ಪಾದದಡಿ...



ಮುದ್ದಾದ ನಿನ್ನ ಚರಣಕೆ ಮುತ್ತಿಕ್ಕುವ ಹಂಬಲ

ನವಿರಾದ ನಿನ್ನ ಕಾಲ ನೇವರಿಸುತ..
ಹೂವ ರಾಶಿಯ ಮೇಲೆ ನೀ ಹೆಜ್ಜೆಯಿಟ್ಟಾಗ 
ಬರುವ ಘಮವನ್ನು ಆನಂದಿಸುತ.


ದೀಪದ ಬೆಳಕಿನಲಿ ಚಿನ್ನದ ನಿನ್ನ ಚರಣಕೆ 
ಬೆಳ್ಳಿಯ ಕಾಲ್ಗೆಜ್ಜೆಯ ನಾ ತೊಡಿಸುವೆ..
ದಟ್ಟ ಅಂಧಕಾರದಲೂ ನಿನ್ನ ಬಿಗಿದಪ್ಪುವೆನು
ಕಾಲ್ಗೆಜ್ಜೆಯ ಸಂಗೀತವ ಅನುಸರಿಸುತ.


ನಿನ್ನ ಚರಣದ ಪೂಜಾರಿ ನಾ
ನಲುಗದಿರು ನನ್ನೊರಟು ಸ್ಪರ್ಶಕೆ..
ನಿನ್ನ ಪಾದದ ಮೇಲಾಣೆ ಒಲವೇ
ಪ್ರೀತಿಸುವೆ ನಿನ್ನ ಅನವರತ.


 
 
 

Friday, January 18, 2013

'ಟಿಪ್ಪು' ಹೆಸರಿನಲ್ಲಿ 'ಕೈ' ರಾಜಕೀಯ..?

ಬಹುಶಃ ಭಾರತದಲ್ಲಿ ಹಿಂದೂ ಧರ್ಮ ಬಿಟ್ಟು ಇತರ ಧರ್ಮೀಯರಿಗೆ ಕೊಡುವ ಸವಲತ್ತುಗಳು, ಸೌಕರ್ಯಗಳು ಇತರ ಯಾವ ದೇಶದಲ್ಲೂ ಇರಲಿಕ್ಕಿಲ್ಲ.. ನಮ್ಮ ರಾಜಕೀಯ ವ್ಯವಸ್ಥೆಯೇ ಅಂತಹುದು. ನಮ್ಮ ರಾಷ್ಟ್ರ ಪಿತರು ಬುನಾದಿ ಹಾಕಿದ ಈ ಸಂಸ್ಕೃತಿ ಇಂದಿನವರೆಗೂ ನಿಂತಿಲ್ಲ.. ಈಗ ಇಂತಹದೇ ಒಂದು ಕಾರಣಕ್ಕಾಗಿ ಸುದ್ದಿ ಮಾಡುತ್ತಿರುವುದು ಪ್ರತ್ಯೇಕ ಮುಸ್ಲಿಂ ವಿಶ್ವ ವಿದ್ಯಾಲಯ.

