Monday, August 22, 2011

ದೀಪಾವಳಿ...


ನಗುವರಳೋ ನಿನ್ನ ಬಿಳಿ ಮೊಗದಲೊಮ್ಮೆ ಚಿತ್ರ ಬಿಡಿಸೋ ಹಾಗೆ
ಕನಸಾಗಿದೆ ಇಂದು, ನಿನ್ನ ಬರಸೆಳೆದಪ್ಪಿ ಮುದ್ದಾಡಿದರೆ ಹೇಗೆ..
ಬರಗಾಲದಲಿ ನಿನ್ನ ಅಧರದಂಚಿನ ನೀರೆ ಸಾಕು ನನಗೆ
ನಿನಗಿಷ್ಟವೆಂದರೆ ಕೊಡುವೆ ನಾ ಬಿಸಿಯಪ್ಪುಗೆ ಕೊನೆವರೆಗೆ..

ನಿನ್ನ ಪ್ರೇಮದ ಸೆರೆಮನೆಯೊಳಗೆ ನಾನಾಗುವೆ ಬಂಧಿಯೂ
ಬಿಡುಗಡೆಯ ಬೇಡದ ನಾನೆಂದೂ ನಿನ್ನ ಪ್ರೇಮ ಕೈದಿಯು..
ಇದು ಎದೆಯೊಳಗಿನ ಭಾವಲೋಕವು, ಭಾವನೆಗಳೇ ಇಲ್ಲಿ ಪ್ರೇಮಪಾಠವು
ನೀನಿರದೆ ನಾನಿರೆನು ಎಂದೂ ಒಂಟಿಯಾಗಿ, ನೀ ಬಾರೇ ಜಂಟಿಯಾಗಿ..

ಕಾರಂಜಿಯ ಪ್ರತಿ ಹನಿಯಲ್ಲೂ ನಿನ್ನನೇ ಕಾಣುವೇ
ಹಚ್ಚಹಸುರಿನ ಮಡಿಲಿನಲ್ಲಿ ನಿನ್ನದೇ ಘಮವಿದೆ..
ನೀ ಹಾಡುತ ಕುಣಿಯುತ ಬಂದಿರಲು, ನನ್ನ ಹೃದಯದ ಬಾಗಿಲು ಬಡಿದಿರಲು
ನಮ್ಮ ಪ್ರೇಮದ ಮಹಲಿನ ಒಳಗೆ ದಿನಾ ದೀಪಾವಳಿಯು..

ನಗುವರಳೋ ನಿನ್ನ ಬಿಳಿ ಮೊಗದಲೊಮ್ಮೆ ಚಿತ್ರ ಬಿಡಿಸೋ ಹಾಗೆ
ಕನಸಾಗಿದೆ ಇಂದು, ನಿನ್ನ ಬರಸೆಳೆದಪ್ಪಿ ಮುದ್ದಾಡಿದರೆ ಹೇಗೆ.......


Thursday, August 4, 2011

ಪಿಸುಮಾತು


ಎದೆಯಾಳದ ಈ ಮಿಡಿತದ ಆನಂದದ ಆಹ್ಲಾದಕೆ
ಏನೆಂದು ನಾ ಕರೆಯಲೇ..

ಚಡಪಡಿಸುವ ವಯ್ಯಾರದ ಈ ಚಂಚಲ
ಒಳಮನಸ್ಸಿಗೆ ಏನೆಂದು ಸಂತೈಸಲೇ..

ನಿನ್ನ ಮೋಹಕ ಆ ನಗುವಿನ ನೆನಪಲ್ಲೇ ಪಿಸುಗುಡುತಿಹ
ಭಾವನೆಗೆ ಒಲವೆಂದು ನಾ ಕೂಗಲೇ..

ಗರಿಗೆದರಿಹ ನವಕಾವ್ಯದ ಸಾಲುಗಳ ಮೇಲೊಮ್ಮೆ
ನಿನ ಹೆಸರ ನಾ ಬರೆಯಲೇ..

ನನ್ನಾತ್ಮದ ಆತ್ಮೀಯೆಗೆ ಅಂತರಂಗವ ತೆರೆದಿಟ್ಟರೂ
ಅನುರಾಗವ ಕಾಣಲಾಗದೇ..

ನಾಚುತಿಹ ನಿನ್ನ ಮೊಗವ ನಗುವಿನೊಡೆ ಎತ್ತರಿಸಿ
ಇದು ಒಲವೆಂದು ಕೂಗಲು ಸಂಕೋಚವೇ..

ಗುನುಗುತಿಹ ಹೃದಯಕೆ ಕಿವಿಗೊಟ್ಟು ಕೇಳಿ
ಪ್ರೀತಿಯನೇಳಲು ಅಂಜಿಕೆಯೇ..


Monday, July 4, 2011

ಪಾಪುಲರ್ ಫ್ರಂಟ್ ಆಫ್ ಇಂಡಿಯಾ ದೇಶದೊಳಗಿನ ವಿಷವ್ಯೂಹ..



"ಅಮ್ಮಾ ಭಾರತಾಂಬೆ, ನಿನ್ನ ಉದರದಲ್ಲಿ ಜನಿಸಿದ ನಾನು ನಿನಗೆ ನನ್ನ ರಕ್ತದರ್ಪಣವನ್ನಲ್ಲದೆ ಇನ್ನೇನು ತಾನೇ ಕೊಡಲು ಸಾಧ್ಯ.."
ಒಬ್ಬ ದೇಶಭಕ್ತನ ಈ ಮಾತುಗಳು ಎಂತಹ ರೋಮಾಂಚನವನ್ನುಟ್ಟಿಸುತ್ತವೆ.!!
ದೇಶಕ್ಕಾಗಿ ತನ್ನ ರಕ್ತಧಾರೆಯನ್ನರಿಸಲು ಸಿದ್ಧವಾಗಿರುವ ಇಂತಹ ಅದೆಷ್ಟೋ ದೇಶಭಕ್ತ ಭಾರತೀಯರ ನಡುವೆ ಕೆಲ ವಿಷ ಜಂತುಗಳು ಹುಟ್ಟಿರುವುದು ಅಚ್ಚರಿಯನ್ನುಂಟುಮಾಡುತ್ತದೆ. ದೇಶದ ಹೊರಗಿನ ಶತ್ರುಗಳಿಗಿಂತ ಇವರು ಅತ್ಯಂತ ಅಪಾಯಕಾರಿ.! ಅಂತಹ ಹಲವು ವಿಷಜಂತುಗಳ ನಡುವೆ ನಾನು ಹೇಳಹೊರಟಿರುವ ದ್ರೋಹಿಕೂಟವೇ 'ಪಾಪುಲರ್ ಫ್ರಂಟ್ ಆಫ್ ಇಂಡಿಯಾ'!!
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತನ್ನ ಹೆಸರಲ್ಲಿ 'ಇಂಡಿಯಾ'ವನ್ನು ಸೇರಿಸಿಕೊಂಡು 'ಇಂಡಿಯಾ'ಗೆ ಮಾರಕವಾಗುವತ್ತ ಬೆಳೆಯುತ್ತಿರುವ ಒಂದು ವಿಷ ವ್ಯೂಹ! ಸಮಾಜ ಸೇವೆಯ ಪೊಳ್ಳು ಮುಖವಾಡ ಧರಿಸಿರುವ ಇದರ ಮೂಲ ಉದ್ದೇಶ ಭಾರತದ ಇಸ್ಲಾಮೀಕರಣ ಹಾಗು ಕೇವಲ ಇಸ್ಲಾಮೀಕರಣ..! 

ಕರ್ನಾಟಕದಲ್ಲಿ ಕೋಮುಗಲಭೆಗಳ ಮೂಲಕ ಸಾಮರಸ್ಯ ಕದಡಿ ಈಗ ಹುಣಸೂರು ಅವಳಿ ವಿದ್ಯಾರ್ಥಿ ಹತ್ಯೆಯ ನಂತರ ಹೆಚ್ಚಿನ ಸುದ್ದಿಯಲ್ಲಿರುವ ಕರ್ನಾಟಕದ 'ಕರ್ನಾಟಕ ಫೋರಂ ಫಾರ್ ಡಿಗ್ನಿಟಿ' (KFD), ಕೇರಳದಲ್ಲಿ ಹಿಂದೂ ಹತ್ಯಾ ಕಾಂಡಗಳ ಹಾಗು ದೇಶ ವಿರೋಧಿ ಚಟುವಟಿಕೆಗಳ ಮೂಲಕ ಭಾರತೀಯರ ಎದೆ ನಡುಗಿಸಿದ್ದ 'ನ್ಯಾಷನಲ್ ಡೆವಲಪ್ಮೆಂಟ್ ಫ್ರಂಟ್' (NDF), ಹಾಗು ತಮಿಳುನಾಡಿನಲ್ಲಿ ಇಸ್ಲಾಮಿಕರಣದ ಕೆಲಸದಲ್ಲಿ ನಿರತವಾಗಿದ್ದ 'ಮನಿತ ನೀತಿ ಪಸರೈ' (MNP) ಹಾಗು ನಿಷೆಧಕ್ಕೊಳಗಾಗಿ ಹರಿದು ಹಂಚಿ ಹೋಗಿದ್ದ 'ಸಿಮಿ'ಯ ಸಂಯೋಗದಿಂದಾಗಿ 2006 ರ ನವೆಂಬರ್ 22  ರಂದು 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ' ಅಧಿಕೃತವಾಗಿ ಚಾಲನೆ ಪಡೆಯಿತು. ಪ್ರಾರಂಭ ಪಡೆದ ಮೂರೇ ತಿಂಗಳಿಗೆ ಅಂದರೆ 2007  ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ 30000 ಜನರನ್ನು ಸೇರಿಸಿ  'Empower India Conference ' ನಡೆಸುವ ಮೂಲಕ ತನ್ನ ಶಕ್ತಿ ಪ್ರದರ್ಶನದ ಜೊತೆಗೆ ತಾನು ಪ್ರಗತಿಪರ ಚಿಂತಕ ಎಂಬುದನ್ನು ಸಾಬೀತುಪಡಿಸುವ ಪ್ರಯತ್ನವನ್ನೂ ಮಾಡಿತು. ಅರ್ಥಾತ್ ಜನರನ್ನು ಮೂರ್ಖರನ್ನಾಗಿಸಿತು..

ಆದರೆ ಇದರ ಸಹಸಂಘಟನೆಗಳ ಪೂರ್ವಾಪರಗಳ ಅರಿವಿದ್ದವರು ಇದನ್ನು ನಂಬಲು ಸಾದ್ಯವೇ?
ಕೇರಳದ National Devolopment Front ! ಇದರ ಮೂಲ ಕಂಡುಬರುವುದು ISS ನಿಂದ. ಈಗ ಬೆಂಗಳೂರು ಸರಣಿ ಸ್ಪೋಟದ ಆರೋಪದಡಿಯಲ್ಲಿ ಬಂಧಿತನಾಗಿ (ಭಯೋತ್ಪಾದಕ ಕೈದಿಯಾಗಿದ್ದರೂ ರಾಜಾತಿಥ್ಯದ ಡಿಲಕ್ಸ್ ಆಸ್ಪತ್ರೆಯಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿರುವ) ಜೈಲು ಸೇರಿರುವ ಅಬ್ದುಲ್ ನಾಸೆರ್ ಮದನಿ 1989 ರಲ್ಲಿ ಹಿಂದೂಗಳ ದಮನಕ್ಕಾಗಿ ಪ್ರಾರಂಭಿಸಿದ ಮುಸ್ಲಿಂ ಮತಾಂಧವಾದಿಗಳ ಕೂಟವೇ 'ಇಸ್ಲಾಮಿಕ್ ಸೇವಕ್ ಸಂಗ್' (ISS ). ಆದರೆ 1992 ರ ಅಯೋದ್ಯೆ ಘಟನೆ ಹಿನ್ನಲೆಯ ಗಲಭೆಯ ನಂತರ ISS ಅನ್ನು ನಿಷೇಧಿಸಲಾಯಿತು. ನಿಷೇಧಗೊಂಡ ಕೆಲವೇ ತಿಂಗಳ ಅಂತರದಲ್ಲಿ ISS ಹೊಸ ಹೆಸರಿನೊಂದಿಗೆ ಮತ್ತೊಮ್ಮೆ ಅರ್ಭಟಿಸಲು ಸಜ್ಜಾಯಿತು. ಅದರ ಫಲವೇ 1993 ರಲ್ಲಿ ಅಸ್ತಿತ್ವಕ್ಕೆ ಬಂದ National Devolopment Front (NDF). NDF ಅಸ್ತಿತ್ವಕ್ಕೆ ಬಂದ ನಂತರ ಕೇರಳದಾದ್ಯಂತ ಹಿಂದೂ ವಿರೋಧಿ ಹಿಂಸೆ, ಗಲಭೆಗಳು ಹೆಚ್ಚಾದವು. 2003 ಮೇ 2 ರಂದು ಕೋಳಿಕ್ಕೋಡು ಜಿಲ್ಲೆಯ ಮರಾಡ್ ಬೀಚ್ ಹತ್ಯಾ ಕಾಂಡ ಎಲ್ಲರನ್ನು ಬೆಚ್ಚಿ ಬೀಳಿಸುವ ಜೊತೆಗೆ ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಅಂದು 8  ಜನ ಮುಗ್ಧ ಹಿಂದೂ ಮೀನುಗಾರರನ್ನು ಕೊಚ್ಚಿ ಹಾಕಲಾಗಿತ್ತು! ಇದರ ಬೆನ್ನಲ್ಲೇ ಕೋಮುಗಲಭೆ ಸ್ಪೋಟಗೊಂಡು ನೂರಾರು ಹಿಂದೂ ಕುಟುಂಬಗಳು NDF ದಾಳಿಗೆ ಗುರಿಯಾಗಿದ್ದವು. ಆ ನಂತರದ ಪೋಲಿಸ್ ಧಾಳಿಯಲ್ಲಿ ಮರಾಡ್ ಬೀಚ್ ಬಳಿಯ ಜುಮ್ಮಾ ಮಸೀದಿಯಲ್ಲಿ NDF  ಗೆ ಸೇರಿದ ಸ್ಪೋಟಕಗಳು ಹಾಗು ಹತ್ಯಾರಗಳು ಪತ್ತೆಯಾದವು. ಅದೇ ಸಮಯದಲ್ಲಿ NDF  ನ ಹಾಗು ಪಾಕಿಸ್ತಾನದ ISI  ನಡುವಿನ ಸಂಬಂಧ ಬೆಳಕಿಗೆ ಬಂದಿತ್ತು. ಹಾಗು NDF  ನ ಚಟುವಟಿಕೆಗಳಿಗೆ ISI  ಮತ್ತು ಇರಾನ್ ಹಣವನ್ನೊದಗಿಸುತ್ತಿರುವುದರ ಬಗ್ಗೆ ಬಲವಾದ ಶಂಕೆಗಳೆದ್ದವು. ಆದರೆ ಈ ನಿಟ್ಟಿನಲ್ಲಿ ಹೆಚ್ಚಿನ ತನಿಖೆ ಕೈಗೊಳ್ಳುವಲ್ಲಿ ಪೊಲೀಸರು ವಿಫಲರಾದರು. 2003  ರ ಮುಂಬೈ ಸರಣಿ ಸ್ಪೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಬಷೀರ್ ಮೂಲತಃ ಕೇರಳದ NDF ನವನೇ. ಆಶ್ಚರ್ಯದ ವಿಷಯವೆಂದರೆ 2007 ರ ಏಪ್ರಿಲ್ 29  ರಂದು ಪಾಕಿನ ಆಗಿನ ಪಾರ್ಲಿಮೆಂಟ್ ಸದಸ್ಯನಾಗಿದ್ದ ಮೊಹಮ್ಮದ್ ತಾಹ ಮೊಹಮ್ಮದ್ ಕೇರಳದ ತಳಸ್ಸೆರಿಗೆ ಬಂದು NDF  ನ ಕೆಲ ನಾಯಕರುಗಳನ್ನು ಭೇಟಿ ಮಾಡಿ ಹೋಗಿದ್ದ. !!