ಭಾರತದಲ್ಲಿ ಈಗಾಗಲೇ ಇರುವ  ಪ್ರತ್ಯೇಕ ಮುಸ್ಲಿಂ ವಿದ್ಯಾಲಯ ಅಲಿಘಡ ವಿವಿ. ಈಗ ಕೇಂದ್ರ ಸರ್ಕಾರ ಇನ್ನೊಂದು ಪ್ರತ್ಯೇಕ ಮುಸ್ಲಿಂ ವಿವಿ ಯನ್ನು ಕರ್ನಾಟಕದ ಶ್ರೀರಂಗಪಟ್ಟಣ ದಲ್ಲಿ ಸ್ಥಾಪಿಸಲು ಉದ್ದೇಶಿಸಿದೆ. ಈಗಾಗಲೇ ಎರಡು ಪ್ರತ್ಯೇಕ ವಿವಿ ಹೊಂದಿರುವ ಮುಸ್ಲಿಂ ಸಮುದಾಯಕ್ಕೆ ಮತ್ತೊಂದು ವಿವಿ ಯಾಕೆ? ಅದರಲ್ಲೂ ಧರ್ಮದ ಆಧಾರದ ಮೇಲೆ ವಿವಿ ವಿಂಗಡಣೆ ಸರಿಯೇ? ವಿಶ್ವವಿದ್ಯಾಲಯಗಳಿಗೆ ಧರ್ಮದ ಲೇಪ ಯಾಕೆ ಬೇಕು? ಭಾರತದಲ್ಲಿರುವ ಅಷ್ಟೂ ವಿವಿಗಳಲ್ಲಿ ಮುಸ್ಲಿಮರು ಓದಲಾರರೇ? ವಿವಿಗಳಲ್ಲಿ ಮುಸ್ಲಿಮರಿಗೆ ಅಂತಹ ತೊಂದರೆಗಳಿವೆಯೇ? ಹಾಗೆ ಹೀಗೆ ಎಂದು ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ನಮಗೆ ಸಿಗುವ ಉತ್ತರ "ಹಾಗೇನೂ ಇಲ್ಲ, ಎಲ್ಲವೂ ಸರಿಯಾಗಿದೆ.." ಹಾಗಿದ್ದಲ್ಲಿ ಪ್ರತ್ಯೇಕ ಮುಸ್ಲಿಂ ವಿವಿ ಸ್ಥಾಪನೆಯ ಉದ್ಧೇಶ ರಾಜಕೀಯ ತಂತ್ರ ಅನ್ನುವುದು ಸ್ಪಷ್ಟವಾಗುತ್ತದೆ.

ಇನ್ನು ಮುಸ್ಲಿಮರಿಗೆ ಪ್ರತ್ಯೇಕ ವಿಶ್ವ ವಿದ್ಯಾಲಯ ಕೊಟ್ಟರೆ ಏನಾಗುತ್ತದೆ ಅನ್ನುವುದು ಅಲಿಘಡ ವಿವಿಯಲ್ಲೇ ಗೊತ್ತಾಗಿದೆ. ಅಲ್ಲಿ ಹುಟ್ಟಿಕೊಂಡ 'ಸಿಮಿ' ಸಂಘಟನೆ ದೇಶವ್ಯಾಪಿ ಬೆಳೆದು ದೇಶ ವಿರೋಧಿ ಭಯೋತ್ಪಾದನಾ ಸಂಘಟನೆಯಾಗಿ ಮಾರ್ಪಟ್ಟು ದೇಶದಾದ್ಯಂತ ವಿದ್ವಂಸಕ ಹಾಗು ದೇಶ ದ್ರೋಹಿ ಕೃತ್ಯಗಳನ್ನು ನಡೆಸಿ ಇಂದು ಆ ಸಂಘಟನೆಯನ್ನು ನಿಷೇಧಿಸಿದ್ದಾರೆ ಅಂದರೆ ಅದರ ಭಯಂಕರತೆಯನ್ನು ನಾವು ಅರ್ಥೈಸಿಕೊಳ್ಳಬೇಕಾಗಿದೆ. ಆದರೆ ಕೇಂದ್ರ ಸರಕಾರ ಇದರ ಬಗ್ಗೆ ಜಾಣ ಕುರುಡು ಪ್ರದರ್ಶಿಸಿ ಮತ್ತೊಂದು ವಿವಿಗೆ ಕೈ ಹಾಕಿರುವುದು ನಮ್ಮ ದೇಶದ ದುರದೃಷ್ಟವೆನ್ನಬೇಕು.