ಇನ್ನು ಕರ್ನಾಟಕದಲ್ಲಿ PFI  ಗೆ ಬೆನ್ನೆಲುಬಾಗಿರುವ KFD (ಕರ್ನಾಟಕ ಫಾರಂ ಫಾರ್ ಡಿಗ್ನಿಟಿ). 2001 ರಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲಿ ಪ್ರಾರಂಭವಾದ ಈ ಸಂಘಟನೆ ಕ್ರಮೇಣ ರಾಜ್ಯವ್ಯಾಪಿ ವ್ಯಾಪಿಸಿತು. ಇಸ್ಲಾಂ ಅಜೆಂಡಾದ KFD  ಕರ್ನಾಟಕದ ಹಲವು ಕಡೆಗಳಲ್ಲಿ ಕೊಮುಗಲಭೆಯನ್ನೆಬಿಸಿ ಕೋಮು ಸಾಮರಸ್ಯ ಕದಡುವಲ್ಲಿ ಯಶಸ್ವಿಯಾಗಿತ್ತು. ಮಂಗಳೂರು ಸೇರಿದಂತೆ ಕರಾವಳಿ ಕರ್ನಾಟಕದಲ್ಲಿ ಎದ್ದ ಕೋಮು ಸಂಘರ್ಷ ಹಾಗು ಮೈಸೂರಿನ ಉದಯಗಿರಿ ಕೋಮುಗಲಭೆಗಳಿಗೆ KFD ಯೇ ಸೂತ್ರಧಾರ. ಮಂಗಳೂರಿನ ಹಿಂದೂ ಯುವ ನೇತಾರನಾಗಿದ್ದ ಸುಖಾನಂದ ಶೆಟ್ಟಿ ಮುಲ್ಕಿ ಹಾಗು ಹಿಂದೂ ಸಂಘಟನೆಗಳ ಕ್ರಾಂತಿಕಾರಿ ಕಾರ್ಯಕರ್ತರಾಗಿದ್ದ ಸಂತೋಷ್ ಬಡಕಬೈಲು, ಅನಂತ್ ಪೊಳಲಿ ಮುಂತಾದವರ ಹತ್ಯೆಯ ರೂವಾರಿಯೇ ಈ ಕರ್ನಾಟಕ ಫಾರಂ ಫಾರ್ ಡಿಗ್ನಿಟಿ.! ತೀರಾ ಇತ್ತೀಚೆಗಿನ ಮೈಸೂರು ಜಿಲ್ಲೆಯ ಹುಣಸೂರು ಅವಳಿ ವಿದ್ಯಾರ್ಥಿ ಅಪಹರಣ ಹಾಗು ಮಾರಣಹೋಮ! ಮೈಸೂರಿನಾದ್ಯಂತ ಸರಣಿ ಸ್ಪೋಟ ನಡೆಸುವ ಸಲುವಾಗಿ ಹಣ ಕೂಡಿಸಲು ಮಾಡಿದ ಘೋರ ಕೃತ್ಯ! ಒಂದು ವೇಳೆ ಅವರಿಗೆ ಹಣ ದೊರೆತು ಮೈಸೂರಿನ ಸರಣಿ ಸ್ಪೋಟದ ಸಂಚು ಯಶಸ್ವಿಯಾಗಿದ್ದರೆ?! ಊಹಿಸಲೂ ನಡುಕವೆನಿಸುತ್ತದೆ..! ಇಂತಹ ದೇಶ ವಿರೋಧಿ ಸಂಘಟನೆಗಳ ಸಂಯೋಗದಿಂದ ಪ್ರಾರಂಭವಾದ PFI  ದೇಶಪ್ರೇಮಿಯಾಗಳು ಸಾಧ್ಯವೇ..?

NDF , KFD , MNP  ಗಳಲ್ಲದೆ ಮಣಿಪುರದ Lilong  Social Forum , ಆಂಧ್ರದ Andhra Pradesh Association for  Social Justice . ರಾಜಸ್ತಾನದ Community Social & Educational Society, ಪಶ್ಚಿಮ ಬಂಗಾಳದ Nagarik Adhikaar Suraksha Samiti, ಹಾಗು ಗೋವಾದ Goa Citizens Forum ಜೊತೆಗೆ PFI  ಸಹಯೋಗ ಹೊಂದಿದ್ದು ಅವರವರ ರಾಜ್ಯಗಳಲ್ಲಿ ತನ್ನ ಜಾಲವನ್ನು ವಿಸ್ತರಿಸಿಕೊಳ್ಳುತ್ತಿದೆ. ಅಷ್ಟು ಮಾತ್ರವಲ್ಲದೆ PFI  ಇತ್ತೇಚೆಗೆ SDPI (SOCIAL DEMOCRATIC PARTY OF INDIA ) ಎಂಬ ರಾಜಕೀಯ ಪಕ್ಷವನ್ನು ಕೂಡ ಸ್ಥಾಪಿಸಿದ್ದು ರಾಜಕೀಯವಾಗಿ ನೆಲೆಯೂರಲು ಹವಣಿಸುತ್ತಿದೆ. ತನ್ನ ಪ್ರಚಾರಕ್ಕಾಗಿ PFI  ಪತ್ರಿಕೆಗಳನ್ನು ಕೂಡ ನಡೆಸುತ್ತಿದ್ದು ಮಲಯಾಳಂ ನಲ್ಲಿ 'ತೇಜಸ್', ಕನ್ನಡದಲ್ಲಿ 'ಪ್ರಸ್ತುತ' ಹಾಗು ತಮಿಳಿನಲ್ಲಿ 'ವಿದಿಯಾಲ್ ವೆಲ್ಲಿ' (ಎಲ್ಲವು ಪಾಕ್ಷಿಕ) ಪಾಪುಲರ್ ಫ್ರಂಟ್ ಆಫ್ ಇಂಡಿಯಾ ದ ಮುಖವಾಣಿಗಳು.