ಈ ವಿವಾದ ಇನ್ನೂ ಬಗೆಹರಿಯದೆ ಹೊಗೆಯಾಡುತ್ತಿರುವಾಗಲೇ ಯೋಜಿತ ವಿವಿಗೆ ಇಡುವ ಹೆಸರಿನ ಬಗ್ಗೆ ಮತ್ತೊಂದು ವಿವಾದ ಎದ್ದಿದೆ. ಆ ಪ್ರಸ್ತಾಪಿತ ಹೆಸರು ಹಿಂದೂ ವಿರೋಧಿ, ಮುಸ್ಲಿಂ ಮತಾಂಧ, ಹತ್ಯಾಕಾಂಡಗಳ ರೂವಾರಿ ಟಿಪ್ಪು ಸುಲ್ತಾನ್ ನದ್ದು.!!! ಟಿಪ್ಪು ಹೆಸರಿಗೆ ಬೆಂಬಲ ಸೂಚಿಸಿ ಅದೇ ಹೆಸರನ್ನು ಇಡುವಂತೆ ಕೆಲ ಬುದ್ಧಿ ಜೀವಿಗಳ ಪಡೆ ಬೇರೆ ಎದ್ದು ನಿಂತಿದೆ. ಬಹುಶಃ ಅವರಿಗೆಲ್ಲ ಟಿಪ್ಪುವಿನ ನಿಜ ಸ್ವರೂಪ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಹೆಚ್ಚಿನವರು ಟಿಪ್ಪು ಒಬ್ಬ ಸರ್ವ ಧರ್ಮ ಸಹಿಷ್ಣು, ರಾಷ್ಟ್ರ ಪ್ರೇಮಿ, ಕನ್ನಡ ಭಾಷಾ ಪ್ರೇಮಿ ಎಂದೆಲ್ಲ ತಿಳಿದುಕೊಂಡಿದ್ದಾರೆ. ಆದರೆ ಅವೆಲ್ಲ ಅಪ್ಪಟ ಸುಳ್ಳುಗಳು..!! ಟಿಪ್ಪುವಿನ ನಿಜ ಬಣ್ಣ ತಿಳಿಯಬೇಕಾದರೆ ನಾವು ಮತ್ತೊಮ್ಮೆ ಇತಿಹಾಸವನ್ನು ಕೆದಕಬೇಕು. ಕೆದಕುತ್ತಾ ಹೋದಂತೆಲ್ಲ ಸಾಕ್ಷ್ಯಗಳು ನಮ್ಮ ಕಾಲನ್ನು ಎಡತಾಕುತ್ತವೆ. ಟಿಪ್ಪುವಿನ ನಿಜವಾದ ಮುಖದ ಅನಾವರಣವಾಗುತ್ತದೆ. ಅವುಗಳಲ್ಲಿ ಕೆಲವನ್ನು ನೋಡೋಣ...

1) ಟಿಪ್ಪು ತನ್ನ ಶ್ರೀರಂಗಪಟ್ಟಣ ಕೋಟೆಯ ಪ್ರವೇಶದ್ವಾರದ ಆಂಜನೇಯ ದೇವಾಲಯವನ್ನು ಕೆಡವಿ ನಿರ್ಮಿಸಿದ ಮಸೀದಿಯ ಶಾಸನ ಹಾಗು ಶ್ರೀರಂಗಪಟ್ಟಣದ ಹಲವು ಪರ್ಷಿಯನ್ ಶಾಸನಗಳಲ್ಲಿ ಹಲವೆಡೆ "ಮುಸ್ಲಿಮೇತರರನ್ನು (ಕಾಫಿರ್) ಕೊಲ್ಲಬೇಕು" ಎಂಬರ್ಥದ ಬರಹಗಳಿವೆ. ಅಂತಹ ಬರಹಗಳಲ್ಲಿ ಒಂದು ಬರಹ ಹೀಗಿದೆ  "ಪ್ರವಾದಿಗಳು ಹೇಗೆ ಯುದ್ಧವನ್ನು ಮಾಡಿ ಕಾಫಿರರನ್ನು ಕೊಂದರೋ ಹಾಗೆಯೇ ನೀವುಗಳು ಕೂಡ ಕಾಫಿರರನ್ನು ಕೊಲ್ಲಲು ಯುದ್ಧ ಸಲಕರಣೆಗಳನ್ನು ಹೊಂದಿರಿ."
ಅವನು ಕಿತ್ತುಹಾಕಿಸಿದ ಆಂಜನೇಯನ ವಿಗ್ರಹವನ್ನು ಊರ ಒಳಗೆ ಹೊಸ ದೇವಾಲಯ ಕಟ್ಟಿಸಿ ಅಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.  ಟಿಪ್ಪು ಕಟ್ಟಿಸಿದ ಮಸೀದಿಯ ಕೆಳಭಾಗದಲ್ಲಿ ಇಂದಿಗೂ ಹಿಂದೂ ದೇವಾಲಯದ ಕುರುಹುಗಳು ಸ್ಪಷ್ಟವಾಗಿವೆ.

2) ಇತ್ತೀಚೆಗೆ ವಿಜಯ್ ಮಲ್ಯ ಭಾರತಕ್ಕೆ ವಾಪಾಸು ತಂದ ಟಿಪ್ಪುವಿನ ಖಡ್ಗದ ಮೇಲಿನ ಪರ್ಷಿಯನ್ ಭಾಷೆಯ ಶಾಸನವು ಈ ರೀತಿ ಇದೆ, "ನನ್ನ ವಿಜಯ ಖಡ್ಗ ಎಲ್ಲಾ ಕಾಫಿರರನ್ನು ಕೊಂದು ಪ್ರಕಾಶಿಸುತ್ತದೆ."

3) 14.12.1788 ರಂದು ಟಿಪ್ಪು ಸೈಯದ್ ಅಬ್ದುಲ್ ಮಲಕ್ ಗೆ ಬರೆದ ಪತ್ರ,
"ನೀನು ನೀರ್ ಹುಸೇನ್ ಆಲಿ ಜತೆಗೂಡಿ ಅಲ್ಲಾಹುವಿನಲ್ಲಿ ನಂಬಿಕೆ ಇಲ್ಲದ ಎಲ್ಲ ಕಾಫಿರರನ್ನು ಕೊಲ್ಲಬೇಕು."

4) ಟಿಪ್ಪು 18.01.1790 ರಂದು ಸೈಯದ್ ಅಬ್ದುಲ್ ಮಲಕ್ ಗೆ ಬರೆದ ಮತ್ತೊಂದು ಪತ್ರದ ಸಾರಾಂಶ,
" ಪ್ರವಾದಿ ಮಹಮ್ಮದರ ಕೃಪೆಯಿಂದ ಮತ್ತು ಅಲ್ಲಾಹುವಿನ ದಯೆಯಿಂದ ನಾವು ಕಲ್ಲಿಕೋಟೆಯ (ಈಗಿನ ಕ್ಯಾಲಿಕಟ್) 75 ಶೇಕಡಾ ಕಾಫಿರರನ್ನು ಮತಾಂತರಿಸಿದ್ದೇನೆ."

5) 22.3.1789 ರಲ್ಲಿ ಕೊಡೆoಗೇರಿ ಅಬ್ದುಲ್ ಖಾದಿಗೆ ಬರೆದ ಪತ್ರದ ಒಕ್ಕಣೆ,
" ನಾನು 1200 ಕಾಫಿರರನ್ನು ಮತಾಂತರಿಸಿದ್ದೇನೆ. ನೀನು ಎಲ್ಲಾ ನಂಬೂದಿರಿ (ಕೇರಳದ ಬ್ರಾಹ್ಮಣರು) ಮತ್ತು ಇತರರನ್ನು ಮತಾಂತರಿಸು."