2006 ರಲ್ಲಿ ಚಾಲನೆ ಪಡೆದ ಪಾಪುಲರ್ ಫ್ರಂಟ್ ತನ್ನ ರಹಸ್ಯ ಅಜೆಂಡಾವಾದ ಇಸ್ಲಾಮಿಕರಣದ ಅನುಷ್ಠಾನಕ್ಕಿಳಿಯಿತು. ಅದರ ಮೊದಲ ಹೆಜ್ಜೆಯೇ 'ಲವ್ ಜಿಹಾದ್'!!!! ಅನ್ಯ ಧರ್ಮೀಯ (ಹಿಂದೂ, ಕ್ರಿಶ್ಚಿಯನ್) ಹದಿಹರೆಯದ ಹುಡುಗಿಯರನ್ನು ಪ್ರೇಮದ ಬಲೆಗೆ ಬೀಳಿಸಿ, ಲೈಂಗಿಕವಾಗಿ ಬಳಸಿಕೊಂಡು, ಮದುವೆಯಾಗಿ ನಂತರ ಮುಸ್ಲಿಂ ಆಗಿ ಮತಾಂತರಿಸುವ ಜಾಲವೇ ಈ ಲವ್ ಜಿಹಾದ್. ಈ ಕಾರ್ಯಕ್ಕಾಗಿ ನಿಯೋಜಿಸಲ್ಪಟ್ಟ ಮುಸ್ಲಿಂ ಯುವಕರಿಗೆ ಉಚಿತ ಮೊಬೈಲ್,  ಬೈಕ್, ಫ್ಯಾಶನೆಬಲ್ ಉಡುಗೆ ಹಾಗು ಖರ್ಚಿಗಾಗಿ ಹಣವನ್ನು ಕೊಡಲಾಗುತ್ತದೆ. ಮಿಶನ್ ಯಶಸ್ವಿಯಾಗಿ ಮುಕ್ತಾಯವಾದ ನಂತರ ಒಬ್ಬೊಬ್ಬನಿಗೆ  ೧ ಲಕ್ಷ ನಗದು ಹಾಗು ವ್ಯವಹಾರ ಪ್ರಾರಂಭಿಸಲು ಇತರೆ ನೆರವನ್ನು ಒದಗಿಸಲಾಗುತ್ತದೆ. ಈ ಜಾಲದಲ್ಲಿ ಸಿಲುಕಿದ ಅದೆಷ್ಟೋ ಹಿಂದೂ ಕ್ರಿಶ್ಚಿಯನ್ ಹುಡುಗಿಯರು ಅತೀ ಹೀನ ಸ್ಥಿತಿಯ ಕತ್ತಲ ಬದುಕು ನಡೆಸುತ್ತಿದ್ದಾರೆ. ಇನ್ನು ಹಲವರು ಆತ್ಮಹತ್ಯೆಯಲ್ಲಿ ತಮ್ಮ ಬದುಕನ್ನು ಅಂತ್ಯಗೊಳಿಸಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ ಈವರೆಗೆ 6000 ಕ್ಕೂ ಹೆಚ್ಚು ಲವ್ ಜಿಹಾದ್ ಪ್ರಕರಣಗಳು ಪತ್ತೆಯಾಗಿದ್ದು ಇದರ ಬಹುಪಾಲು ಕೇರಳದಲ್ಲೇ ನಡೆದಿವೆ. ಇನ್ನು ಲೆಕ್ಕಕ್ಕೆ ಸಿಗದ ಪ್ರಕರಣಗಳೆಷ್ಟೋ...

2009 ರಲ್ಲಿ ದೇಶದ ಭದ್ರತೆಗೆ ಸವಾಲಾಗುವ ಮಾಹಿತಿಯೊಂದು ಹೊರಬಿತ್ತು. ಪಾಪುಲರ್ ಫ್ರಂಟ್ ಪ್ರಬಲವಾಗಿರುವ ಕೇರಳದ ಕಣ್ಣೂರು ಹಾಗು ಎರ್ನಾಕುಲಂ ಜಿಲ್ಲೆಗಳ 185 ಕ್ಕೂ ಹೆಚ್ಚು ಮುಸ್ಲಿಂ ಯುವಕರಿಗೆ ಲಷ್ಕರ್ ಎ ತೊಯ್ಬಾದಿಂದ ಜಿಹಾದ್ ತರಬೇತಿ ನೀಡಲಾಗಿದೆ ಎಂದು. ಪೋಲಿಸ್ ಬಲೆಯಲ್ಲಿದ್ದ ಕಾಶ್ಮೀರದ ಮೂರು ಜನ ಯುವ ಭಯೋತ್ಪಾದಕರಾದ ಫಿಯಾಜ್ ಅಹಮದ್, ಸಾಜದ್ ಅಹಮದ್ ರೇಷಿ ಮತ್ತು ಶಬ್ಬೀರ್ ಅಹಮದ್ ಈ ಸ್ಪೋಟಕ ಸತ್ಯವನ್ನು (2009  ಮಾರ್ಚ್ 17 ) ಬಾಯ್ಬಿಟ್ಟಿದ್ದರು. ಈ ಮೂವರು 2008 ರ ಅಕ್ಟೋಬರ್ ನಲ್ಲಿ ಕಾಶ್ಮೀರದ ಕುಪ್ವಾರ ಅರಣ್ಯ ಪ್ರದೇಶದಲ್ಲಿ ಲಷ್ಕರ್ ಎ ತೊಯ್ಬ ಆಯೋಜಿಸಿದ್ದ ಜಿಹಾದ್ ತರಬೇತಿಯ ಮುಖ್ಯಸ್ಥರಾಗಿದ್ದರು. 

ಜುಲೈ 4 , 2010 ರಂದು ಕೇರಳದ ಕೊಟ್ಟಾಯಂ ನಲ್ಲಿ ಪಾಪುಲರ್ ಫ್ರಂಟ್ ನ ತಾಲಿಬಾನ್ ಮಾದರಿ ನ್ಯಾಯಾಲಯದ ಆದೇಶಾನುಸಾರ ಟಿ.ಜೆ.ಜೋಸೆಫ್ ಎಂಬ ಕಾಲೇಜು ಉಪನ್ಯಾಸಕನ ಕೈ ಕಡಿದು ಹಾಕಲಾಯಿತು. ಇದು ಪಾಪುಲರ್ ಫ್ರಂಟ್ ರಹಸ್ಯವಾಗಿ ನಡೆಸಿಕೊಂಡು ಬರುತ್ತಿದ್ದ ತಾಲಿಬಾನ್ ಮಾದರಿ ನ್ಯಾಯಾಲಯಗಳನ್ನು ಹೊರಜಗತ್ತಿಗೆ ತೋರಿಸಿಕೊಟ್ಟಿತು. ಇದರ ಬೆನ್ನಲ್ಲೇ ಜುಲೈ 12 ರಂದು ಉತ್ತರ ಕೇರಳದ ಎಡಕ್ಕಾಡ್ ಬಳಿಯ ಪಾಪುಲರ್ ಫ್ರಂಟ್ ನ ಕಚೇರಿಗೆ ಪೊಲೀಸರು ಧಾಳಿ ನಡೆಸಿದರು. ಅಲ್ಲಿ ಪತ್ತೆಯಾಗಿದ್ದು ಹಲವು ನಾಡಬಾಂಬ್ ಗಳು, ಇತರ ಸ್ಪೋಟಕಗಳು, ತಲವಾರುಗಳು, ರಾಡ್, ಸೈಕಲ್ ಚೈನ್...!!! ಪ್ರಗತಿಪರ ಸುಧಾರಕ ಎಂದು ಹೇಳಿಕೊಳ್ಳುತ್ತಿದ್ದ ಪಾಪುಲರ್ ಫ್ರಂಟ್ ಇಷ್ಟೊಂದು ಪ್ರಗತಿಪರ ಎಂದು ತಿಳಿದದ್ದು ಆವಾಗಲೇ..! ನಂತರದ ಧಾಳಿಗಳಲ್ಲಿ 'ಜಿಹಾದ್' ಅನ್ನು ಉತ್ತೇಜಿಸುವ  ಹಲವು ಕರಪತ್ರಗಳು, ಹೊತ್ತಿಗೆಗಳನ್ನು ಪಾಪುಲರ್ ಫ್ರಂಟ್ ನ ಕಚೇರಿಗಳಿಂದ ವಶಪಡಿಸಿಕೊಳ್ಳಲಾಯಿತು. 2010  ರ ಆಗಸ್ಟ್ ನಲ್ಲಿ ಕೇರಳ ಸರಕಾರ ಪಾಪುಲರ್ ಫ್ರಂಟ್ ನ  ಲಷ್ಕರ್ ಎ ತೊಯ್ಬ ಹಾಗು ಹಿಜ್ಬುಲ್ ಮುಜಾಹಿದ್ದೀನ್ ಸಂಬಂಧದ ಬಗ್ಗೆ ಕೇರಳ ನ್ಯಾಯಾಲಯಕ್ಕೆ ಲಿಖಿತ ವರದಿ ನೀಡಿತು.