6) ಪ್ರಾರಂಭದಲ್ಲಿ ಟಿಪ್ಪು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಬಳಸಿದರೂ ನಂತರದಲ್ಲಿ ಪರ್ಷಿಯನ್ ಭಾಷೆಯನ್ನೂ ಆಡಳಿತ ಭಾಷೆಯನ್ನಾಗಿ ತರಲು ಭಾರೀ ಶ್ರಮ ಪಟ್ಟಿದ್ದ. ಆದರೆ ಅದು ಯಶಸ್ವಿಯಾಗದೆ ಹೋದದ್ದು ಕನ್ನಡಿಗರ ಅದೃಷ್ಟ. ಅಂತೆಯೇ ಟಿಪ್ಪುವಿನ ಎಲ್ಲಾ ಶಾಸನಗಳು ಪರ್ಷಿಯನ್ ಭಾಷೆಯಲ್ಲಿಯೇ ಇವೆ. ಟಿಪ್ಪು ಪರ್ಷಿಯನ್ ಪಾಷೆಯನ್ನು ಆಡಳಿತ ಭಾಷೆಯಾಗಿ ತಂದು ಯಶಸ್ವಿಯಾಗಿದ್ದರೆ ಇವತ್ತಿಗೆ  ಮೈಸೂರು ನಜರಾಬಾದ್ ಆಗಿರುತಿತ್ತು.

7) ಮೈಸೂರಿನ ರಾಣಿ ಲಕ್ಷ್ಮಿ ಅಮ್ಮಣ್ಣಿಯನ್ನು ಚಿಕ್ಕ ಮನೆಯೊಂದರಲ್ಲಿ ಕೂಡಿಹಾಕಿ ಸರಿಯಾಗಿ ಊಟ ನೀಡದೆ ಸೆರೆಯಿರಿಸಿದ್ದನ್ನು  ಶ್ರೀನಿವಾಸ್ ಆಚಾರ್, ನಾರಾಯಣ ಅಯ್ಯಂಗಾರ್ ಅವರುಗಳು ತಮ್ಮ  'ಮೈಸೂರು ಪ್ರಧಾನ' ಪುಸ್ತಕದಲ್ಲಿ ವಿವರಿಸಿದ್ದಾರೆ. ರಾಣಿಯು ತನ್ನ ಮದ್ರಾಸಿನ ಪ್ರತಿನಿಧಿ ತಿರುಮಲರಾವ್ ಗೆ ಬರೆದ ಟಿಪ್ಪಣಿಯನ್ನೂ ಈ ಕೃತಿಯಲ್ಲಿ ನೀಡಲಾಗಿದೆ. ಆ ಟಿಪ್ಪಣಿ ಹೀಗಿದೆ  "... ಟಿಪ್ಪು ಯಾವ ಕ್ಷಣದಲ್ಲಿ ಬೇಕಾದರೂ ನನ್ನನ್ನು ಕೊಲ್ಲಬಹುದು, ಈಗಾಗಲೇ ಶ್ರೀರಂಗಪಟ್ಟಣದ 700 ಹಿಂದೂ ಕುಟುಂಬಗಳನ್ನು ಹತ್ಯೆ ಮಾಡಿದ್ದಾನೆ..."

ಟಿಪ್ಪು ನಡೆಸಿದ ಮತಾಂತರ, ಹತ್ಯಾಕಾಂಡಗಳು, ದೇಗುಲಗಳ ಧ್ವಂಸ ಶ್ರೀರಂಗಪಟ್ಟಣ, ಮೈಸೂರು ಪ್ರದೇಶಕ್ಕಿಂತ ಕೊಡಗು, ಮಲಬಾರ್ ನಲ್ಲೇ ಹೆಚ್ಚು. ಮೆನನ್ ಎಂಬ ಲೇಖಕರು ಬರೆದ ಕೇರಳದ ಚರಿತ್ರೆ ಪ್ರಕಾರ ಟಿಪ್ಪು ಪ್ರಜೆಗಳ ಮುಂದೆ ಇದ್ದ ಆಯ್ಕೆ ಎರಡು- ಕುರಾನ್ ಮತ್ತು ಖಡ್ಗ.!!! ಮತಾಂಧನಾಗಿದ್ದ  ಟಿಪ್ಪು ನಾಶ ಮಾಡಿದ ದೇಗುಲಗಳಿಗೆ ಲೆಕ್ಕವಿಲ್ಲ. ಹಾಗೆಯೇ ಆತ  ಮಾಡಿದ ನರಮೆಧಗಳಿಗೂ! ಈ ಬಗ್ಗೆ ವಿಸ್ಕ್ರುತ ವಿವರಗಳು ಹಾಗು ಸಾಕ್ಷ್ಯಗಳ ಬಗೆಗೆ ಎಚ್.ಡಿ.ಶರ್ಮ ಅವರು ಬರೆದ 'ದ ರಿಯಲ್ ಟಿಪ್ಪು' ಕೃತಿಯಲ್ಲಿ ಓದಬಹುದು.

ಟಿಪ್ಪು ಪರ-ವಿರೋಧವಾಗಿ ಹಲವು ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ ಈ ಮೇಲಿನ ಎಲ್ಲ ಅಂಶಗಳನ್ನು ಗಮನಿಸಿದಾಗ ಟಿಪ್ಪು ಒಬ್ಬ ಕಟುಕ, ಕೊಲೆಗಾರ, ಮುಸ್ಲಿಂ ಮತಾಂಧ, ಹಿಂದೂ ಕ್ರಿಶ್ಚಿಯನ್ ವಿರೋಧಿ, ಕನ್ನಡ ಭಾಷಾ ವಿರೋಧಿ ಎಂಬುದು ಸಾಬೀತಾಗುತ್ತದೆ. ಅವನ ಉದ್ಧೇಶ ತನ್ನ ಆಳ್ವಿಕೆಯ ಪ್ರದೇಶವನ್ನು ಇಸ್ಲಾಮೀಕರಣಗೊಳಿಸುವುದಾಗಿತ್ತು. ಕೆಲವು ಸಾಹಿತಿಗಳು, ಬುದ್ಧಿ ಜೀವಿಗಳು ನಿಜವಾದ ಇತಿಹಾಸ ಅರಿಯದೆ ಟಿಪ್ಪುವನ್ನು ಸ್ವಾತಂತ್ರ ಹೋರಾಟಗಾರ, ಸರ್ವಧರ್ಮ ಸಹಿಷ್ಣು ಎಂದು ವರ್ಣಿಸುತ್ತಾರೆ. ಅದಕ್ಕೆ ಅವರುಗಳು ಟಿಪ್ಪು ಶೃಂಗೇರಿ ಹಾಗು ಮೇಲುಕೋಟೆ ಮಠ ದೇಗುಲಗಳಿಗೆ ದತ್ತಿ ನೀಡಿದ್ದನ್ನು ಉದಾಹರಣೆಯಾಗಿ ಕೊಡುತ್ತಾರೆ. ಆದರೆ ಇಲ್ಲಿ ಸತ್ಯ ಬೇರೆಯದೇ ಇದೆ. ಸ್ವತಃ ಟಿಪ್ಪುವಿನ ಮಗ ಹೇಳುವಂತೆ ಜಾತಕದಲ್ಲಿ ನಂಬಿಕೆಯಿದ್ದ ಟಿಪ್ಪು ತಾನು ಮಾಡಿದ ನರಮೇಧ, ಬಲವಂತದ ಮತಾಂತರ, ದೇಗುಲ ದ್ವಂಸ ಗಳಂತಹ ಪಾಪಗಳ ಕಂಟಕ ನಿವಾರಣೆಗಾಗಿ ಹಣ, ದತ್ತಿ ನೀಡಿ ಬ್ರಾಹ್ಮಣರಿಂದ ಯಜ್ಞ ಯಾಗ ಮಾಡಿಸುತ್ತಿದ್ದ. ಇಂತಹ ಸ್ವಾರ್ಥ ಉದ್ಧೇಶಕ್ಕೆ ಟಿಪ್ಪು ಶೃಂಗೇರಿ ಹಾಗು ಮೇಲುಕೋಟೆ ದೇಗುಲಗಳಿಗೆ ನೀಡಿದ ದತ್ತಿಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಅನ್ಯ ಧರ್ಮದ ದೇಗುಲಗಳಿಗೆ ದತ್ತಿ ನೀಡಿ ಇನ್ನೊಂದು ಕಡೆ ಅದೇ ಧರ್ಮದ ದೇಗುಲಗಳನ್ನು ಕೆಡಹುವುದು ಸಹಿಷ್ಣುತೆಯೇ?