ಈ ವರ್ಷದ ಆರಂಭದಲ್ಲಿ (2011 ಫೆಬ್ರವರಿ 26 ) ಕೇರಳದ ಕೋಳಿಕ್ಕೋಡ್ ಬಳಿ ಪಾಪುಲರ್ ಫ್ರಂಟ್ ಗೆ ಸೇರಿದ ಅಡಗುತಾಣದಲ್ಲಿ ಬಾಂಬ್ ತಯಾರಿಸುವಾಗ ಅದು ಸ್ಪೋಟಗೊಂಡು PFI ನ 5  ಜನ ಯಮನ ಪಾದ ಸೇರಿದ್ದರು. ಇತ್ತೀಚಿಗೆ ಮೇ ತಿಂಗಳ ಕೊನೆಯಲ್ಲಿ ಪಾಪುಲರ್ ಫ್ರಂಟ್ ನ ಕೇರಳದ ಮಹಮ್ಮದ್ ನಿಯಾಜ್ ಅನ್ನು ಫ್ರಾನ್ಸ್ ನಲ್ಲಿ ಅಲ್ಲಿನ ಪೊಲೀಸರು ಬಂಧಿಸಿದರು. ಈತ ಫ್ರಾನ್ಸ್ ನಲ್ಲಿ ಅಲ್-ಕೈದಾದ ಸಂಪರ್ಕ ಸಾಧಿಸಿ 'ಪಾಪುಲರ್ ಫ್ರಂಟ್ ಆಫ್ ಫ್ರಾನ್ಸ್' ಸ್ಥಾಪನೆಗೆ ಸಿದ್ದತೆ ನಡೆಸಿದ್ದ. ಒಟ್ಟಾರೆಯಾಗಿ ಒಂದೊಂದೇ ಪ್ರದೇಶವನ್ನು ಇಸ್ಲಾಮೀಕರಣಗೊಳಿಸುತ್ತ ಸಾಗುವುದು ಪಾಪುಲರ್ ಫ್ರಂಟ್ ನ ಧ್ಯೇಯ.! 2010  ರ ಜುಲೈನಲ್ಲಿ ಕೇರಳದ ಕಮುನಿಸ್ಟ್ ಸರಕಾರದ ಮುಖ್ಯಮಂತ್ರಿಯಾಗಿದ್ದ ವಿ.ಎಸ್.ಅಚ್ಚುತಾನಂದನ್ ಅವರು ಪಾಪುಲರ್ ಫ್ರಂಟ್ ಅನ್ನು ಉಲ್ಲೇಖಿಸಿ ನೀಡಿದ "ಇನ್ನು 20  ವರ್ಷದಲ್ಲಿ ಕೇರಳವನ್ನು ಮುಸ್ಲಿಂ ಪ್ರಧಾನ ರಾಜ್ಯವನ್ನಾಗಿಸುವ ಹುನ್ನಾರ ನಡೆಯುತ್ತಿದೆ" ಎಂಬ ಬಹಿರಂಗ ಹೇಳಿಕೆ ಇಲ್ಲಿ ಪ್ರಸ್ತುತವೆನಿಸುತ್ತದೆ. 

ಇಷ್ಟೆಲ್ಲಾ ದೇಶವಿರೋಧದ ಚಟುವಟಿಕೆಗಳ ಮಧ್ಯೆಯೂ ಪಾಪುಲರ್ ಫ್ರಂಟ್ ರಾಜಾರೋಷವಾಗಿ ಕಾರ್ಯಾಚರಿಸುತ್ತಿದೆ. ಕಾರಣ ತಮ್ಮನ್ನು ತಾವು ಸೆಕ್ಯುಲರ್ ವಾದಿಗಳೆಂದು ಕರೆಸಿಕೊಳ್ಳುವವರ ಷಂಡ ರಾಜಕಾರಣ! ಒಂದು ಚಿಕ್ಕ ಸ್ಪೋಟದ ಆರೋಪದಡಿ, ಅದು ಸಾಬೀತಾಗದಿದ್ದರು ಕೂಡ 'ಸನಾತನ ಸಂಸ್ಥೆ' ಎಂಬ ಹಿಂದೂ ದೇಶಪ್ರೇಮಿ ಸಂಸ್ಥೆಯನ್ನು ನಿಷೇಧಿಸುವ ಬಗ್ಗೆ ಒತ್ತಡಗಳು ಬರುತ್ತವೆ.. ಹಿಂದೂ ನಾಯಕರುಗಳನ್ನು ಇಲ್ಲದ ಕೇಸುಗಳಲ್ಲಿ ಸಿಲುಕಿಸಿ ಅವರನ್ನು ದಮನಿಸಲಾಗುತ್ತದೆ.. ತನ್ನ ರಕ್ತದ ಕಣ ಕಣದಲ್ಲೂ ಉತ್ಕಟ ದೇಶಪ್ರೇಮವನ್ನು ಹೊಂದಿರುವ, ತನ್ನ ಪ್ರತಿ ಉಸಿರಲ್ಲೂ ವಂದೇ ಮಾತರಂ ಅನ್ನು ಸ್ತುತಿಸುತ್ತಿರುವ ಭಾರತ ಮಾತೆಯ ಹೆಮ್ಮೆಯ ಆರೆಸೆಸ್ (RSS ) ಅನ್ನು ನಿಷೇಧಿಸಲು ಇಲ್ಯಾಸ್ ಮಹಮ್ಮದ್ ತುಂಬೆಯಂತಹ (ರಾಜ್ಯಾಧ್ಯಕ್ಷ, PFI ಕರ್ನಾಟಕ) ದೇಶದ್ರೋಹಿಗಳು ಬೊಬ್ಬೆ ಹಾಕುತ್ತಾರೆ.! ಇಲ್ಯಾಸ್ ಮಹಮ್ಮದ್ ಅವರೇ,  ಭಾರತದ ಎದೆ ಭಗೆಯುವ ನಿಮ್ಮಂತವರಿಗೆ RSS ನ ಹೆಸರು ಎತ್ತುವ ಅರ್ಹತೆಯೂ ಇಲ್ಲ..! 

ಪುಣ್ಯ ಭರತ ಭೂಮಿಯ ಮಣ್ಣಲ್ಲೇ ಬೆಳೆದು ಭರತ ಮಾತೆಗೆ ದ್ರೋಹವೆಸಗುತ್ತಿರುವ ಇಂತಹ ಮತಾಂಧ ಶಕ್ತಿಗಳನ್ನು ಹೀಗೆಯೇ ಬೆಳೆಯಲು ಬಿಟ್ಟರಾಗುವುದೇ..?! ಒಂದು ರಾಷ್ಟ್ರವೆಂದ ಮೇಲೆ ದೇಶ ವಿರೋಧಿ ಚಟುವಟಿಕೆಗಳು ಕೂಡ ಇದ್ದೇ ಇರುತ್ತದೆ. ಆದರೆ ಅದನ್ನು ಮಟ್ಟ ಹಾಕಲು ದೇಶಪ್ರೇಮಿಗಳು ತಯಾರಾಗಬೇಕಷ್ಟೇ.. 'ದುಷ್ಟ ಶಿಕ್ಷಣ - ಶಿಷ್ಟ ರಕ್ಷಣ'ವನ್ನು ಅದಲು ಬದಲು ಮಾಡಿ ಆಡಳಿತ ನಡೆಸುತ್ತಿರುವ ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರಕಾರದಿಂದ ಇದು ಮೊದಲ್ಗೊಳ್ಳಬೇಕು..!

ಧರ್ಮೋ ರಕ್ಷತಿ ರಕ್ಷಿತಃ

Thursday, June 23, 2011

ಪ್ರೀತಿಯೆಂಬ ಕುಂಚದಲಿ..


ತುಂತುರು ನೀರಧಾರೆಯಲಿ ಮೈನೆನೆಯಲು ಸುರಿದಿದೆ ಬಾಷ್ಪ
ಮಳೆನೀರ ನಡುವೆ ಕಣ್ಣೀರು ಕಾಣಸಿಗುವುದೇ..

ನೀನೆಲ್ಲೋ ನಾನೆಲ್ಲೋ ಅಂತರವಿರುವಾಗ 
ನನ್ನೆದೆ ಮಿಡಿತದ ಕೂಗು ಕೇಳಲಾಗುವುದೇ..

ನಿನ್ನ ನಾಮದ ಧ್ಯಾನದಲಿ ಮುಳುಗಿ ಹೋಗಿಹೆನು 
ಕಸುಬಿಲ್ಲದ ಹುಚ್ಚ ನಾನೆಂದುಕೊಳಬೇಡ..

ರವಿವರ್ಮನ ಮೀರಿಸಿ ನಿನ್ನ ಚಿತ್ರಿಸಬಲ್ಲೆ 
ಪ್ರೀತಿಯೆಂಬ ಕುಂಚದಲಿ ನನ್ನ ಹೃದಯದ ಮೇಲೆ..

ಅಗೆದಗೆದು ನೋಡು ನೀ ಹುದುಗಿರೋ ಪ್ರೇಮವನು
ಸಿಂಚನಕೆ ಕಾಯುತ್ತಿದೆ ನಿನ್ನೊಲವು ಕೂಡಿದಾಕ್ಷಣ..

ನನ್ನಂತರಂಗದ ಅನುರಾಗವ ಒಮ್ಮೆ ಕಂಡು ಹೋಗು ನೀ 
ನನ್ನ ಹೃದಯವು ಕಾದು ಅಸ್ತಮಿಸೋ ಮುನ್ನ..


Sunday, May 22, 2011

ಕನವರಿಸದಿರು ಎನ್ನ..

ಅನುರಾಗದ ಅನುಬಂಧಕೆ ನಾನಲ್ಲ ನಲ್ಲನು 
ಅಳಿಸಿ ಬಿಡು ಎನ್ನ ನಿನ್ನ ಮನದಿಂದ..

ನಿನ್ನೊಲವು ಎನಗಲ್ಲ ಆ ಭಾಗ್ಯ ನನಗಿಲ್ಲ
ಕನವರಿಸದಿರು ಎನ್ನ ನೀ ಪ್ರತಿದಿನ..

ಕೈಗೂಡದ ನಿನ್ನೊಲವ ಹಿಸುಕಿ ಕೊಂದು ಬಿಡು
ವಿರಹದಿ ಒಲವು ಅಸುನೀಗೋ ಮುನ್ನ..

ನಲುಗದ ಮಲ್ಲಿಗೆಗೆ ಮುಳ್ಳಿನ ಸಂಗವೇಕೆ
ನೀ ನಲಿಯುತಿರು ಎಂದೂ ನಲುಗದಂತೆ..

ಮರುಗಿ ಬೆರಗಾಗೋ ಮುನ್ನ ಕರಗಿಸು ನಿನ್ನೊಲವ 
ಮುಂದೊಮ್ಮೆ ಹೃದಯ ಭಾರವೆನಿಸದಂತೆ..

ಹಗಲ ಬಾವಿಗೆ ಇರುಳು ಬೀಳುವ ಹಾಗೆ
ಕುರುಡಾಗದಿರು ಇದು ಕುರುಡು ಪ್ರೀತಿಯು..

Tuesday, May 3, 2011

'ಪ್ರೀತಿ ಗೂಡು..'

ನನ್ನ ಮನದ ಬನದ ಪ್ರೀತಿಯ ಗೂಡಿಗೆ
ಕಲ್ಲೊಡೆದವರಾರು...
ನನ್ನ ಒಲವ ಚೆಲುವ ಲೋಕದಲಿ 
ಕಂಪನಗೈದವರಾರು...
ಇದೇನು ಬ್ರಹ್ಮ ನಿನ್ನಾಟ, ಇದೇಕೋ ನಿನ್ನ ಈ ಮಾಟ 
ನಿನ್ನ ಪ್ರೀತಿಯ ಸೃಷ್ಟಿಯ ಪ್ರೀತಿಗೆ ವಿರಾಮ ಸರಿಯೇ...

ಕಾಲಡಿ ಭೂಮಿ ಕುಸಿದು
ಎದೆಯು ನಡುಗಿ ಏನೇನೋ ಆಗಿದೆ
ನೀನಿರದ ಬಾಳು ಬಾಳೋ ಶಕ್ತಿ
ನನಗೆಂದೂ ಇಲ್ಲದೇ...
ನೀ ನನ್ನ ಪ್ರಾಣ ನಾನೆಂದು ಬದುಕೆನು ಪ್ರಾಣವೇ ಇಲ್ಲದೇ...
ಕನಿಕರಿಸೆ ಹೇ ಒಲವೇ ದೀನ ನಾ ನಿನ್ನ ಅಧೀನ...

ಜ್ವಾಲಾಮುಖಿ ಬಾಯ್ದೆರೆದು ನನ್ನ ನುಂಗಿ ಹೋದರೂ
ಶಿಖರಗಳೇ ಧರೆಗಿಳಿದು ನನ್ನ ಮುಚ್ಚಿ ಬಿಟ್ಟರೂ
ನಿನಗಾಗೇ ಮಿಡಿವುದು ಹೃದಯ ಅನವರತ ಒಲವೇ...
ನನ್ನ ಹೃದಯ ಸೀಳಿ ನೋಡು ಒಮ್ಮೆ ನಿನ್ನೇ ನೀ ಕಾಣುವೇ...
ನನ್ನೆದೆಯ ಮೊದಲ ತೊದಲ ಪ್ರೀತಿಯನು 
ನೀ ಕೈ ಹಿಡಿದು ಉಳಿಸೇ......................!

'ಸುಳ್ಳಾಡುವೆಯೇಕೆ ನೀನಲ್ಲವೇ ಆಶ್ರಯದಾತ..'

ಪಾಕ್ ರಾಜಧಾನಿ ಇಸ್ಲಾಮಾಬಾದ್ ನಿಂದ ಕೇವಲ 60  km ದೂರದಲ್ಲಿ ಕುಖ್ಯಾತ ಭಯೋತ್ಪಾದಕ ಒಸಮಾ ಬಿನ್ ಲಾಡೆನ್ ಹತನಾದ ಬೆನ್ನಲ್ಲೇ ಕಳೆದ 10  ವರ್ಷಗಳಿಂದ ಲಾಡೆನ್ ನಮ್ಮ ಬಳಿ ಇಲ್ಲ ಎಂದು ವಾದಿಸುತ್ತಲೇ ಬಂದಿದ್ದ ಪಾಕ್ ತೆಪ್ಪಗಾಗಿದೆ. ಈ ಹತ್ಯೆ ೨೬/೧೧ ರ ಮುಂಬೈ ದಾಳಿಯ ಸಂಚುಕೋರರು ಪಾಕ್ ನಲ್ಲೆ ಇದ್ದಾರೆ ಎನ್ನುವ ಭಾರತದ ವಾದಕ್ಕೂ ಪುಷ್ಠಿ ನೀಡಿದೆ. ವಾರಕ್ಕೆರಡರಂತೆ ತನ್ನದೇ ನೆಲದಲ್ಲಿ ಬಾಂಬ್ ಸ್ಪೋಟವಾಗಿ ತಾನೇ ಬೆಳೆಸಿದ ಭಯೋತ್ಪಾದನೆಗೆ ಈಗ ಸ್ವತಃ ತಾನೇ ಬಲಿಯಾಗುತ್ತಿದ್ದರೂ ಇನ್ನೂ ಪಾಕ್ ತನ್ನಲ್ಲಿರುವ ಭಯೋತ್ಪಾದಕರನ್ನು ರಕ್ಷಿಸಲು ಹವಣಿಸುತ್ತಿರುವುದು ವಿಪರ್ಯಾಸ..!