ಇಂತಹ ಒಬ್ಬ ಮತಾಂಧನ ಹೆಸರಿನ ವಿವಿಯನ್ನು ನಾವು ಬೆಂಬಲಿಸಬೇಕೆ? ಆತನ ಪಾಪಗಳ ಬಗ್ಗೆ ಅರಿವಿದ್ದವರು ಹಾಗು ಅದಕ್ಕೆ ಬಲಿಯಾದವರು ನಿಜಕ್ಕೂ ಇದನ್ನು ಕ್ಷಮಿಸಲಾರರು. ಒಂದು ವೇಳೆ  ಮತ್ತೊಂದು ಪ್ರತ್ಯೆಕ ಮುಸ್ಲಿಂ ವಿವಿ ಅಸ್ತಿತ್ವಕ್ಕೆ ಬಂದು ಅದಕ್ಕೆ ಟಿಪ್ಪುವಿನ ಹೆಸರು ಇಡುವುದೇ ಆದರೆ ಅದು ಭಾರತದ ೮೫ ಶೇಕಾದ ಹಿಂದೂ ಕ್ರಿಶ್ಚಿಯನ್ನರಿಗೆ ಹಾಗು ಪ್ರಜ್ಞಾವಂತ ಮುಸ್ಲಿಮರಿಗೆ ಮಾಡುವ ಘೋರ ಅವಮಾನವಾಗುತ್ತದೆ. ಅಷ್ಟಕ್ಕೂ ವಿವಿಗೆ ಟಿಪ್ಪುವಿನ ಹೆಸರೇ ಯಾಕೆ ಬೇಕು? ಸಂತ ಶಿಶುನಾಳ ಶರೀಫ, ಅಬ್ದುಲ್ ಕಲಾಮ್ ಅವರಂತಹ ಮಹಾನ್ ಗಳಿದ್ದಾರೆ. ಅದರಲ್ಲೂ ಸಂತ ಶಿಶುನಾಳ ಶರೀಫರ ಹೆಸರು ಹೆಚ್ಚು ಸೂಕ್ತವಾಗುತ್ತದೆ. ಈ ಬಗ್ಗೆ ಚಿಂತಿಸಿದರೆ ಅದೊಂದು ಉತ್ತಮ ಬೆಳವಣಿಗೆಯಾದೀತು.

ಆದರೆ ಇಲ್ಲಿ ಮತ್ತೊಮ್ಮೆ ನಾವು ಧರ್ಮಾಧಾರಿತ ಪ್ರತ್ಯೇಕ  ಮುಸ್ಲಿಂ ವಿವಿಯ ಅಗತ್ಯತೆಯ ಬಗ್ಗೆ ಪ್ರಶ್ನಿಸಬೇಕಾಗುತ್ತದೆ. ಇದಕ್ಕೆ ಅವಕಾಶ ಕೊಟ್ಟರೆ ಮುಂದೊಂದು ದಿನ ಒಂದೊಂದು ಧರ್ಮಕ್ಕೆ ಪ್ರತ್ಯೇಕ ವಿವಿಗಳು ಬೇಕು ಅನ್ನುವ ಕೂಗು ಖಂಡಿತ ಕೇಳಿ ಬರಬಹುದು. ಆಗ ಸಾಮಾಜಿಕ ಸಾಮರಸ್ಯ ಮತ್ತಷ್ಟು ವಿಷಮವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.!!