ಲಾಡೆನ್ ನ ಅಡಗುತಾಣವಿದ್ದುದು ಪಾಕ್ ಸೇನಾ ನೆಲೆಯ ಆವರಣಕ್ಕೆ ತಾಗಿಕೊಂಡೇ ಎಂಬುದು ಮತ್ತೊಂದು ಆಶ್ಚರ್ಯಕರ ಸಂಗತಿ. ಅದು ಪಾಕ್ ರಾಜಧಾನಿ ಇಸ್ಲಾಮಾಬಾದ್ ನಿಂದ ಕೇವಲ 60 km ದೂರದಲ್ಲಿ..! ಈ ಅಂಶಗಳನ್ನು ಗಮನಿಸುವಾಗ ಪಾಕ್ ತಾನಾಗಿಯೇ ಲಾಡೆನ್ ಗೆ ಆಶ್ರಯ ಕಲ್ಪಿಸಿತ್ತೇ ಎಂದು ಅನುಮಾನ ಮೂಡುವುದು ಸಹಜ. ಲಾಡೆನ್ ತನ್ನ ಬಳಿ ಇಲ್ಲ ಎಂದೇ ಹೇಳಿಕೊಂಡು ಬರುತ್ತಿದ್ದ ಪಾಕ್ ಈಗೇನು ಹೇಳುತ್ತದೆ..? ಲಾಡೆನ್ ಸಾವಿನ ನಂತರ ಒಂದೇ ಒಂದು ಹೇಳಿಕೆ ನೀಡದ ಪಾಕ್ ಅಧ್ಯಕ್ಷ ಆಸೀಫ್ ಆಲಿ ಜರ್ದಾರಿಯ ಮೌನದ ಅರ್ಥವಾದರೂ ಏನು..?

1993 ರ ಮುಂಬೈ ಸರಣಿ ಸ್ಪೋಟದ ರೂವಾರಿ ದಾವೂದ್ ಇಬ್ರಾಹಿಮ್, 2001 ರ ಸಂಸತ್ ದಾಳಿ ಸೂತ್ರದಾರ ಜೈಶ್ ನ ಸ್ಥಾಪಕ ಮಸೂದ್ ಅಜರ್, 2008 ರ ಮುಂಬೈ ದಾಳಿಯ ಸಂಚುಕೋರರಾದ ಲಷ್ಕರ್ ಈ ತೊಇಬಾದ  ಹಫಿಜ್ ಸಯೀದ್ ಹಾಗು ಸಾಜಿದ್ ಮೀರ್ ಪಾಕ್ ನಲ್ಲೇ ಇದ್ದಾರೆ ಎನ್ನುವುದಕ್ಕೆ ಭಾರತ ಖಚಿತವಾದ ಪುರಾವೆಗಳನ್ನು ನೀಡಿದ್ದರೂ ಪಾಕ್ ಮಾತ್ರ ಬಾಲಿಶವಾಗಿ ಹೆಣ್ಣಿಗನಂತೆ ವರ್ತಿಸುತ್ತಿದೆ.

ಅಮೇರಿಕಾದ Counter Terrorism ನ ಖಚಿತ ಮೂಲಗಳ ಪ್ರಕಾರ ಪಾಕ್ ನಲ್ಲಿ ಅಡಗಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕ ನಾಯಕರುಗಳ ಪಟ್ಟಿಯತ್ತ ಒಮ್ಮೆ ಕಣ್ಣು ಹಾಯಿಸಿ.. ಪಾಕ್ ಭಯೋತ್ಪಾದಕರ ಖಣಜ ಎನ್ನುವುದಕ್ಕೆ ಇದೇ ಸಾಕ್ಷಿ..!
* ಲಾಡೆನ್ ನಂತರ ಅಲ್ ಕೈದಾದ ನೇತೃತ್ವ ವಹಿಸಿರುವ ಆಯ್ಮಾನ್ ಅಲ್ ಜವಾಹಿರಿ.
* ಜೈಶ್ ಎ ಮೊಹಮ್ಮದ್ ನ ಸ್ಥಾಪಕ ಮೌಲಾನ ಮಸೂದ್ ಅಜರ್.
* ಭೂಗತ ಪಾತಕಿ, ಡ್ರಗ್ ಸ್ಮಗ್ಲರ್, ಮುಸ್ಲಿಂ ಮಾಫಿಯಾ ದೊರೆ ದಾವೂದ್ ಇಬ್ರಾಹಿಮ್.
* ಭೂಗತ ಪಾತಕಿ ಮುಶ್ತಾಕ್ ಟೈಗೆರ್ ಮೆಮೊನ್.
* ಹರ್ಕತ್ ಉಲ್ ಮುಜಾಹಿದ್ದೀನ್ ನ ನಾಯಕ ಮೌಲಾನ ಫಾಜ್ಲೀರ್ ರೆಹಮಾನ್.
* ಹುಜಿ (ಹರ್ಕತ್ ಉಲ್ ಜಿಹಾದ್ ಇಸ್ಲಾಮಿ) ಯ ಮುಖ್ಯ ಕಮಾಂಡರ್ ಕ್ವಾರಿ ಸೈಫುಲ್ಲ ಅಖ್ತರ್.
* ತಾಲಿಬಾನ್ ಮುಖ್ಯಸ್ಥ ಮುಲ್ಲಾ ಒಮರ್.
* ಜಮಿಎತ್ ಅಹ್ಲೇ ಹದಿಸ್ ನ ಮುಲ್ಲಾ ಸಾಜಿದ್ ಮಿರ್.
* ಮರ್ಕಜ್ ಉದ್ ದವ (MUD) ದ ಅಮೀರ್ ಹಮ್ಜ.
* ಹುರ್ರಿಯತ್ ನ ಗುಲಾಂ ಮೊಹಮ್ಮದ್ ಸಫಿ.
* ಜಮಿಯತ್  ಉಲ್ ಮುಜಾಹಿದ್ದೀನ್ ನ ಅಮೀರ್ ಅಬ್ದುಲ್ಲ.
* ತೆಹರಿಕ್ ಉಲ್ ಮುಜಾಹಿದ್ದೀನ್ ನ ಶೇಖ್ ಜಮಿತುರ್ ರೆಹಮಾನ್.
* ಮುತ್ತಹಿದ ಮಜಿಸ್ ಎ ಅಮಲ್ (MMA) ನ ಮೌಲಾನ ಮೊಹಮ್ಮದ್ ಇಶಾಕ್.
* ಜಮಾತ್ ಎ ಇಸ್ಲಾಮಿ ಯ ಕಾಜಿ ಹುಸ್ಸೈನ್ ಅಹ್ಮೆದ್.
* ISI ನ ಮಾಜಿ ಮುಖ್ಯಸ್ಥ, ಒಸಮಾ ಬಿನ್ ಲಾಡೆನ್ ನ ನಿಕಟವರ್ತಿ ಹಮಿದ್ ಗುಲ್.
* ಜಿಹಾದ್ ಚಟುವಟಿಕೆಗೆ ನೆರವೀಯುತ್ತಿರುವ ಅಲ್ಲಾ ಬುಕ್ಶ್ ಬ್ರೋಹಿ.
* ಎಂಎಂಎ ಇಸ್ಲಾಮಿಸ್ಟ್ ನಾಯಕ ಮೌಲಾನ ಸಾಮಿ ಉಲ್ ಹಕ್.
* ತೆಹ್ರೀಕ್ ನಿಫಾಜ್ ಎ ಶರಿಯತ್  ಮೊಹಮ್ಮದ್ ನ ಮುಖಸ್ಥ ಮೌಲಾನ ಮೊಹಮ್ಮದ್ ಆಲಂ.
* ಜಮ್ಮತ್ ಉಲೇಮ ಎ ಇಸ್ಲಾಂ ಇದರ ಪ್ರಧಾನ ಸೆಕ್ರೆಟರಿ ಜನರಲ್ ಹಫಿಜ್ ಹುಸೇನ್ ಅಹ್ಮದ್.
* ಜಮಾತ್ ಉಲೇಮ ಎ ಇಸ್ಲಾಮ್ಮ್ ನ ದಂಡನಾಯಕ ಸಮಿಯುಲ್ ಹಕ್.
* ಜಮಾತ್ ಎ ಇಸ್ಲಾಮಿಯ ಮುಜ್ಜ್ಯಫಾರಾಬಾದ್ ಕಮಾಂಡರ್ ಶೇಕ್ ಅಕುಲರ್ ರೆಹಮಾನ್.
* ಸುನ್ನಿ ಗ್ರೂಪ್ ಸಿಪಃ ಎ ಸಾಹಬ ಪಾಕಿಸ್ತಾನ್ ನ ಮುಖ್ಯಸ್ಥ ಹಾಗು ಪಾಕ್ ಅಸೆಂಬ್ಲಿಯ ಸದಸ್ಯ ಮೌಲಾನ ಅಜಮ್ ತಾರಿಕ್.
* ಲಷ್ಕರ್ ಎ ತೊಇಬದ ಪಂಜಾಬ್ ಪ್ರಾಂತ್ಯದ ನಾಯಕ ಹಫಿಜ್ ಅಬ್ದುಲ್ ಸಲಾಂ.

ಇವು ಭಯೋತ್ಪಾದಕ ಸಂಘಟನೆಗಳ ನಾಯಕರುಗಳ ಹೆಸರುಗಳಷ್ಟೇ..! ಇನ್ನೂ ಗಮನಕ್ಕೆ ಬರದ ಮರಿ ನಾಯಕರುಗಳು ಪಾಕಿಸ್ತಾನದ ಗಲ್ಲಿ ಗಲ್ಲಿಗಳಲ್ಲಿ ರಾಜಾರೋಷವಾಗಿ ತಿರುಗಾಡಿಕೊಂಡಿದ್ದಾರೆ. ಅವರಲ್ಲಿ ಕೆಲವರು ಇತ್ತೀಚಿಗೆ ಪಾಕ್ ನ ಮಂತ್ರಿಗಳ ಜತೆ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದನ್ನು ನೀವು ಮಾಧ್ಯಮಗಳಲ್ಲಿ ನೋಡಿರಬಹುದು. ಇಷ್ಟೆಲ್ಲಾ ಇರುವಾಗ ಲಾಡೆನ್ ಹತ್ಯೆಯ ನಂತರ ಪಾಕ್ ವಿದೇಶಾಂಗ ವಕ್ತಾರೆ ತಹ್ಮೀನ ಜುನೆಜ್ ರ "...ನಮ್ಮ ನೆಲದಲ್ಲಿ ಉಗ್ರ ಚಟುವಟಿಕೆಗಳಿಗೆ ಆಸ್ಪದವಿಲ್ಲ" ಎಂಬ ಹೇಳಿಕೆ ಹಾಸ್ಯಾಸ್ಪದ ಎನಿಸದೇ..? ಇನ್ನಾದರೂ ಪಾಕ್ ಗೆ ಬುದ್ದಿ ಬಂದು ಭಯೋತ್ಪಾದನೆ ವಿರುದ್ದ ಹೋರಾಟ ನಿರೀಕ್ಷಿಸಬಹುದೇ..? ಅಥವಾ ಅಮೆರಿಕದಿಂದ Counter Terrorism ನಡಿ ದಾಳಿಗೊಳಗಾಗಲು ಇಚ್ಚೆಯೇ..??!


ಕೊನೆ ಕುಹಕ : 
ಭಾರತದ ಗೃಹ ಸಚಿವ ಪಿ. ಚಿದಂಬರಂ ಭಾರತಕ್ಕೆ ಬೇಕಾಗಿರುವ 1993 / 2001 / 2008 ದಾಳಿಯ ಪಾತಕಿಗಳನ್ನು ಹಸ್ತಾಂತರಿಸುವಂತೆ ಪಾಕ್ ಗೆ ಕೇಳಿಕೊಂಡಿದ್ದಾರೆ. ಖಂಡಿತ ಆ ಪಾತಕಿಗಳನ್ನು ಭಾರತದಲ್ಲಿಯೇ ವಿಚಾರಣೆ ನಡೆಸಿ ಶಿಕ್ಷೆಗೊಳಪಡಿಸಬೇಕು. ಆದರೆ ಶಿಕ್ಷೆ ಜಾರಿಯಾಗಲು ಮುಸ್ಲಿಂ ಕೋಮುವಾದಿ ಕಾಂಗ್ರೆಸ್ ಸರ್ಕಾರ ಒಪ್ಪುವುದೇ..? ಭಾರತ ಬೆಚ್ಚಿ ಬೀಳುವಂತೆ ಮಾಡಿದ್ದ  ಡಿಸೆಂಬರ್ ೧೩, ೨೦೦೧ರ ಸಂಸತ್ ದಾಳಿಯ ಆರೋಪಿ ಆಫ್ಜ್ಯಲ್ ಗುರು, ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ ೨೬/೧೧/೨೦೦೮ ರ ಮುಂಬೈ ದಾಳಿಯ ಪಾತಕಿ ಕಸಬ್ ಗೆ ನ್ಯಾಯಾಲಯದಲ್ಲಿ ಗಲ್ಲು ಜಾರಿಯಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಕಾಂಗ್ರೆಸ್ ಹಿಂದೇಟು ಹಾಕುತ್ತಲೇ ಬಂದಿದೆ. ಆ ಇಬ್ಬರೂ ಯಾವುದೇ ಶ್ರೀಮಂತನಿಗೆ ಕಡಿಮೆಯಿಲ್ಲದಂತೆ ಜೈಲಿನಲ್ಲಿಯೇ ರಾಜಾತಿಥ್ಯ ಪಡೆಯುತ್ತಿದ್ದಾರೆ. ಇನ್ನೂ ಭವಿಷ್ಯದಲ್ಲಿ ಪಾಕ್ ಭಾರತದ ಮೋಸ್ಟ್ ವಾಂಟೆಡ್ ಗಳನ್ನು ಹಸ್ತಾಂತರಿಸಿದರೂ ಅವರಿಗೂ ಇದೇ ಆತಿಥ್ಯ ಸಿಗಲಿದೆ. ಯಾರಿಗುಂಟು ಯಾರಿಗಿಲ್ಲ...! ಆ ಪಾತಕಿಗಳಿಗೆ ಪಾಕಿಸ್ತಾನದ ಗುಡ್ಡಗಾಡುಗಳಲ್ಲಿ ತಲೆ ತಪ್ಪಿಸಿ ಅಲೆಯೋ ಬದಲು ತಮ್ಮ ಶತ್ರು ರಾಷ್ಟ್ರದ ಜೈಲಿನಲ್ಲಿ ರಾಜಾತಿಥ್ಯ ಪಡೆಯುವುದೇ ಮೇಲು ಎಂದು ಅನಿಸದಿರದು..!!!